ಮನೆ ಅಪರಾಧ ಚಿನ್ನಾಭರಣ ವಿಚಾರದಲ್ಲಿ ಗಲಾಟೆ: ಪತ್ನಿಯನ್ನೇ ಕೊಂದ ಗಂಡ

ಚಿನ್ನಾಭರಣ ವಿಚಾರದಲ್ಲಿ ಗಲಾಟೆ: ಪತ್ನಿಯನ್ನೇ ಕೊಂದ ಗಂಡ

0

ಪೆದ್ದಪಲ್ಲಿ (ತೆಲಂಗಾಣ)(Telangana): ಚಿನ್ನಾಭರಣದ ವಿಷಯಕ್ಕಾಗಿ ಪತ್ನಿಯನ್ನು ಬರ್ಬರವಾಗಿ ಕೊಲೆ(Murder) ಮಾಡಿರುವ ಘಟನೆ ಪೆದ್ದಪಲ್ಲಿಯಲ್ಲಿ ನಡೆದಿದ್ದು, ಆರೋಪಿ ಪತಿ ಪೊಲೀಸರ ಮುಂದೆ ಶರಣಾಗಿದ್ದಾನೆ.

ಸಂಜಯ್​ ಗಾಂಧಿ ನಗರದ ಸುಂದರಗಿರಿ ರಾಜೇಶ್ ಮೊಬೈಲ್ ಫೋನ್​ ಅಂಗಡಿ ಇಟ್ಟುಕೊಂಡಿದ್ದನು. ಗಂಡ-ಹೆಂಡತಿ ನಡುವೆ ಕಳೆದ ಕೆಲ ದಿನಗಳಿಂದ ಚಿನ್ನಾಭರಣ ಒತ್ತೆ ಇಟ್ಟಿರುವ ವಿಚಾರವಾಗಿ ಜಗಳ ನಡೆದಿದೆ. ತನಗೆ ಗೊತ್ತಿಲ್ಲದೆ ಚಿನ್ನಾಭರಣ ಮಾರಾಟ ಮಾಡಿದ್ದಕ್ಕಾಗಿ ರಾಜೇಶ್ ಮೇಲೆ ಹೆಂಡತಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ವೇಳೆ ತಾಳ್ಮೆ ಕಳೆದುಕೊಂಡಿರುವ ಪತಿ ಆಕೆಯ ಮೇಲೆ ಹರಿತವಾದ ಆಯುಧದಿಂದ ಹಲ್ಲೆ ನಡೆಸಿದ್ದಾನೆ. ಇದರ ಬೆನ್ನಲ್ಲೇ ರಾಮಗುಂಡಂ ಎನ್‌ಟಿಪಿಸಿ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ.

ಘಟನಾ ಸ್ಥಳಕ್ಕೆ ಭೇಟಿ ನೀಡಿರುವ ಪೊಲೀಸರು ಮೃತ ಮಹಿಳೆಯ ಶವವನ್ನ ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದು, ಆರೋಪಿ ವಿರುದ್ಧ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ನಡೆಸಿದ್ದಾರೆ.