ಮನೆ ರಾಜಕೀಯ ಸಚಿವ ಜೆ.ಸಿ.ಮಾಧುಸ್ವಾಮಿಗೆ ಟಿಕೆಟ್ ಕೊಟ್ಟರೆ ನಾನು ಸೋಲಿಸುತ್ತೇನೆ: ಸಂಸದ ಜಿ.ಎಸ್.ಬಸವರಾಜ್

ಸಚಿವ ಜೆ.ಸಿ.ಮಾಧುಸ್ವಾಮಿಗೆ ಟಿಕೆಟ್ ಕೊಟ್ಟರೆ ನಾನು ಸೋಲಿಸುತ್ತೇನೆ: ಸಂಸದ ಜಿ.ಎಸ್.ಬಸವರಾಜ್

0

ತುಮಕೂರು:  ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಬಿಜೆಪಿಯಲ್ಲಿ ಬಹಿರಂಗ ಕಿತ್ತಾಟ ಪ್ರಾರಂಭವಾಗಿದ್ದು, ಮಾಜಿ ಸಚಿವ ಮಾಧುಸ್ವಾಮಿ ವಿರುದ್ಧ ಸಂಸದ ಜಿ.ಎಸ್.ಬಸವರಾಜ್ ಅಸಮಧಾನ ಹೊರಹಾಕಿದ್ದಾರೆ.

ಸಂಸದ ಜಿ ಎಸ್ ಬಸವರಾಜ ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿಗೆ ಟಿಕೆಟ್ ಕೊಟ್ಟರೆ ನಾನು  ಸೋಲಿಸುತ್ತೇನೆ. ಅವರಿಗೆ ಟಿಕೆಟ್ ಕೊಟ್ಟರೆ ಅವರ ವಿರುದ್ಧ ಕೆಲಸ ಮಾಡುತ್ತೇನೆ. ಬೇರೆ ಯಾವುದೇ ಸಾಮಾನ್ಯ ಕಾರ್ಯಕರ್ತನಿಗೆ ಟಿಕೆಟ್ ಕೊಟ್ಟರೂ ಕೆಲಸ ಮಾಡುತ್ತೇನೆ. ಇದು ನನ್ನ ಖಚಿತವಾದ ನಿಲುವು ಎಂದು ಹೇಳಿದ್ದಾರೆ.

ಒಬ್ಬ ಸಂಸದನಾಗಿ ನಾನು ಅವರ ಕಚೇರಿಗೆ ಹೋದರೆ ಗೌರವ ಕೊಟ್ಟಿರಲಿಲ್ಲ. ಅರ್ಧಗಂಟೆ ಕಾಯಿಸಿದ್ರು..? ಅಂಥವರ ಪರ ನಾನು ಕೆಲಸ ಮಾಡಲ್ಲ. ಮಾಧುಸ್ವಾಮಿಗೆ ಟಿಕೆಟ್ ಕೊಟ್ಟರೆ ಅವರು ಗೆಲ್ತಾರಾ? ಯಾವ ಜನನೂ ಅವರಿಗೆ ಮತ ಹಾಕಲ್ಲ. ಮುದ್ದಹನುಮೇಗೌಡರಿಗೆ ಕಾಂಗ್ರೆಸ್ ನಿಂದ ಟಿಕೆಟ್ ಫೈನಲ್ ಆಗಿದೆ. ಆದರೆ ಈಬಾರಿ ಕುಂಚಿಟಿಗರು ಯಾರೂ ಮುದ್ದಹನುಮೇಗೌಡರಿಗೆ ಮತ ಹಾಕಲ್ಲ ಎಂದು ತಿಳಿಸಿದರು.

ಶೋಭಾ ಕರಂದ್ಲಾಜೆ ತುಮಕೂರಿಗೆ ಯಾಕೆ ಬರುತ್ತಾರೆ.  ಸದಾನಂದ ಗೌಡರ ಕ್ಷೇತ್ರದಿಂದ ಶೋಭಾ ಕರಂದ್ಲಾಜೆ ಸ್ಪರ್ಧೆ ಮಾಡುವ ಸಾಧ್ಯತೆ ಇದೆ. ಸಿಟಿ ರವಿ ಅವರು ಉಡುಪಿ ಚಿಕ್ಕಮಗಳೂರು ಕ್ಷೇತ್ರದಿಂದ ಕಣಕ್ಕಿಳಿಯುತ್ತಾರೆ. ವಿ.ಸೋಮಣ್ಣ ರಾಜ್ಯಸಭೆಗೆ ಸ್ಪಧಿಸುತ್ತಾರೆ ಎಂದು ಹೇಳಿಕೆ ಕೊಟ್ಟಿದ್ದಾರೆ.

ಹಿಂದಿನ ಲೇಖನಶಾಹಿ ಈದ್ಗಾ ಮಸೀದಿಯಲ್ಲಿ ಸರ್ವೇ: ಅಲಹಾಬಾದ್ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್ ತಾತ್ಕಾಲಿಕ ತಡೆ
ಮುಂದಿನ ಲೇಖನಮಹಿಳೆ ಮತ್ತು ಮಕ್ಕಳ ಮೇಲಿನ  ದೌರ್ಜನ್ಯದ ಪ್ರಕರಣಗಳಿಗೆ ಸಂಪೂರ್ಣ ಕಡಿವಾಣ ಹಾಕಿ: ಸಿಎಂ ಸೂಚನೆ