ಮನೆ ಅಪರಾಧ ಎಂಎಲ್​ಸಿ ಶರವಣ ಮಾಲೀಕತ್ವದ ಸಾಯಿ ಗೋಲ್ಡ್ ಪ್ಯಾಲೇಸ್ ​ನ ಚಿನ್ನ ಕಳವು

ಎಂಎಲ್​ಸಿ ಶರವಣ ಮಾಲೀಕತ್ವದ ಸಾಯಿ ಗೋಲ್ಡ್ ಪ್ಯಾಲೇಸ್ ​ನ ಚಿನ್ನ ಕಳವು

0

ಬೆಂಗಳೂರು: ವಿಧಾನ ಪರಿಷತ್​ ಸದಸ್ಯ ಶರವಣ ಮಾಲೀಕತ್ವದ ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್ ​ನ ಚಿನ್ನ ಕಳುವಾಗಿದೆ. ಈ ಸಂಬಂಧ ಬಸವನಗುಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Join Our Whatsapp Group

ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್ ಸಂಸ್ಥೆಯಲ್ಲಿ ಮ್ಯಾನೇಜರ್ ಭೀಮರಾಜು ನೌಕರ ಭರತ್ ಕುಮಾರ್ ರಾವಲ್ ಎಂಬುವವರಿಗೆ ಸಂಸ್ಥೆಯ ಪರವಾಗಿ ಚಿನ್ನಾಭರಣಗಳಿಗೆ ಹಾಲ್ ಮಾರ್ಕ್​ ಮಾಡಿಸಿಕೊಂಡು ಬರಲು ಜನವರಿ 14 ರಂದು ಸಂಜೆ 05:30ರ ಸುಮಾರಿಗೆ 1 ಕೆಜಿ 249 ಗ್ರಾಂ ಚಿನ್ನದ ಬಳೆಗಳು (22 ಕ್ಯಾರೇಟ್) ಕೊಟ್ಟು ನಗರತ್ ಪೇಟೆಯಲ್ಲಿನ ಭರತ್ ಚಾಟಡ್​ರವರ ಮಾಲೀಕತ್ವದ ಕೋನಾರ್ಕ್ ಹಾಲ್ ಮಾರ್ಕಿಂಗ್ ಮತ್ತು ಆಸೆಯಿಂಗ್ ಸೆಂಟರ್​ಗೆ ಕಳುಹಿಸಿದ್ದಾರೆ.

ಭರತ್ ಕುಮಾರ್ ಬಂಗಾರದ ಬಳೆಗಳನ್ನು ಭರತ್ ಚಾಟಡ್​ಗೆ ಕೊಟ್ಟಿದ್ದು, ಪ್ಯಾಕಿಂಗ್ ಲಿಸ್ಟ್ ಎಂಬ ಹೆಸರಿನಲ್ಲಿ ರಸೀದಿ ನೀಡಿದ್ದಾರೆ. ಮರುದಿನ ಜನವರಿ 15 ರಂದು ಭರತ್ ಚಾಟಡ್​ ಬಳಿ ಹೋಗಿ ಹಾಲ್ ಮಾರ್ಕಿಂಗ್​ಗಾಗಿ ಕೊಟ್ಟಿದ್ದ ಚಿನ್ನದ ಬಳೆಗಳನ್ನು ವಾಪಸ್ ನೀಡಿ ಎಂದು ಮ್ಯಾನೇಜರ್​ ಭೀಮರಾಜು ಕೇಳಿದ್ದಾರೆ.

ಆಗ, ಭರತ್​ ಚಾವಡ್​​ “ನೀವು ನೀಡಿದ್ದ ಎಲ್ಲ ಚಿನ್ನದ ಬಳೆಗಳನ್ನು ನಮ್ಮ ಅಂಗಡಿಯಲ್ಲಿ ಕೆಲಸ ಮಾಡುವ ಕೆಲಸಗಾರ ಕಳ್ಳತನ ಮಾಡಿಕೊಂಡು ಹೋಗಿದ್ದಾನೆ” ಎಂದು ಹೇಳಿದ್ದಾರೆ. ಈ ಸಂಬಂಧ ಹಾಲ್ ಮಾರ್ಕ್ ಸೆಂಟರ್ ಮಾಲೀಕ ಭರತ್ ಚಟಡ್ ವಿರುದ್ಧ ದೂರು ದಾಖಲಿಸಿದ್ದಾರೆ.