ಮನೆ ರಾಜ್ಯ ಗುಂಡ್ಲುಪೇಟೆ: ವಿದ್ಯುತ್ ತಂತಿ ತಗುಲಿ ಹೆಣ್ಣಾನೆ ನಿತ್ರಾಣ

ಗುಂಡ್ಲುಪೇಟೆ: ವಿದ್ಯುತ್ ತಂತಿ ತಗುಲಿ ಹೆಣ್ಣಾನೆ ನಿತ್ರಾಣ

0

ಗುಂಡ್ಲುಪೇಟೆ: ವಿದ್ಯುತ್ ತಂತಿ ತಗುಲಿ ಹೆಣ್ಣಾನೆಯೊಂದು ನಿತ್ರಾಣಗೊಂಡಿರುವ ಘಟನೆ ತಾಲೂಕಿನ ಬಂಡೀಪುರ ಅಭಯಾರಣ್ಯ ವ್ಯಾಪ್ತಿಯ ಓಂಕಾರ ಅರಣ್ಯ ವಲಯ ಪ್ರದೇಶದ ಬರಗಿ ಹತ್ತಿರದ ನಾಗಪಟ್ಟಣದ ಬಳಿ ಪುತ್ತನಪುರ ರಾಜು ಎಂಬವವರಿಗೆ ಸೇರಿದ ಜಮೀನಿನಲ್ಲಿ ಘಟನೆ ನಡೆದಿದೆ.

ಹೆಣ್ಣಾನೆಯು ಮೇವು ಅರಸಿ ರಾಜು ಅವರ ಜಮೀನಿನ ಮಾರ್ಗವಾಗಿ ಬರುತ್ತಿದ್ದ ವೇಳೆ ಜಮೀನಿನಲ್ಲಿ ಅಳವಡಿಕೆ ಮಾಡಿದ್ದ ತಂತಿ ಬೇಲಿಗೆ ಸಿಲುಕಿ ವಿದ್ಯುತ್ ಸ್ಫರ್ಶವಾದ ಕಾರಣ ನಿತ್ರಾಣಗೊಂಡಿದೆ ಎನ್ನಲಾಗಿದೆ.

ಮಾಹಿತಿ ದೊರೆತು ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದು,  ಅರಣ್ಯ ಇಲಾಖೆಯ ಪಶು ವೈದ್ಯಾಧಿಕಾರಿ ವಾಸೀಂ ಮಿರ್ಜಾ ಅವರನ್ನು ಕರೆಸಿ ಚಿಕಿತ್ಸೆ ನೀಡುತ್ತಿದ್ದಾರೆ.

ಆನೆಗೆ ತೀವ್ರತರವಾಗಿ ವಿದ್ಯುತ್ ಸ್ಫರ್ಶವಾಗಿದೆ. ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದೆ ಎಂದು ಅರಣ್ಯ ಇಲಾಖೆ ಮೂಲಗಳು ಮಾಹಿತಿ ನೀಡಿವೆ.

ಹಿಂದಿನ ಲೇಖನಮೈಸೂರು: ಕೊರಗಜ್ಜ ದೇವಸ್ಥಾನದ ಹಣಕ್ಕಾಗಿ ಅರ್ಚಕ , ಟ್ರಸ್ಟ್ ಅಧ್ಯಕ್ಷನ ನಡುವೆ ಕಿತ್ತಾಟ
ಮುಂದಿನ ಲೇಖನಅಭಿವೃದ್ಧಿಯೇ ಚುನಾವಣೆಯಲ್ಲಿ ನಮ್ಮ ಮುಖ್ಯ ಕಾರ್ಯಸೂಚಿ: ಬಿ.ವೈ.ವಿಜಯೇಂದ್ರ