ಮನೆ ಆರೋಗ್ಯ ಹಾಸನ: ಡೆಂಗ್ಯೂಗೆ ವೈದ್ಯಕೀಯ ವಿದ್ಯಾರ್ಥಿ ಬಲಿ

ಹಾಸನ: ಡೆಂಗ್ಯೂಗೆ ವೈದ್ಯಕೀಯ ವಿದ್ಯಾರ್ಥಿ ಬಲಿ

0

ಹಾಸನ: ಶಂಕಿತ ಡೆಂಗ್ಯೂಗೆ ವೈದ್ಯಕೀಯ ವಿದ್ಯಾರ್ಥಿಯೊಬ್ಬ ಬಲಿಯಾಗಿದ್ದಾರೆ.

Join Our Whatsapp Group

ಹೊಳೆನರಸೀಪುರ ತಾಲೂಕು, ಹಳ್ಳಿಮೈಸೂರು, ಹೋಬಳಿ ಗೋಹಳ್ಳಿ ಗ್ರಾಮದ ಮಂಜುನಾಥ – ರೇಖಾ ದಂಪತಿ ಪುತ್ರ ಕುಶಾಲ್ (22) ಶಂಕಿತ ಡೆಂಗ್ಯೂಗೆ ಬಲಿಯಾದ ವೈದ್ಯ ವಿದ್ಯಾರ್ಥಿ.

ಹಾಸನದ ವೈದ್ಯಕೀಯ ಕಾಲೇಜು (ಹಿಮ್ಸ್) ವಿದ್ಯಾರ್ಥಿ ಕುಶಾಲ್ ಅವರು ನಾಲ್ಕು ದಿನಗಳಿಂದ ಜ್ವರದಿಂದ ಬಳಲುತ್ತಿದ್ದರು.  ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದರು. ಪರಿಸ್ಥಿತಿ ಬಿಗಡಾಯಿಸಿದಾಗ ಗುರುವಾರ ಹಾಸನದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಬೆಳಿಗ್ಗೆ ಮೃತಪಟ್ಟಿದ್ದಾರೆ.

ಕುಶಾಲ್ ತಾಯಿ ರೇಖಾ ಅವರೂ ಡೆಂಗ್ಯೂ ಶಂಕಿತ ಜ್ವರದಿಂದ ಬಳಲುತ್ತಿದ್ದು ಮಗ ದಾಖಲಾಗಿದ್ದ ಆಸ್ಪತ್ರೆಯಲ್ಲೇ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.