ಮನೆ ಕಾನೂನು ಬೈಕ್‌ ಕಳ್ಳತನ ತಡೆಗೆ ಸೈರನ್‌ ಅಳವಡಿಸಿ: ಕಮಿಷನರ್‌ ಬಿ. ದಯಾನಂದ

ಬೈಕ್‌ ಕಳ್ಳತನ ತಡೆಗೆ ಸೈರನ್‌ ಅಳವಡಿಸಿ: ಕಮಿಷನರ್‌ ಬಿ. ದಯಾನಂದ

0

ಬೆಂಗಳೂರು: ನಗರದಲ್ಲಿ ದ್ವಿಚಕ್ರ ವಾಹನ ಕಳವು ತಡೆಗಟ್ಟುವ ನಿಟ್ಟಿನಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ದ್ವಿಚಕ್ರ ವಾಹನಗಳ ಮಾರಾಟ ಸಂದರ್ಭದಲ್ಲಿ ಕೆಲ ಸುರಕ್ಷಿತ ಪರಿಕರಗಳನ್ನು ಅಳವಡಿಸುವಂತೆ ನಗರದ ದ್ವಿಚಕ್ರ ವಾಹನಗಳ ವಿತರ ಕರಿಗೆ ಪತ್ರ ಬರೆಯು ವುದಾಗಿ ನಗರದ ಪೊಲೀಸ್‌ ಆಯುಕ್ತ ಬಿ. ದಯಾನಂದ ತಿಳಿಸಿದ್ದಾರೆ.

Join Our Whatsapp Group

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದಲ್ಲಿ ದ್ವಿಚಕ್ರ ವಾಹನಗಳ ಕಳವು ಹೆಚ್ಚಳವಾಗಿದ್ದು, ದ್ವಿಚಕ್ರ ವಾಹನಗಳಲ್ಲಿ ಸುರಕ್ಷಿತ ಪರಿಕರಗಳು ಸಮಂಜಸವಾಗಿಲ್ಲದ ಕಾರಣ ಕಳ್ಳರು ಸುಲಭವಾಗಿ ದ್ವಿಚಕ್ರ ವಾಹನಗಳ ಕಳ್ಳತನ ಮಾಡುತ್ತಿದ್ದಾರೆ.ಹೀಗಾಗಿ ನಗರದಲ್ಲಿ ದ್ವಿಚಕ್ರ ವಾಹನಗಳ ಕಳವು ತಡೆ ನಿಟ್ಟಿನಲ್ಲಿ ದ್ವಿಚಕ್ರ ವಾಹನ ಮಾರಾಟ ಸಂದರ್ಭದಲ್ಲಿ ಅತ್ಯಾಧುನಿಕ ಪರಿಕರಗಳನ್ನು ಅಳವಡಿಸಿ, ಗ್ರಾಹಕರಿಗೆ ಮಾಹಿತಿ ನೀಡುವಂತೆ ನಗರದ ದ್ವಿಚಕ್ರ ವಾಹನಗಳ ವಿತರಕರಿಗೆ ಪತ್ರ ಬರೆಯಲು ತೀರ್ಮಾನಿಸಲಾಗಿದೆ ಎಂದು ಮಾಹಿತಿ ನೀಡಿದರು.

ಜಿಪಿಎಸ್‌, ವೀಲ್‌ಲಾಕ್‌, ಪ್ರಬಲ ಹ್ಯಾಂಡಲ್‌ ಲಾಕ್‌:

ದ್ವಿಚಕ್ರ ವಾಹನಗಳ ಮಾರಾಟದ ವೇಳೆ ಜಿಪಿಎಸ್‌ ಸಿಸ್ಟಂ, ವೀಲ್‌ ಲಾಕಿಂಗ್‌, ಪ್ರಬಲ ಹ್ಯಾಂಡಲ್‌ ಲಾಕ್‌, ನಕಲಿ ಕೀ ಅಥವಾ ಸರ್ಕ್ನೂಟ್‌ ಬ್ರೇಕ್‌ ಮಾಡಿ ವಾಹನ ಕಳ್ಳತನಕ್ಕೆ ಯತ್ನಿಸಿದಾಗ ಸೈರನ್‌ ಆಗುವಂತಹ ವ್ಯವಸ್ಥೆ ಅಥವಾ ಮೊಬೈಲ್‌ಗೆ ಮಾಹಿತಿ ಬರುವಂತಹ ವ್ಯವಸ್ಥೆ ಮಾಡಬೇಕು ಸೇರಿ ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಆ್ಯಂಟಿ ಥೆಫ್ಟ್ ಮೆಷರ್ಸ್‌ ಅಳವಡಿಸುವಂತೆ ಡಿಸ್ಟ್ರಿಬ್ಯೂಟರ್‌ಗಳಿಗೆ ಸೂಚಿಸ ಲಾಗುವುದು.

ಅದರಿಂದ ದ್ವಿಚಕ್ರ ವಾಹನಗಳ ಕಳವು ನಿಯಂತ್ರಿಸಲು ಸಹಕಾರಿಯಾಗಲಿದೆ. ಈ ಬಗ್ಗೆ ಇತ್ತೀಚೆಗೆ ನಡೆದ ದ್ವಿಚಕ್ರ ವಾಹನಗಳ ಉತ್ಪಾದಕರ ಸಮ್ಮೇಳನದಲ್ಲಿಯೂ ಗಮನ ಸೆಳೆಯಲಾಗಿದೆ. ಸಾರ್ವಜನಿಕರು ಸಹ ಕೈಗೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆಯೂ ತಿಳಿಸುವುದಾಗಿ ಹೇಳಿದರು. ಹಾಗೆಯೇ ವಾಹನ ಮಾಲೀಕರು ಕೂಡ ಕೆಲವೊಂದು ಕ್ರಮಕೈಗೊಳ್ಳಬೇಕಾಗುತ್ತದೆ. ನಿರ್ಜನ ಪ್ರದೇಶ ಹಾಗೂ ಸಿಸಿ ಕ್ಯಾಮೆರ ಇಲ್ಲದ ಸ್ಥಳದಲ್ಲಿ ನಿಲುಗಡೆ ಮಾಡಬಾರದು ಎಂದು ಆಯುಕ್ತರು ಕೋರಿದ್ದಾರೆ.

ರಾಜಧಾನಿಯಲ್ಲಿ ಪ್ರತಿದಿನ 16 ಬೈಕ್‌ ಕಳವು

ನಗರದಲ್ಲಿ ಒಟ್ಟು ಸುಮಾರು 80 ಲಕ್ಷ ದ್ವಿಚಕ್ರ ವಾಹನಗಳಿವೆ. ಪ್ರತಿದಿನ ಸುಮಾರು ಒಂದೂವರೆಯಿಂದ ಎರಡು ಸಾವಿರ ದ್ವಿಚಕ್ರ ವಾಹನಗಳು ಹೊಸದಾಗಿ ನೋಂದಣಿಯಾಗುತ್ತಿವೆ. ಈ ಪೈಕಿ ಕಳೆದ 3 ವರ್ಷಗಳಿಂದ ನಿತ್ಯ ಸರಾಸರಿ ಸುಮಾರು 14ರಿಂದ 16 ದ್ವಿಚಕ್ರ ವಾಹನಗಳು ಕಳ್ಳತನವಾಗುತ್ತಿವೆ. ಕಳೆದ 3 ವರ್ಷಗಳಲ್ಲಿ ನಗರದ ವಿವಿಧ ಪೊಲೀಸ್‌ ಠಾಣೆಗಳಲ್ಲಿ 13,628 ದ್ವಿಚಕ್ರ ವಾಹನ ಕಳವು ಪ್ರಕರಣಗಳು ದಾಖಲಾಗಿವೆ. ಅದರಂತೆ 2022-4,785, 2023-5,580, 2024(ಆ.31)- 3,263 ದ್ವಿಚಕ್ರ ವಾಹನಗಳು ಕಳ್ಳತನವಾಗಿವೆ. ಈ ಪೈಕಿ 4,420 ಪ್ರಕರಣಗಳು ಪತ್ತೆಯಾಗಿವೆ ಎಂದು ಪೊಲೀಸರು ಮಾಹಿತಿ ನೀಡಿದರು.