ಮನೆ ಅಪರಾಧ ಗೂಡ್ಸ್ ವಾಹನ ಡಿಕ್ಕಿ: ವ್ಯಕ್ತಿ ಸಾವು

ಗೂಡ್ಸ್ ವಾಹನ ಡಿಕ್ಕಿ: ವ್ಯಕ್ತಿ ಸಾವು

0

ಮದ್ದೂರು: ಚಲಿಸುತ್ತಿದ್ದ ದ್ವಿಚಕ್ರ ವಾಹನಕ್ಕೆ ಗೂಡ್ಸ್ ವಾಹನ ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೋರ್ವ ಮೃತಪಟ್ಟು ಮತ್ತೋರ್ವ ಗಾಯಗೊಂಡಿರುವ ಘಟನೆ ತಾಲೂಕಿನ ಗೆಜ್ಜಲಗೆರೆ ಕಾಲೋನಿ‌ ‌ ಮೈಸೂರು-ಬೆಂಗಳೂರು ಹೆದ್ದಾರಿಯ ಸರ್ವಿಸ್ ರಸ್ತೆಯಲ್ಲಿ ಜರುಗಿದೆ

ತಾಲೂಕಿನ ರುದ್ರಾಕ್ಷಿ ಪುರ ಗ್ರಾಮದ  ಮಂಜು ಅವರ ಪುತ್ರ ಅಜಯ್ ಕುಮಾರ್  (25)ಮೃತಪಟ್ಟ ವ್ಯಕ್ತಿಯಾಗಿದ್ದು, ಹಿಂಬದಿ ಸವಾರ‌  ಮಂಡ್ಯ ನಗರದ ಮುಸ್ಲಿಂ ಬ್ಲಾಕ್ ನಿವಾಸಿ ‌ಎಜಸ್‌ಖಾನ್‌  ರವರ ಪುತ್ರ ಇಫ್ರಾನ್ ಖಾನ್‌‌‌  ತೀವ್ರವಾಗಿ ಗಾಯಗೊಂಡ ವ್ಯಕ್ತಿಯಾಗಿದ್ದು ಜಿಲ್ಲಾ ಆಸ್ಪತ್ರೆಗೆ ಚಿಕಿತ್ಸೆಗೆಂದು ದಾಖಲಾಗಿದ್ದಾನೆ‌‌. ‌‌‌‌            ‌

 ಮೃತ ಅಜಯ್ ಕುಮಾರ್ ಹಾಗೂ ಸ್ನೇಹಿತ ಇಫ್ರಾನ್ ಖಾನ್‌ ‌   ಮಂಡ್ಯದಿಂದ ಮದ್ದೂರು ಕಡೆಗೆ ತಮ್ಮ ದ್ವಿಚಕ್ರ ವಾಹನದಲ್ಲಿ ಆಗಮಿಸುತ್ತಿದ್ದ ವೇಳೆ ‌ ಮದ್ದೂರಿನಿಂದ ಎಳನೀರು ತುಂಬಿಕೊಂಡು ‌ ಮಂಡ್ಯ ಮಾರ್ಗದತ್ತ ಆಗಮಿಸುತ್ತಿದ್ದ ವೇಳೆ ದ್ವಿಚಕ್ರ ವಾಹನಕ್ಕೆ ಡಿ ಕ್ಕಿ ಹೊಡೆದ ಪರಿಣಾಮ   ಈ ದುರ್ಘಟನೆ ಸಂಭವಿಸಿದೆ‌ .

ಡಿಕ್ಕಿ ಹೊಡೆದ ರಭಸಕ್ಕೆ‌ ಅಜಯ್ ಕುಮಾರ್ ಸ್ಥಳದಲ್ಲೇ ಮೃತಪಟ್ಟಿದ್ದು ಹಿಂಬದಿ ಸವಾರ ಇಫ್ರನ್ ಖಾನ್ ತೀವ್ರವಾಗಿ ಗಾಯಗೊಂಡ ಹಿನ್ನೆಲೆಯಲ್ಲಿ ತಾಲೂಕು ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಪತ್ರೆಗೆ ದಾಖಲಿಸಲಾಗಿದೆ.

ಈ ಸಂಬಂಧ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಿಂದಿನ ಲೇಖನನವ ಜೋಡಿಗಳ ನವ ಜೀವನಕ್ಕೆ ಶುಭವಾಗಲಿ: ದರ್ಶನ್ ದ್ರುವನಾರಾಯಣ್
ಮುಂದಿನ ಲೇಖನIISc: 01 ಹಣಕಾಸು ನಿಯಂತ್ರಕ ಹುದ್ದೆಗೆ ಅರ್ಜಿ ಸಲ್ಲಿಸಿ