ಮನೆ ರಾಜ್ಯ ಸಿದ್ದರಾಮಯ್ಯ ವಾಹನದ ಮೇಲೆ ಪರಿಹಾರ ಧನ ಎಸೆದು ಆಕ್ರೋಶ ವ್ಯಕ್ತಪಡಿಸಿದ ಹಲ್ಲೆ ಸಂತ್ರಸ್ತೆ

ಸಿದ್ದರಾಮಯ್ಯ ವಾಹನದ ಮೇಲೆ ಪರಿಹಾರ ಧನ ಎಸೆದು ಆಕ್ರೋಶ ವ್ಯಕ್ತಪಡಿಸಿದ ಹಲ್ಲೆ ಸಂತ್ರಸ್ತೆ

0

ಬಾಗಲಕೋಟೆ(Bagalkote): ಕುಳಗೇರಿ ಕ್ರಾಸ್ ದಾಬಾ ಬಳಿ ನಡೆದ ಹಲ್ಲೆಯಲ್ಲಿ ಗಾಯಗೊಂಡಿದ್ದ ಸಂತ್ರಸ್ತರಿಗೆ ವಿಪಕ್ಷ ನಾಯಕ ಸಿದ್ದರಾಮಯ್ಯ 2 ಲಕ್ಷ ರೂ. ಹಣ ನೀಡಿದ್ದು, ಸಂತ್ರಸ್ತರು ಹಣವನ್ನು ಕಾರಿನ ಮೇಲೆ ಎಸೆದು, ನಿಮ್ಮ ಹಣ ನಮಗೆ ಬೇಕಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಘಟನೆ ನಡೆದು ಘಟನೆ ನಡೆದು ಇಷ್ಟು ದಿನವಾದರೂ ಯಾರು ಬಂದು ಮಾತನಾಡಿಸಿಲ್ಲ. ಸಚಿವರು ಬಂದರೂ ಕೆಲವರನ್ಮಷ್ಟೇ ಮಾತನಾಡಿಸಿಕೊಂಡು ಹೋಗುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹಲ್ಲೆಯಲ್ಲಿ ಗಾಯಗೊಂಡಿದ್ದ ಮಹಮ್ಮದ್ ಹನೀಫ್ ಸೇರಿದಂತೆ ನಾಲ್ವರಿಗೆ ಸಾಂತ್ವನ ಹೇಳಿ ತಲಾ‌₹ 50 ಸಾವಿರ ಮೊತ್ತವನ್ನು ಸಿದ್ದರಾಮಯ್ಯ ನೀಡಿದರು.

ಮಾಜಿ ಶಾಸಕ ಎಚ್.ವೈ. ಮೇಟಿ ಸೇರಿದಂತೆ ಯಾರೂ ಬಂದಿಲ್ಲ. ಈಗ ಬಂದಿದ್ದೀರಿ ಎಂದು ತರಾಟೆಗೆ ತೆಗೆದುಕೊಂಡ ಸಂತ್ರಸ್ತರು ಹಣ ವಾಪಸ್ ನೀಡಿದ್ದರು. ಅವರನ್ನು ಸಮಾಧಾನಪಡಿಸಿ ಹಣ ನೀಡಿ ಬಂದಿದ್ದರು. ಕೆಳಗಡೆ ಬಂದು ಮಾತನಾಡಲು ಮುಂದಾದಾಗ ಸಿದ್ದರಾಮಯ್ಯ ಅವರಿದ್ದ‌ ವಾಹನ ಮುಂದಕ್ಕೆ ಹೋಯಿತು. ಆಗ ನಿಮ್ಮ ಹಣ ಬೇಡ ಎಂದು ವಾಹನಕ್ಕೆ ಎಸೆದಿದ್ದಾರೆ.

ಹಿಂದಿನ ಲೇಖನಕೊಲೆ ಅಪರಾಧಿ ಹತ್ಯೆಗೆ ಸಂಚು ರೂಪಿಸಿದ್ದ ಮೂವರ ಬಂಧನ
ಮುಂದಿನ ಲೇಖನಸೈಕಲ್ ಬಳಸದಿದ್ದರೂ ನಿರ್ವಹಣಾ ವೆಚ್ಚ ಪಡೆಯುತ್ತಿರುವ 53 ಸಾವಿರ ಪೊಲೀಸರು: ದೆಹಲಿ ಹೈಕೋರ್ಟ್ ನಲ್ಲಿ ಮನವಿ ಸಲ್ಲಿಕೆ