ಪ್ರತಿಯೊಬ್ಬ ವ್ಯಕ್ತಿಯು ಊಟದ ನಂತರ ವಿಶ್ರಾಂತಿ ಪಡೆಯುವ ವಿಭಿನ್ನ ಮಾರ್ಗವನ್ನು ಹೊಂದಿರುತ್ತಾನೆ. ಕೆಲವರು ಆರಾಮ ತೆಗೆದುಕೊಳ್ಳಲು ಬಯಸಿದರೆ ಇನ್ನೂ ಕೆಲವರು ಬೇರೆ ಬೇರೆ ರೀತಿಯ ಅಭ್ಯಾಸವನ್ನು ಹೊಂದಿರುತ್ತಾರೆ. ಆದರೆ ಊಟದ ಬಳಿಕ ನಾವು ಮಾಡುವ ಈ ತಪ್ಪುಗಳು ನಮ್ಮ ಆರೋಗ್ಯದ ಮೇಲೆ ಪರಿಣಾಮಬೀರಬಲ್ಲವು.
ಊಟದ ನಂತರ ನಿದ್ದೆ
ಊಟದ ನಂತರ ಚಿಕ್ಕನಿದ್ರೆ ಮಾಡುವುದು ಮನಸ್ಸಿಗೆ ಉಲ್ಲಾಸವನ್ನು ನೀಡುವ ಅನುಭವವನ್ನು ಮಾಡಬಲ್ಲದು. ಆದರೆ ಊಟದ ನಂತರ ತಕ್ಷಣ ಮಲಗುವುದು ಜೀರ್ಣಕ್ರಿಯೆಗೆ ಅಡ್ಡಿಯನ್ನುಂಟು ಮಾಡಬಲ್ಲದು.
ಆಹಾರದ ಕಣಗಳನ್ನು ಕರಗಿಸಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಹಾಗಾಗಿ ಹೊಟ್ಟೆ ತುಂಬಾ ತಿಂದ ತಕ್ಷಣ ನಿದ್ದೆ ಮಾಡುವುದನ್ನು ತಪ್ಪಿಸುವುದು ಒಳ್ಳೆಯದು.
ಧೂಮಪಾನ ಮಾಡಬಾರದು
ಕೆಲವರಿಗೆ ಊಟವಾದ ತಕ್ಷಣ ಸಿಗರೇಟ್ ಸೇದುವ ಅಭ್ಯಾಸವಿರುತ್ತದೆ. ನಿಮಗೂ ಆ ಅಭ್ಯಾಸವಿದ್ದರೆ ತಕ್ಷಣ ನಿಲ್ಲಿಸುವುದು ಉತ್ತಮ. ಯಾಕೆಂದರೆ ಊಟವಾದ ತಕ್ಷಣ ಸಿಗರೇಟ್ ಸೇದುವುದು ನಿಮ್ಮ ಆರೋಗ್ಯ ಹಾಗೂ ಚಯಾಪಚಯದ ಮೇಲೆ ಪರಿಣಾಮ ಬೀರುತ್ತದೆ. ಊಟದ ತಕ್ಷಣ ಸಿಗರೇಟ್ ಸೇದುವುದು ೧೦ ಸಿಗರೇಟ್ ಸೇದಿರುವುದಕ್ಕೆ ಸಮ ಎನ್ನಲಾಗುತ್ತದೆ.
ಚಹಾ ಕುಡಿಯುವುದು
ಹೆಚ್ಚಿನವರಿಗೆ ಊಟದ ಬಳಿಕೆ ಚಹಾ ಕುಡಿಯುವ ಅಭ್ಯಾಸವಿದೆ. ಆದರೆ ಇದು ಆರೋಗ್ಯಕ್ಕೆ ಒಳ್ಳೆಯದಲ್ಲ ಎನ್ನುವುದು ತಿಳಿದಿರಲಿ. ಚಹಾದಲ್ಲಿರುವ ಕೆಫಿನ್ ಜೀರ್ಣಕ್ರಿಯೆಗೆ ಅಡ್ಡಿಯನ್ನುಂಟು ಮಾಡುತ್ತದೆ.
ಇದು ನಮ್ಮ ಆಹಾರದಲ್ಲಿದ್ದ ಪ್ರೋಟೀನ್ ಅಂಶವನ್ನು ನಾಶಮಾಡುತ್ತದೆ. ಜೊತೆಗೆ ಕಬ್ಬಿಣಾಂಶವನ್ನು ಹೀರಿಕೊಳ್ಳುತ್ತದೆ . ಆದ್ದರಿಂದ ಊಟದ ತಕ್ಷಣ ಚಹಾ ಕುಡಿಯುವ ಅಭ್ಯಾಸವನ್ನು ಬಿಟ್ಟುಬಿಡಬೇಕು.
ಸ್ನಾನ ಮಾಡುವುದನ್ನು ತಪ್ಪಿಸಿ
ಕೆಲವರು ಊಟ ಆದ ಮೇಲೆ ಸ್ನಾನ ಮಾಡುತ್ತಾರೆ. ಅದರಲ್ಲೂ ಕೆಲವೊಮ್ಮೆ ರಾತ್ರಿ ಊಟವಾದ ನಂತರ ಮಲಗುವಾಗ ಸ್ನಾನ ಮಾಡಿ ಮಲಗಿದರೆ ಫ್ರೆಶ್ ಆಗಿರುವುದಲ್ಲದೆ, ನಿದ್ದೆ ಚೆನ್ನಾಗಿ ಬರುತ್ತದೆ ಎನ್ನುವ ಕಾರಣಕ್ಕೆ ಊಟದ ತಕ್ಷಣ ಸ್ನಾನ ಮಾಡುತ್ತಾರೆ.
ಇದು ಹೊಟ್ಟೆಯ ಸುತ್ತಲೂ ರಕ್ತದ ಸಂಚಾರಕ್ಕೆ ಅಡ್ಡಿಯನ್ನುಂಟು ಮಾಡುತ್ತದೆ. ಸ್ನಾನ ಮಾಡುವುದರಿಂದ ದೇಹದ ಇತರ ಭಾಗಗಳಿಗೆ ರಕ್ತಸಂಚಾರವಾಗುವುದರಿಂದ ಜೀರ್ಣಕ್ರಿಯೆಗೆ ತೊಂದರೆಯಾಗುತ್ತದೆ.
ಹಣ್ಣನ್ನು ಸೇವಿಸದಿರಿ
ನಮಗೆಲ್ಲರಿಗೂ ಗೊತ್ತಿರುವ ಹಾಗೆ ಹಣ್ಣಿನ ಸೇವನೆಯು ಆರೋಗ್ಯಕರ. ಆದರೆ ಊಟದ ತಕ್ಷಣ ಹಣ್ಣನ್ನು ಸೇವಿಸುವುದು ಅರ್ಜೀಣಕ್ಕೆ ಕಾರಣವಾಗಬಲ್ಲದು. ಹಣ್ಣುಗಳನ್ನು ಸೇವಿಸಲು ಉತ್ತಮ ಸಮಯವೆಂದರೆ ಊಟದ ಎರಡು ಗಂಟೆ ನಂತರ ಅಥವಾ ಊಟದ ಎರಡು ಗಂಟೆ ಮೊದಲು.
ಹೀಗೆ ಮಾಡುವುದರಿಂದ ಹಣ್ಣಿನಲ್ಲಿರುವ ಪೋಷಕಾಂಶಗಳು ದೇಹಕ್ಕೆ ಸೇರುತ್ತದೆ, ಜೀರ್ಣಕ್ರಿಯೆಯೂ ಉತ್ತಮವಾಗುತ್ತದೆ.
ಡೆಂಗ್ಯೂ ಜ್ವರದ ಆತಂಕದಲ್ಲಿ ಮೈಸೂರಿನ ಕೆ ಆರ್ ಒನ್ ಬೆಟ್ಟದಪುರದ ಜನರು!
ಗುಜರಾತ್ ಕರಕುಶಲ ಉತ್ಸವದ ಸದುಪಯೋಗ ಪಡೆದುಕೊಳ್ಳಿ: ಕೆ ಎಂ ಗಾಯಿತ್ರಿ
ನ್ಯಾಯಾಲಯದಲ್ಲಿ ಜವಾನ ಹುದ್ದೆಗಳ ಭರ್ತಿಗೆ ಅಧಿಸೂಚನೆ !
ಮೂಡ ಹಗರಣಕ್ಕೆ ಸಂಬಂಧಿಸಿದ ವ್ಯಕ್ತಿಯ ಅಮಾನತು ಮಾಡುವಂತೆ ಪ್ರತಿಭಟನೆ
ಗುಜರಾತ್ ಹ್ಯಾಂಡಿಕ್ರಾಫ್ಟ್ ಉತ್ಸವ -2024 ಕುರಿತು ಪತ್ರಿಕಾಗೋಷ್ಠಿಯನ್ನು ಏರ್ಪಡಿಸಲಾಯಿತು
T20 ವಿಶ್ವ ಚಾಂಪಿಯನ್ ಟೀಮ್ ಇಂಡಿಯಾವನ್ನು ಭೇಟಿ ಮಾಡಿದ ಪ್ರಧಾನಿ ಮೋದಿ
4,000 ಕೋಟಿ ಬ್ರಹ್ಮಾಂಡ ಭ್ರಷ್ಟಾಚಾರ ಹಗರಣ ವಿರೋಧಿಸಿ ಪ್ರತಿಭಟನೆ
ಗ್ರಾಮ ಪಂಚಾಯಿತಿಗಳಲ್ಲೇ, ಜನನ ಮತ್ತು ಮರಣ, 'ಪ್ರಮಾಣ ಪತ್ರ' ದೊರೆಯುತ್ತದೆ.
ಮಿನಿ ಉದ್ಯೋಗ ಮೇಳ..!
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.