ಮನೆ ರಾಜಕೀಯ ಬಿಜೆಪಿ ತತ್ವ ಸಿದ್ಧಾಂತಗಳು ಪಥ್ಯ ಆಗಲಿಲ್ಲ ಎಂದರೆ ಎಚ್.ವಿಶ್ವನಾಥ್ ಪಕ್ಷ ಬಿಟ್ಟು ಹೋಗಲಿ: ಪ್ರತಾಪ್ ಸಿಂಹ

ಬಿಜೆಪಿ ತತ್ವ ಸಿದ್ಧಾಂತಗಳು ಪಥ್ಯ ಆಗಲಿಲ್ಲ ಎಂದರೆ ಎಚ್.ವಿಶ್ವನಾಥ್ ಪಕ್ಷ ಬಿಟ್ಟು ಹೋಗಲಿ: ಪ್ರತಾಪ್ ಸಿಂಹ

0

ಮೈಸೂರು(Mysuru): ಎಚ್.ವಿಶ್ವನಾಥ್ ಅವರೇ ನಿಮಗೆ ಬಿಜೆಪಿ ತತ್ವ ಸಿದ್ಧಾಂತಗಳು ಪಥ್ಯ ಆಗಲಿಲ್ಲ ಅಂದರೆ ಯಾಕೆ ಬಿಜೆಪಿಯಲ್ಲಿದ್ದೀರಿ, ಅವರು ಬೇರೆ ಕಡೆ ಹೋಗಬಹುದಲ್ಲ ಎಂದು ಮೈಸೂರು ಮತ್ತು ಕೊಡಗು ಸಂಸದ ಪ್ರತಾಪ್ ಸಿಂಹ ಪ್ರಶ್ನಿಸಿದ್ದಾರೆ.

ಅಶೋಕಪುರಂ ರೈಲ್ವೆ ನಿಲ್ದಾಣದ ಸ್ಟೇಬಲ್ ಲೈನ್ ಕಾಮಗಾರಿ ಪರಿಶೀಲನೆ ನಂತರ ಮಾಧ್ಯಮದವರ ಜತೆಗೆ ಮಾತನಾಡಿದ ಅವರು, ಸಂಸದ ವಿ ಶ್ರೀನಿವಾಸ್ ಪ್ರಸಾದ್ ಮತ್ತು ವಿಧಾನ ಪರಿಷತ್​ ಸದಸ್ಯ ಹೆಚ್​ ವಿಶ್ವನಾಥ್ ಅವರ ಕಿತ್ತಾಟದ ಕುರಿತು ಪ್ರತಿಕ್ರಿಯಿಸಿದರು.

ಪಕ್ಷದಲ್ಲಿದ್ದುಕೊಂಡು ಅವರಿವರನ್ನು ಯಾಕೆ ಪ್ರತಿದಿನ ಚುಚ್ಚೋದು, ತಿವಿಯೋದು ಮಾಡುತ್ತೀರಾ? ಈಗಾಗಲೇ ಜನ ಬೇಸತ್ತು ನಿಮಗೆ ಎಚ್ಚರಿಕೆ ಸಂದೇಶ ಕೊಟ್ಟಿದ್ದಾರೆ. ಆದರೂ ನೀವು ಬುದ್ಧಿ ಕಲಿಯುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.

ಶ್ರೀನಿವಾಸ್ ಪ್ರಸಾದ್ ಮೈಸೂರು ಭಾಗದಲ್ಲಿ ಒಬ್ಬ ಪ್ರಶ್ನಾತೀತ ನಾಯಕ. ಅವರ ಬಗ್ಗೆ ನಮಗೆ ತುಂಬಾ ಗೌರವವಿದೆ. ಸಾರ್ವಜನಿಕ ವಲಯದಲ್ಲಿ ಅವರು ಏನೇ ಮಾತಾಡಿದರೂ ತೂಕವಿರುತ್ತೆ. ಅವರ ಬಗ್ಗೆ ಯಾರೇ ಏನೇ ಮಾತನಾಡಿದರೂ ನನಗೆ ವೈಯಕ್ತಿಕವಾಗಿ ನೋವಾಗುತ್ತದೆ ಎಂದು ಹೇಳಿದರು.

ಹಿಂದಿನ ಲೇಖನವಾಹನ ನೋಂದಣಿ ನಿಯಮ ಸಡಿಲಿಕೆ: ಬಿಎಸ್ ಸರಣಿಗೆ ಬದಲಾವಣೆ ಮಾಡಿಕೊಳ್ಳಲು ಅವಕಾಶ
ಮುಂದಿನ ಲೇಖನನಂಜನಗೂಡಿನ ಶ್ರೀಕಂಠೇಶ್ವರ ದೇವಸ್ಥಾನದ ಹುಂಡಿ ಎಣಿಕೆ: 2.40 ಕೋಟಿ ರೂ. ಸಂಗ್ರಹ