ಮನೆ ಸುದ್ದಿ ಜಾಲ ಆರೋಗ್ಯ ಇಲಾಖೆ ಕಾರ್ಯಕ್ರಮದಲ್ಲಿ ಉರ್ದು ಬಳಕೆ ಮಾಡಿದ್ರೆ ಖಂಡಿಸುತ್ತೇನೆ – ಪ್ರದೀಪ್ ಈಶ್ವರ್

ಆರೋಗ್ಯ ಇಲಾಖೆ ಕಾರ್ಯಕ್ರಮದಲ್ಲಿ ಉರ್ದು ಬಳಕೆ ಮಾಡಿದ್ರೆ ಖಂಡಿಸುತ್ತೇನೆ – ಪ್ರದೀಪ್ ಈಶ್ವರ್

0

ಬೆಂಗಳೂರು : ಆರೋಗ್ಯ ಇಲಾಖೆ ಕಾರ್ಯಕ್ರಮದಲ್ಲಿ ಉರ್ದು ಬಳಕೆ ಮಾಡಿರೋ ವಿಚಾರ ಗೊತ್ತಿಲ್ಲ ಎಂದು ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಆರೋಗ್ಯ ಇಲಾಖೆ ಕಾರ್ಯಕ್ರಮದಲ್ಲಿ ಉರ್ದು ಭಾಷೆ ಬಳಕೆ ಮಾಡಿರೋ ಬಗ್ಗೆ ನನಗೆ ಗೊತ್ತಿಲ್ಲ. ನನ್ನ ಗಮನಕ್ಕೆ ಬಂದಿಲ್ಲ. ತಿಳಿದುಕೊಂಡು ಹೇಳುತ್ತೇನೆ ಎಂದರು.

ನಮ್ಮಲ್ಲಿ ಕನ್ನಡಕ್ಕೆ ಮೊದಲ ಆದ್ಯತೆ. ನಮ್ಮ ಮಣ್ಣಿನ ಭಾಷೆ, ನಮ್ಮ ತಾಯಿ ಭಾಷೆ ಕನ್ನಡನೇ. ಬೇರೆ ಭಾಷೆಗಳು ಹೊಟ್ಟೆ ತುಂಬಿಸಿಕೊಳ್ಳೋಕೆ, ಬದುಕು ಕಟ್ಟಿಕೊಳ್ಳೋಕೆ. ಕನ್ನಡ ಭಾಷೆ ಮಾತ್ರ ಭಾವನೆ ಜೊತೆ ಇರೋದು.ಅಂತಹದ್ದು ನಡೆದಿದ್ದರೆ ನಾನು ನಾಳೆ ಬಂದು ಖಂಡಿಸುತ್ತೇನೆ ಅಂತ ತಿಳಿಸಿದರು.