ಮನೆ ರಾಜಕೀಯ ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆಗೆ ನಾನು ತಟಸ್ಥ: ಸಂಸದೆ ಸುಮಲತಾ ಅಂಬರೀಶ್

ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆಗೆ ನಾನು ತಟಸ್ಥ: ಸಂಸದೆ ಸುಮಲತಾ ಅಂಬರೀಶ್

0

ಮೈಸೂರು (Mysuru)- ದಕ್ಷಿಣ ಪದವೀಧರ ಕ್ಷೇತ್ರದ ವಿಧಾನಪರಿಷತ್‌ ಚುನಾವಣೆಗೆ ನಾನು ತಟಸ್ಥವಾಗಿರಲಿದ್ದೇನೆ ಎಂದು ಸಂಸದೆ ಸುಮಲತಾ ಅಂಬರೀಶ್‌ ಹೇಳಿದರು.

ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆಗೆ ಎಲ್ಲ ಪಕ್ಷದವರು ಬೆಂಬಲ‌ ಕೇಳುತ್ತಿದ್ದಾರೆ. ನಾನು ಮಾತ್ರ ತಟಸ್ಥಳಾಗಿದ್ದೇ‌ನೆ ಎಂದರು.

ನನ್ನ ಮುಂದಿನ‌ ರಾಜಕೀಯ ನಿಲುವು ನಿರ್ಧಾರ ಮಾಡೋರು ಜನರು‌. ಮೊದಲು ಜನರ ಬಳಿ ಚರ್ಚೆ ಮಾಡುತ್ತೇನೆ. ನಂತರ ರಾಜಕೀಯ ನಿಲುವು ಸ್ಪಷ್ಟ ಪಡಿಸುತ್ತೇನೆ ಎಂದ ಅವರು, ನನ್ನ ಸಿದ್ಧಾಂತ ಮತ್ತು ನನ್ನ ವಿಚಾರಗಳಿಗೆ ಪಕ್ಷಗಳು ಒಪ್ಪಿದರೆ ಸೇರುತ್ತೇನೆ. ಆದರೆ, ಜನರ ಬಳಿ ನಿರ್ಧಾರ ಕೇಳಿ ಅವರು ಏನು ಹೇಳುತ್ತಾರೋ ಅದರಂತೆ ನಿರ್ಧಾರ ತೆಗೆದುಕೊಳ್ಳುತ್ತೇನೆ. ಸಮಯ ಸಂದರ್ಭ ನೋಡಿ ನಿರ್ಧಾರ ತೆಗೆದು ಕೊಳ್ಳಲಾಗುವುದು ಎಂದು ಹೇಳಿದರು.

ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಗೆ ಭೇಟಿ:

ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಗೆ ಭೇಟಿ ನೀಡಿದ ಸುಮಲತಾ ಅಂಬರೀಶ್‌ ಅವರು, ವಾಕ್ ಮತ್ತು ಶ್ರವಣ ಸಂಸ್ಥೆಯ ಕ್ಯಾಂಪಸ್ ವೀಕ್ಷಣೆ ಮಾಡಿ ಅಧಿಕಾರಿಗಳ ಜೊತೆ ವಿವಿ ಯೋಜನಗೆಳ ಬಗ್ಗೆ ಚರ್ಚೆ ನಡೆಸಿದರು. ಧ್ವನಿ ಹಾಗೂ ಕಿವಿ ಸಮಸ್ಯೆ ಇರುವ ಮಕ್ಕಳ ಸಮಸ್ಯೆ ಬಗೆಹರಿಸುತ್ತಿದ್ದಾರೆ. ಇವರ ಸೇವೆಯನ್ನು ಮಂಡ್ಯಕ್ಕೂ ವಿಸ್ತರಣೆ ಮಾಡಬೇಕಿದೆ. ಅದಕ್ಕಾಗಿ ಅಧಿಕಾರಿಗಳೊಂದಿಗೆ ಮಾತನಾಡಲು ಬಂದಿದ್ದೆ ಎಂದು ತಿಳಿಸಿದರು.

ಹಿಂದಿನ ಲೇಖನನೀತಿ ಸಂಹಿತೆ ಉಲ್ಲಂಘನೆ: ಡಾ.ಸಿ.ಎನ್‌.ಅಶ್ವತ್ಥ ನಾರಾಯಣ ವಿರುದ್ಧ ಎಫ್‌ಐಆರ್‌
ಮುಂದಿನ ಲೇಖನವಂದಿತಾ ಶರ್ಮಾ ಸರ್ಕಾರದ ನೂತನ ಮುಖ್ಯ ಕಾರ್ಯದರ್ಶಿ