ಮನೆ ಅಪರಾಧ ಬಾಲಕಿ ಅತ್ಯಾಚಾರ- ಕೊಲೆ ಪ್ರಕರಣ: ‌ಆರೋಪಿ ವಿರುದ್ದ ಶೀಘ್ರ ಚಾರ್ಜ್ ಶೀಟ್

ಬಾಲಕಿ ಅತ್ಯಾಚಾರ- ಕೊಲೆ ಪ್ರಕರಣ: ‌ಆರೋಪಿ ವಿರುದ್ದ ಶೀಘ್ರ ಚಾರ್ಜ್ ಶೀಟ್

0


ಮಂಡ್ಯ(Mandya): ಬಾಲಕಿ ಮೇಲೆ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಆರೋಪಿ ವಿರುದ್ದ ಮುಂದಿನ‌ ಹತ್ತು ದಿನಗಳಲ್ಲಿ ನ್ಯಾಯಾಲಯಕ್ಕೆ ದೋಷಾರೋಪಣಾ‌ ಪಟ್ಟಿ ಸಲ್ಲಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಮತ್ತು ಅಬಕಾರಿ ಸಚಿವ ಕೆ.ಗೋಪಾಲಯ್ಯ ಹೇಳಿದ್ದಾರೆ.
‌ಮಳವಳ್ಳಿಯ ಮೈಸೂರು ರಸ್ತೆಯಲ್ಲಿರುವ ಮೃತ ಬಾಲಕಿಯ ಮನೆಗೆ ಇಂದು ಭೇಟಿ ನೀಡಿ ಸಾಂತ್ವನ ಹೇಳಿದ‌ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಅತ್ಯಾಚಾರಿ ಆರೋಪಿಗೆ ಕಠಿಣ ಶಿಕ್ಷೆ ಆಗುತ್ತದೆ
ಈ ಪ್ರಕರಣವನ್ನ ಶೀಘ್ರಗತಿ ನ್ಯಾಯಾಲಯಕ್ಕೆ ವಹಿಸಲು ಕ್ರಮಕೈಗೊಳ್ಳುವುದಾಗಿ ತಿಳಿಸಿದರು.
ಈ ಪ್ರಕರಣ ಸಂಬಂಧ ಈಗಾಗಲೇ ಸಿಎಂ ಜೊತೆ ಮಾತುಕತೆ ನಡೆಸಲಾಗಿದ್ದು, ನೊಂದ‌ ಕುಟುಂಬಕ್ಕೆ ನ್ಯಾಯ ಕೊಡಿಸಲಾಗುವುದು. ಮುಂದಿನ ದಿನಗಳಲ್ಲಿ ಬಾಲಕಿ ಕುಟುಂಬಕ್ಕೆ ಪರಿಹಾರ ಕೊಡಿಸುತ್ತೇವೆ.ಆದರೆ ಎಷ್ಟೇ ಪರಿಹಾರ ಕೊಟ್ಟರೂ ಬಾಲಕಿ ವಾಪಸ್ಸು ತರಲು ಆಗುವುದಿಲ್ಲ. ನಮಗೂ ಅತೀವ ಆ ದುಖಃ ಇದೆ ಎಂದು ಹೇಳಿದರು.
ಹಾಸ‌ನದಲ್ಲಿ ಧಾರ್ಮಿಕ ಕಾರ್ಯಕ್ರಮ ‌ಇದ್ದಕಾರಣದಿಂದ‌ ಇಲ್ಲಿಗೆ ಬರುವುದು ತಡವಾಯಿತು. ಪ್ರಕರಣದ ಬಗ್ಗೆ ಎಲ್ಲ ಆಯಾಮಗಳಿಂದಲೂ ತನಿಖೆ ಮಾಡುವಂತೆ ಸೂಚನೆ ನೀಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವಥ್ ನಾರಾಯಣ ಹಾಗೂ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು

ಹಿಂದಿನ ಲೇಖನಒಣ ಶುಂಠಿ ನಮ್ಮ ಆರೋಗ್ಯದ ಬಂಧು
ಮುಂದಿನ ಲೇಖನಕನ್ನಡದ `ಶಿವಮ್ಮ’ ಚಿತ್ರಕ್ಕೆ ಬೂಸಾನ್‌ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಪ್ರಶಸ್ತಿ