ಮನೆ ಆರೋಗ್ಯ ಆರೋಗ್ಯ ಸೂತ್ರಗಳು : ಚೆನ್ನಾಗಿ ನೀರು ಕುಡಿಯಬೇಕು

ಆರೋಗ್ಯ ಸೂತ್ರಗಳು : ಚೆನ್ನಾಗಿ ನೀರು ಕುಡಿಯಬೇಕು

0

    ಬಹಳ ಮಂದಿ ದಿನವೂ ತಮಗೆ ಸಾಕಾಗುವಷ್ಟು ನೀರು ಕುಡಿಯುವುದೇ ಇಲ್ಲ ಕಡಿಮೆ ನೀರು ಕುಡಿಯುವುದರಿಂದ ಶರೀರದಲ್ಲಿ ಮಲಬದತೆ ಯುಂಟಾಗುತ್ತದೆ. ತ್ಯಾಜ್ಯ ವಸ್ತುಗಳು ಶರೀರದಿಂದ ಹೊರಬೀಳದೆ ಶರೀರ ವಿಷಪೂರಿತವಾಗುತ್ತದೆ. ಇದು ಆಯಾಸಕ್ಕೆ ದಾರಿಯಾಗುತ್ತದೆ.

Join Our Whatsapp Group

 ಶುಚಿಯಾದ ಆಹಾರ

     ಇತ್ತೀಚಿನ ದಿನಗಳಲ್ಲಿ ಕ್ರಿಮಿನಾಶಕ ಔಷಧಿಗಳನ್ನು ಸಿಂಪಡಿಸುವ ಹಣ್ಣು ತರಕಾರಿಗಳೇ ಇಲ್ಲವೆಂದರೆ ಅತಿ ಮಶಯೋಕ್ತಿಯಲ್ಲ. ಸಾಧಾರಣವಾಗಿ ಕ್ರಿಮಿನಾಶಕ ಔಷಧಗಳು ಅವು ಸಿಂಪಡಣೆ ಮಾಡಲ್ಪಟ್ಟ ಹಣ್ಣು ತರಕಾರಿಗಳ ಒಳಭಾಗಕ್ಕೂ ಹೋಗುತ್ತವೆ. ಆದರೂ ಸಹ ಅವುಗಳನ್ನು ಶುಭ್ರವಾಗಿ ತೊಳೆಯುವುದರಿಂದ, ನಮ್ಮ ಶರೀರಕ್ಕೆ ಅಪಾಯಕಾರಿಯಾದ ಬ್ಯಾಕ್ಟೀರಿಯಾಗಳಂತಹವು ತೊಲಗುತ್ತವೆ.

   ಆದ್ದರಿಂದ ಯಾವಾಗಲೂ ಹಣ್ಣು ತರಕಾರಿಗಳನ್ನು ಶುಭ್ರವಾಗಿ ತೊಳೆದು ನಂತರವೇ ತಿನ್ನಲು ಅಡುಗೆಗೆ ಬಳಸಬೇಕು

 ಉಗುರು ಬೆಚ್ಚನೆಯ ನೀರು

     ನಿದ್ರೆಯಿಂದೆದ್ದು ಮುಖ ತೊಳೆದ ಕೂಡಲೇ ಒಂದು ಲೋಟ ಉಗುರು ಬೆಚ್ಚನೆಯ ನೀರಿಗೆ ತಾಜಾ ನಿಂಬೆ ರಸವನ್ನು ಹಿಂಡಿಕೊಂಡು ಕುಡಿದರೆ, ಅದು ನಿದ್ರೆಯಿಂದೆದ್ದ ದೇಹಕ್ಕೆ ಒಳ್ಳೆಯ ಉತ್ತೇಜನವಾಗಿ ಕೆಲಸ ಮಾಡುತ್ತದೆ.

      ಕುದಿಸಿ ಆರಿಸಿದ ನೀರು ಉತೇಜಕವಾಗಿ ಕೆಲಸ ಮಾಡುತ್ತದೆ.

     ಕುದಿಸಿ ಆರಿಸಿದ ನೀರು ಉಗುರು ಬೆಚ್ಚಗಿರುವಾಗಲೇ ಕುಡಿಯಬೇಕು. ಮೊದಲೇ ಹಿಂಡಿದ ಅಥವಾ ಶೇಖರಿಸಿದೆ ನಿಂಬೆ ರಸವನ್ನಲ್ಲದೆ, ಆಗಲೇ ಹಿಂಡುಕೊಂಡು ಕುಡಿದರೆ ಅದರಲ್ಲಿ ಸತ್ವಗಳು ಹೇರಳವಾಗಿರುತ್ತವೆ.

 ಹಣ್ಣುಗಳು

    ಕೆಲವರು ಊಟದ ನಂತರ ಬಾಳೆಹಣ್ಣು ಇಲ್ಲವೇ ಸೀಜನ್ ನಲ್ಲಾದರೆ ಮಾವಿನ ಹಣ್ಣು ತಿನ್ನುತ್ತಾರೆ.ಊಟದ ಜೊತೆಗಾಗಲಿ, ಊಟವಾದ ತಕ್ಷಣವಾಗಲಿ ಹಣ್ಣುಗಳನ್ನು ತಿಂದರೆ ಅದು ಅಜೀರ್ಣ, ತೇಗು, ಎದೆಯುರಿ ಮುಂತಾದವಕ್ಕೆ ದಾರಿಯಾಗಬಹುದು.

     ಶೀಘ್ರ ಜೀರ್ಣವಾಗುವ ಫಲಗಳನ್ನು ನಿಧಾನವಾಗಿ ಜೀರ್ಣನವಾಗುವ ಪ್ರೊಟೀನ್, ಕಾರ್ಬೋಹೈಡ್ರೇಟ್ ಗಳರುವ ಆಹಾರದ ಜೊತೆಗೆ ತೆಗೆದುಕೊಂಡರೆ, ಅವುಗಳಲ್ಲಿ ಯಾವುದೂ ಸರಿಯಾಗಿ ಜೀರ್ಣವಾಗದು ಆದ್ದರಿಂದ ಹಣ್ಣುಗಳನ್ನು ಊಟ ಮಾಡುವುದಕ್ಕೆ ಬಹಳ ಮುಂಚಿತವಾಗಲೀ ಎರಡು ಊಟಗಳ ನಡುವಿನ ಸಮಯದಲ್ಲಾಗಲಿ ತೆಗೆದುಕೊಳ್ಳುವುದು ಉತ್ತಮ.

 ಚೆನ್ನಾಗಿ ಆಗಿಯಬೇಕು

        ಆಹಾರ ಜೀರ್ಣವಾಗುವ ಕ್ರಿಯೆ ಮೊದಲು ಬಾಯಿಯಲ್ಲಿ ಪ್ರಾರಂಭವಾಗುತ್ತದೆ.ಅದರಿಂದ ಆಹಾರದಲ್ಲಿನ ಉತ್ತಮ ಸತ್ವವನ್ನು ಶರೀರಕ್ಕೆ ಲಭಿಸಬೇಕೆಂದರೆ, ನುಂಗುವ ಮುನ್ನ ಚೆನ್ನಾಗಿ ಆಗಿಯಬೇಕು. ನಮ್ಮ ಬಾಯಿಯಲ್ಲಿ ಹಲ್ಲುಗಳಿರುವುದೂ, ಜೊಲ್ಲುರಸ ಸುರಿಯುವುದಕ್ಕೂ ಇದಕ್ಕಾಗಿಯೇ ಅಲ್ಲವೇ?

 ದೇಹಕ್ಕೆ ಮರ್ಗನ

     ಚರ್ಮಕ್ಕೆ ಮರ್ಧನ ಮಾಡುವುದರಿಂದ ಒಳಗಿನ ರಕ್ತ ಪರಿಚಲನೆ ಸರಾಗವಾಗಿ ನಡೆಯುತ್ತದೆ ಲಿಂಪ್ ಗ್ರಂಥಿಗಳ ವ್ಯವಸ್ಥೆ ರಿಚಾರ್ಜ್ ಆಗುತ್ತದೆ. ಶರೀರದೊಳಗಿನ ವಿಷಪದಾರ್ಥಗಳು ಬೇಗನೆ ವಿಸರ್ಜನೆ ಯಾಗುತ್ತವೆ.ಇವುಗಳಿಂದ ಶರೀರದ ಶಕ್ತಿ ವೃದ್ಧಿಯಾಗಿ ಮನುಷ್ಯ ಉತ್ಸಾಹ, ಉತ್ತೇಜನೆಗಳನ್ನು ಪಡೆಯುತ್ತಾನೆ.

 ತೂಕ ಕಡಿಮೆ ಮಾಡಿಕೊಳ್ಳಿ 

      ದೇಹ ಹೆಚ್ಚು ಭಾರವಾಗಿ ಸ್ಥೂಲವಾಗಿದ್ದರೆ, ಬೇಗ ಆಯಾಸಗೊಳ್ಳುವಿರಿ. ಬಹಳ ಕಡಿಮೆ ಇದ್ದರೂ ಹಾಗೇ ಆಗುತ್ತದೆ. ಶರೀರ ಅಧಿಕ ತೂಕವನ್ನು ತಗ್ಗಿಸಿಕೊಳ್ಳಲು ಸುಲಭವಾದ ಮಾರ್ಗವೇನೆಂದರೆ, ಆಹಾರದಲ್ಲಿ ಶಿಷ್ಟಗಳು ಪ್ರೋಟೀನ್ ಗಳನ್ನು ಬೆರೆಸಿ ತೆಗೆದುಕೊಳ್ಳಬಾರದು.

     ಉದಾಹರಣೆಗೆ ಪ್ರೊಟೀನ್ ಗಳನ್ನು ಹೊಂದಿರುವ ಮೀನುಗಳನ್ನುನೂಡನೇ ಕೂಡಿರುವ ಅನ್ನದೊಡನೆ ಕಲಸಿ ತಿನ್ನಬಾರದು ನಾವು ಹೀಗೆ ತಿನ್ನುವದೆಲ್ಲವೇ ಅದಕ್ಕೆ ಬದಲಾಗಿ ಮೀನನ್ನು ಸಾಲಾಡ್ ನೊಂದಿಗೆ ಲಂಚ್ ಮೇಲೆ ತೆಗೆದುಕೊಳ್ಳಬೇಕು. ಸಾಯಂಕಾಲ ಅನ್ನವನ್ನು ತರಕಾರಿಗಳೊಡನೆ ತೆಗೆದುಕೊಳ್ಳಬಾರದು.

      ಇಲ್ಲವಾದರೆ ಲಂಚ್ ಜೊತೆ ಆಮ್ಲೆಟ್ ತೆಗೆದುಕೊಂಡು ಅನ್ನದ ಜೊತೆ ಆಲೂಗಡ್ಡೆಯನ್ನು ತೆಗೆದುಕೊಳ್ಳಬಹುದು. ಈ ಬಗೆಯ ಆಹಾರ ಕ್ರಮದಿಂದ ಜೀರ್ಣವಾಗುವುದು ಸುಲಭವಾಗಿ, ತೂಕ ನಿಯಂತ್ರಣದಲ್ಲಿದ್ದು, ಶರೀರದಲ್ಲಿ ಉತ್ಸಾಹ ಉಂಟಾಗುತ್ತದೆ.

 ಅಗತ್ಯವಾದರೆ ವಿಟಮಿನ್ ಗಳು  

      ನಿಮಗೆ ಹೆಚ್ಚು ನಿಶ್ಯಕ್ತಿ, ಆಯಸಾಗಳಿದ್ದರೆ ಡಾಕ್ಟರ್ ಸಲಹೆ ಮೇರೆಗೆ ಒಂದು ಕ್ರೋಸ್ ವಿಟಮಿನ್ ಮಾತ್ರೆಗಳನ್ನು ತೆಗೆದುಕೊಳ್ಳಬಹುದು.ಯಾವ ವಿಟಮಿನ್ ಗಳನ್ನು ತೆಗೆದುಕೊಳ್ಳಬೇಕು. ಹೇಗೆ ತೆಗೆದುಕೊಳ್ಳಬೇಕು ಅವುಗಳನ್ನು ಬಳಸಬೇಕೋ, ಬೇಡವೋ, ಎಂಬುದನ್ನು ಡಾಕ್ಟರ್ ತೀರ್ಮಾನಿಸ ಬೇಕೇ ಹೊರತು ನೀವು ತೀರ್ಮಾನಿಸಬಾರದು.

 ವಿಟಮಿನ್ ಬಿ

    ಶರೀರದಲ್ಲಿ ಶಕ್ತ ಸಂಚಲನ ಯಾವಾಗಲಃ ವಿಟಮಿನ್ ಗಳು ಬಹಳ ಉಪಯುಕ್ತ. ಆಯಸಗೊಂಡ ಶ್ರೀರಕ್ಕೆ ಸಮತೋಲವಿರುವ ಬಿ ಕಾಂಪ್ಲೆಕ್ಸ್ ವಿಟಮಿನ್  ಗಳು ಬಹಳ ಅನುಕೂಲ ಮಾಡುತ್ತವೆ. ಆಯಾಸ,  ನಿಶ್ಚಕ್ತಿಗಳ ಅನಿಸಿಕೆಯುಳ್ಳವರು ಮ್ಯಾಗ್ನೀಷಿಯಂ ವಿಟಮಿನ್ ಸಿ ಗಳ ಜೊತೆಗೆ ಬಿ ಕಾಂಪ್ಲೆಕ್ಸ್ ಗಳಿರುವ   ಔಷಧಗಳಿಗಾಗಿ ಡಾಕ್ಟರನ್ನು ಸಂಪರ್ಕಿಸಬೇಕು

 ದೀರ್ಘಕಾಲ  ಡಯಟಿಂಗ್ ಮಾಡಬಾರದು

    ದೀರ್ಘರಕಾಲದವರೆಗೆ  ಕೊಬ್ಬು ಕಡಿಮೆಯಿರುವ ಆಹಾರಗಳನ್ನಘ ಸೇವಿಸುತ್ತಿದ್ದರೆ ಚರ್ಮ ಒಣಗುವಿಕೆ,ಹಾರ್ಮೋನ್ ಗಳ ಉತ್ಪಾದನೆಯಲ್ಲಿ ಸಮತೋಲನ ತಪ್ಪುವುದು, ಸ್ತ್ರೀಯರಿಗೆ ಜನನೆಂದ್ರಿಯ ದೇವರಿಗೆ ದೇವರಹಿತವಾಗುವುದು ಕೀಳು ನೋವು ಆಯಾಸ ಐತ್ಯಾದಿಗಳು ಉಂಟಾಗುತ್ತವೆ  ದೇವರಂತಾಗುತ್ತದೆ

ಡಯಟಿಂಗ್ ವಿಷಯದಲ್ಲಿ ಎಚ್ಚರ

ಮನುಷ್ಯನು ಕುಗ್ಗಿಸುವ ತಡಗಳು ಮನುಷ್ಯರನ್ನು ನಾಶ ಮಾಡುತ್ತವೆ ನಿಮ್ಮ ಕಳವಳಗಳು ಸಮಸ್ಯೆಗಳನ್ನು ಪರಿಗಣಿಸಿಕೊಳ್ಳಿ. ಇಲ್ಲವಾದರೆ ಯಾರು ಯಾರೊಡನಾದರೂ ಹಂಚಿಕೊಳ್ಳಿ. , ಅದನ್ನು ಬಿಟ್ಟು ಚಿಂತೆಗಳು ನಿಮ್ಮ ಕೂಗ್ಗಿಸಿ ಬಿಡುವಂತೆ ಮಾತ್ರ ಮಾಡಿ ಕೊಳ್ಳಬೇಡಿ.