• ಮಾವಿನಕಾಯಿ ಸಿಪ್ಪೆ ಚೆನ್ನಾಗಿ ಆಗಿದು ಉಗುಳುತ್ತಿದ್ದರೆ ವಸಿಡಿನಿಂದಾಗುವ ರಕ್ತಸ್ರಾವ ನಿಲ್ಲುವುದು ಮತ್ತು ಬಾಯಿಯ ದುರ್ಗಂಧ ನಿವಾರಣೆಯಾಗುವುದು
• ಒಂದು ಟೀ ಚಮಚದಷ್ಟು ಕೊತ್ತಂಬರಿ ಬೀಜಗಳನ್ನು ಹಲ್ಲುಗಳಿಂದ ಚೆನ್ನಾಗಿ ಅಗಿದು ಉಗುಳಿ, ಪುನರಾವರ್ತನೆ ಅತ್ಯಾವಶ್ಯಕ
• ಗೋರಂಟಿ ಗಿಡದಿಂದ ಚಿಗುರೆಲೆ ಕಿತ್ತು ತನ್ನಿ ಈ ಎಲೆಗಳನ್ನು ಬಾಯಲ್ಲಿಟ್ಟುಕೊಂಡು ಹಲ್ಲುಗಳಿಂದ ಚೆನ್ನಾಗಿ ಆಗಿದ್ದು ರಸ ಉಗುಳುತ್ತೀರಿ. ಬಾಯಿಯ ದುರ್ವಾಸನೆ ಹೋಗಲಾಡಿಸಲು ಇದು ಸುಲಭವಾದ ಮಾರ್ಗ
• ಅಡುಗೆ ಉಪ್ಪು ಬೆರೆಸಿದ ನೀರಿನಿಂದ ದಿನಕ್ಕೊಂದು ಬಾರಿ ಬಾಯಿ ಮುಕ್ಕಳಿಸುತ್ತಿದ್ದರೆ ವಸಡು ಗಟ್ಟಿಯಾಗುವುದು ಮತ್ತು ಬಾಯಿಯಿಂದ ಹೊರಹೊಮ್ಮುವ ದುರ್ಗಂಧ ನಿವಾರಣೆಯಾಗುವುದು
• ಲವಂಗವನ್ನು ಬಾಯಿಗೆ ಹಾಕಿಕೊಂಡು ಚಪ್ಪರಿಸುತ್ತಿದ್ದರೆ ಬಾಯಿಯಿಂದ ಹೊರಹೊಮ್ಮುವ ದುರ್ಗಂಧ ನಿವಾರಣೆಯಾಗುವುದು
• (ಸೂಚನೆ: ಧೂಮಪಾನದ ಚಟ ತಪ್ಪಬೇಕಾದರೆ ಧೂಮಪಾನ ಮಾಡಬೇಕೆನಿಸಿದಾಗ ಒಂದು ಲವಂಗವನ್ನು ಬಾಯಿಗೆ ಹಾಕಿಕೊಂಡು ಚಪ್ಪರಿಸುವುದನ್ನು ಅಭ್ಯಾಸ ಮಾಡಿಕೊಳ್ಳಿ)
• ಒಂದು ಬಟ್ಟಲು ನಿಂಬೆರಸದೊಂದಿಗೆ ಅದರ ಎರಡರಷ್ಟು ರೋಜ್ ವಾಟರ್ ಮಿಶ್ರಣ ಮಾಡಿ ಆ ಮಿಶ್ರಣದಿಂದ ಆಗಾಗ್ಗೆ ಬಾಯಿ ಮುಕ್ಕಳಿಸುತ್ತಿರಿ
ಗಂಟಲು ನೋವು ನಿವಾರಣೆಗೆ:
• ಮಾವಿನ ತೊಗಟೆಯ ಕಷಾಯಕ್ಕೆ ಉಪ್ಪು ಬೆರೆಸಿ ಬಾಯಿ ಮುಕ್ಕಳಿಸುವುದರಿಂದ ಗಂಟಲು ನೋವು ನಿವಾರಣೆಯಾಗುವುದು.
• ಮೆಣಸು ಮತ್ತು ಕೊತ್ತಂಬರಿ ಬೀಜದ ಕಷಾಯ ಸೇವಿಸುವುದರಿಂದ ಗಂಟಲು ನೋವು ಶಮನವಾಗುವುದು.
• ನಾಲ್ಕೈದು ಕರಿಮೆಣಸು ಚಿಟಿಕೆ ಓಂಕಳು ಮತ್ತು ಎರಡು ಹರಳು ಉಪ್ಪು ಬಾಯಿಗೆ ಹಾಕಿಕೊಂಡು ಅಗಿದು ಚಪ್ಪರಿಸಿ.
• ಒಂದು ಬಟ್ಟಲು ಬಿಸಿನೀರಿಗೆ ಒಂದು ಹೋಳು ನಿಂಬೆಹಣ್ಣಿನ ರಸ ಹಿಂಡಿ ನಂತರ ನಾಲ್ಕು ಟೀ ಚಮಚ ಜೇನುತುಪ್ಪ ಮತ್ತು ಎರಡು ಚಿಟಿಕೆ ಉಪ್ಪಿನ ಪುಡಿ ಹಾಕಿ ಚೆನ್ನಾಗಿ ಕಲಕಿ ಈ ಪಾನಕ ಸೇವಿಸಿದಲ್ಲಿ ಗಂಟಲು ನೋವು ಬಹುಬೇಗ ಶಮನವಾಗುವುದು.
• ಬಿಸಿ ನೀರಿನಲ್ಲಿ ಉಪ್ಪು ಕರಗಿಸಿ ಈ ನೀರನ್ನು ಗಂಟಲಿಗೆ ಸುರಿದುಕೊಂಡು ಗಳಗಳ ಸದ್ದು ಮಾಡಿ ಉಗುಳಿರಿ ನಾಲ್ಕಾರು ಬಾರಿ ಈ ಉಪಚಾರ ಮಾಡಿ.
• ಒಂದು ನಿಂಬೆ ಹಣ್ಣಿನ ರಸವನ್ನು ಅದರ ಎರಡರಷ್ಟು ಭಾಗ ಬಿಸಿ ನೀರಿನೊಂದಿಗೆ ಮಿಶ್ರಣ ಮಾಡಿ ಗಂಟಲಿಗೆ ಸುರಿದುಕೊಂಡು ಗಳಗಳ ಸದ್ದು ಮಾಡಿ ಉಗುಳಿರಿ.
• ನಿಂಬೆ ಹಣ್ಣು ಪೂಯ್ದು ರಸ ಹಿಂಡಿ, ಆ ರಸವನ್ನು ಬಿಸಿ ಮಾಡಿ ರುಚಿಗೆ ತಕ್ಕಷ್ಟು ಜೇನುತುಪ್ಪ ಸೇರಿಸಿ ಈ ಮಿಶ್ರಣವನ್ನು ಬೆಳಗಿನ ಉಪಹಾರಕ್ಕಿಂತ ಮುಂಚೆ ಸ್ವಲ್ಪ ಸ್ವಲ್ಪವಾಗಿ ಚೀಪಿರಿ.
• ಕರಿ ಮೆಣಸಿನ ಚೂರ್ಣವನ್ನು ಜೇನುತುಪ್ಪದೊಂದಿಗೆ ಬೆರೆಸಿ, ಹೀಗೆ ಸಿದ್ಧಪಡಿಸಿದ ಒಂದು ಟೀ ಚಮಚ ರಸಾಯನವನ್ನು ದಿನಕ್ಕೆ ಮುರಾವರ್ತಿ ತೆಗೆದುಕೊಂಡು ಚಪ್ಪರಿಸಿ. ಗಂಟಲು ನೋವು ನಿವಾರಣೆಯಾಗುವುದು.
• ಚೆನ್ನಾಗಿ ಮಾಡಿದ ಅನಾನಸ್ ಹಣ್ಣಿನ ತಾಜಾರ ಸಾಚಿ ಕೂತಿದ್ದರೆ ಗಂಟಲು ನೋವು ಗಂಟಲು ಊತ ಗಂಟಲೆನಲ್ಲಾಗುವ ಬೊಕ್ಕೆಗಳು ನಿವಾರಣೆಯಾಗುವುವು.
ಬಾಯಿ ಹುಣ್ಣು ನಿವಾರಣೆಗೆ:
• ಮಾವಿನ ಚಿಗುರೆಲೆಗಳನ್ನು ಆಗಿದ್ದು ಉಗುಳುತ್ತಿದ್ದರೆ ಬಾಯಿ ಹುಣ್ಣು ಗುಣವಾಗುವುದು ಹಲ್ಲು ನೋವು ನಿವಾರಣೆಯಾಗುವುದು ವಸಡಿನಿಂದಾಗುವ ರಕ್ತಸ್ರಾವ ನಿಲ್ಲುವುದು
• ಚೆನ್ನಾಗಿ ಮಾಗಿದ ಟೊಮೆಟೊ ಹಣ್ಣು ಸೇವಿಸುವುದರಿಂದ ಬಾಯಿ ಹುಣ್ಣು ಗುಣವಾಗುವುದು
• ಹತ್ತಿಯ ಚಿಗುರಲೆಗಳಿಂದ ತಂಬುಳಿ ತಯಾರಿಸಿ ಮೂರರಿಂದ ನಾಲ್ಕು ದಿನ ಊಟ ಮಾಡುವುದರಿಂದ ಬಾಯಿ ಹುಣ್ಣು ಗುಣವಾಗುವುದು
ಡೆಂಗ್ಯೂ ಜ್ವರದ ಆತಂಕದಲ್ಲಿ ಮೈಸೂರಿನ ಕೆ ಆರ್ ಒನ್ ಬೆಟ್ಟದಪುರದ ಜನರು!
ಗುಜರಾತ್ ಕರಕುಶಲ ಉತ್ಸವದ ಸದುಪಯೋಗ ಪಡೆದುಕೊಳ್ಳಿ: ಕೆ ಎಂ ಗಾಯಿತ್ರಿ
ನ್ಯಾಯಾಲಯದಲ್ಲಿ ಜವಾನ ಹುದ್ದೆಗಳ ಭರ್ತಿಗೆ ಅಧಿಸೂಚನೆ !
ಮೂಡ ಹಗರಣಕ್ಕೆ ಸಂಬಂಧಿಸಿದ ವ್ಯಕ್ತಿಯ ಅಮಾನತು ಮಾಡುವಂತೆ ಪ್ರತಿಭಟನೆ
ಗುಜರಾತ್ ಹ್ಯಾಂಡಿಕ್ರಾಫ್ಟ್ ಉತ್ಸವ -2024 ಕುರಿತು ಪತ್ರಿಕಾಗೋಷ್ಠಿಯನ್ನು ಏರ್ಪಡಿಸಲಾಯಿತು
T20 ವಿಶ್ವ ಚಾಂಪಿಯನ್ ಟೀಮ್ ಇಂಡಿಯಾವನ್ನು ಭೇಟಿ ಮಾಡಿದ ಪ್ರಧಾನಿ ಮೋದಿ
4,000 ಕೋಟಿ ಬ್ರಹ್ಮಾಂಡ ಭ್ರಷ್ಟಾಚಾರ ಹಗರಣ ವಿರೋಧಿಸಿ ಪ್ರತಿಭಟನೆ
ಗ್ರಾಮ ಪಂಚಾಯಿತಿಗಳಲ್ಲೇ, ಜನನ ಮತ್ತು ಮರಣ, 'ಪ್ರಮಾಣ ಪತ್ರ' ದೊರೆಯುತ್ತದೆ.
ಮಿನಿ ಉದ್ಯೋಗ ಮೇಳ..!
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.