ಮನೆ ಅಪರಾಧ ಪತ್ನಿಗೆ ಮೆಸೇಜ್ ಮಾಡಿದ್ದ ಟೈಲರ್’ನ್ನು ಹತ್ಯೆ ಮಾಡಿ ಪತಿ

ಪತ್ನಿಗೆ ಮೆಸೇಜ್ ಮಾಡಿದ್ದ ಟೈಲರ್’ನ್ನು ಹತ್ಯೆ ಮಾಡಿ ಪತಿ

0

ಹಾಸನ(Hassan): ಪತ್ನಿಗೆ ಮೆಸೇಜ್ ಮಾಡಿದ ಟೈಲರ್’ನ್ನು ಪತಿಯೇ ಬರ್ಬರವಾಗಿ ಹತ್ಯೆಮಾಡಿರುವ ಘಟನೆ ಚನ್ನರಾಯಪಟ್ಟಣದಲ್ಲಿ ನಡೆದಿದೆ.

ಮೃತ ವ್ಯಕ್ತಿ ಊಪಿನಹಳ್ಳಿ ಗ್ರಾಮದ ಗಂಗಾಧರ್ (40) ಎಂದು ಗುರುತಿಸಲಾಗಿದೆ. ಭರತ್ ಕೊಲೆ ಮಾಡಿದ ಆರೋಪಿ.

ಭರತ್ ಪತ್ನಿಗೆ ಗಂಗಾಧರ್ ಪದೇ ಪದೇ ಮೆಸೇಜ್ ಮಾಡುತ್ತಿದ್ದ ಎಂಬ ಆರೋಪ ಕೇಳಿಬಂದಿದೆ. ಇದೇ ವಿಷಯವಾಗಿ ಭರತ್, ಸೋಮು, ಚಿರು, ಅಭಿ ಎಂಬ ನಾಲ್ವರು ಗಂಗಾಧರ್​ನನ್ನು ಕಿಡ್ನಾಪ್ ಮಾಡಿ ಕೊಲೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಗಂಗಾಧರ್​ನನ್ನು ಕಿಡ್ನ್ಯಾಪ್​ ಮಾಡಿದ ಬಳಿಕ ಶ್ರವಣಬೆಳಗೊಳ ರಸ್ತೆಯ ಜನಿವಾರ ಸಮೀಪದ ಬಯಲು ಪ್ರದೇಶಕ್ಕೆ ಕರೆದುಕೊಂಡು ಹೋಗಿ ಮನಸ್ಸೋ ಇಚ್ಛೆ ಹಲ್ಲೆ ಮಾಡಿದ್ದಾರೆ. ಅದೇ ಮಾರ್ಗದಲ್ಲಿ ತೆರಳುತ್ತಿದ್ದ ಗಂಗಾಧರ್ ಸ್ನೇಹಿತ ಇದನ್ನ ಗಮನಿಸಿ ಹತ್ತಿರ ಹೋದಾಗ ಆರೋಪಿಗಳು ಅಲ್ಲಿಂದ ಕಾಲ್ಕಿತ್ತಿದ್ದಾರೆ. ಕೂಡಲೇ ಗಂಗಾಧರ್​ನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲು ಮುಂದಾಗುವಷ್ಟರಲ್ಲಿ ಆತ ಅಲ್ಲಿಯೇ ಉಸಿರು ಚಲ್ಲಿದ್ದಾನೆ.

ಗಂಗಾಧರ್ ಪತ್ನಿ ಸೌಮ್ಯ ನೀಡಿದ ದೂರಿನ ಆಧಾರದಲ್ಲಿ ಕೇಸ್ ದಾಖಲಿಸಿಕೊಂಡಿರುವ ಚನ್ನರಾಯಪಟ್ಟಣ ನಗರ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಹಿಂದಿನ ಲೇಖನಮುರುಘಾ ಶರಣರ ವಿರುದ್ಧ ಮತ್ತೊಂದು ದೂರು ದಾಖಲು: ಶರಣರು ಸೇರಿದಂತೆ 7 ಮಂದಿ ಆರೋಪಿಗಳು
ಮುಂದಿನ ಲೇಖನಧಾರಾಕಾರ ಮಳೆ: ತಗ್ಗು ಪ್ರದೇಶಗಳಿಗೆ ನುಗ್ಗಿದ ನೀರು