ಮನೆ ರಾಜಕೀಯ ಸಂಸದ ವಿ.ಶ್ರೀನಿವಾಸಪ್ರಸಾದ್ ಪಕ್ಷದಿಂದ ಹಣ ಪಡೆದಿಲ್ಲವೇ ?: ಎ.ಎಚ್.ವಿಶ್ವನಾಥ್ ಪ್ರಶ್ನೆ

ಸಂಸದ ವಿ.ಶ್ರೀನಿವಾಸಪ್ರಸಾದ್ ಪಕ್ಷದಿಂದ ಹಣ ಪಡೆದಿಲ್ಲವೇ ?: ಎ.ಎಚ್.ವಿಶ್ವನಾಥ್ ಪ್ರಶ್ನೆ

0

ಮೈಸೂರು(Mysuru): ಸಂಸದ ವಿ.ಶ್ರೀನಿವಾಸಪ್ರಸಾದ್ ಅವರು ಚುನಾವಣೆ ಸಂದರ್ಭದಲ್ಲಿ ಪಕ್ಷದಿಂದ ಹಣ ಪಡೆದಿಲ್ಲವೇ? ಸುಮ್ಮನೆ ಪೆದ್ದು ಪೆದ್ದಾಗಿ ಮಾತನಾಡುವುದನ್ನೆಲ್ಲಾ ಒಪ್ಪುವುದಿಲ್ಲ ಎಂದು ಬಿಜೆಪಿಯ ವಿಧಾನಪರಿಷತ್ ಸದಸ್ಯ ಎ.ಎಚ್.ವಿಶ್ವನಾಥ್ ತಿರುಗೇಟು ನೀಡಿದರು.

ಹುಣಸೂರು ಉಪ ಚುನಾವಣೆಗೆಂದು ಬಿಜೆಪಿಯವರು ಕೊಟ್ಟಿದ್ದ ₹ 15 ಕೋಟಿಯಲ್ಲಿ ₹ 10 ಕೋಟಿಯನ್ನು ವಿಶ್ವನಾಥ್ ಜೇಬಿಗಿಳಿಸಿಕೊಂಡ ಎಂಬ ಶ್ರೀನಿವಾಸಪ್ರಸಾದ್ ಹೇಳಿಕೆಗೆ ಇಲ್ಲಿ ಶನಿವಾರ ತೀಕ್ಷ್ಣ ಪ್ರತಿಕ್ರಿಯೆ ನೀಡಿದರು.

ಚುನಾವಣೆಯಲ್ಲಿ ಅಭ್ಯರ್ಥಿಗಳಿಗೆ ಯಾವುದೇ ಪಕ್ಷ ಹಣ ಕೊಡುವುದು–ತೆಗೆದುಕೊಳ್ಳುವುದು ಸಹಜ. ಅದು ಅವರಿಗೆ ಗೊತ್ತಿಲ್ಲದಿರುವಂಥದ್ದೇನಲ್ಲ. ಅದನ್ನು ಈಗ ಹೇಳುವಂಥದ್ದು ಏನಿತ್ತು? ಅವರು ಹಲವು ಚುನಾವಣೆಗಳನ್ನು ನಡೆಸಿದ್ದಾರೆ. ಹಾಗಾದರೆ, ಯಾರಿಂದಲೂ ಹಣ ಪಡೆದಿಲ್ಲವೇ, ಪಕ್ಷದವರು ಕೊಟ್ಟಿಲ್ಲವೇ ಎಂದು ಪ್ರಶ್ನಿಸಿದರು.

ಪ್ರಸಾದ್ ನನ್ನ ಮಿತ್ರ. ಅವರು ಮಾಡಿರುವ ಟೀಕೆಗಳಿಗೆಲ್ಲಾ ಶೀಘ್ರದಲ್ಲೇ ಪತ್ರಿಕಾಗೋಷ್ಠಿ ನಡೆಸಿ ಸ್ಪಷ್ಟನೆ ಕೊಡಲಿದ್ದೇನೆ ಎಂದು ತಿಳಿಸಿದರು.

ಹಿಂದಿನ ಲೇಖನನಿಮ್ಮ ಸಂಬಂಧದ ಆಳವನ್ನು ತಿಳಿಯಬೇಕಾದ್ರೆ  ಮೊದಲು ಇವುಗಳನ್ನು ತಿಳಿಯಿರಿ
ಮುಂದಿನ ಲೇಖನನೀರವ್ ಮೋದಿ ಹಗರಣ: ಲಿಖಿತ ದೂರು ಇಲ್ಲದೆ ಸಿಎಗಳ ವಿರುದ್ಧ ಐಸಿಎಐ ಸ್ವಯಂಪ್ರೇರಿತ ತನಿಖೆ ನಡೆಸಬಹುದು- ದೆಹಲಿ ಹೈಕೋರ್ಟ್