ಮನೆ ಸ್ಥಳೀಯ ಒಂದು ಹುದ್ದೆಗಾಗಿ ಇಬ್ಬರು ಅಧಿಕಾರಿಗಳ ನಡುವೆ ಜಟಾಪಟಿ: ಸಾರ್ವಜನಿಕರು ಹೈರಾಣ

ಒಂದು ಹುದ್ದೆಗಾಗಿ ಇಬ್ಬರು ಅಧಿಕಾರಿಗಳ ನಡುವೆ ಜಟಾಪಟಿ: ಸಾರ್ವಜನಿಕರು ಹೈರಾಣ

0

ಮೈಸೂರು:  ಹೂಟಗಳ್ಳಿ ನಗರಸಭೆಯ ಕಮಿಷನರ್ ಹುದ್ದೆಗಾಗಿ ಇಬ್ಬರು ಅಧಿಕಾರಿಗಳ ಕಿತ್ತಾಟ ನಡೆಸಿರುವ ಘಟನೆ ಮೈಸೂರಿನ ಹೂಟಗಳ್ಳಿ ನಗರಸಭೆಯಲ್ಲಿ ನಡೆದಿದೆ.

ಹೂಟಗಳ್ಳಿ ನಗರಸಭೆ ಕಮಿಷನರ್ ಸಂದೀಪ್ ಮತ್ತು ಈ ಹಿಂದೆ ಹೂಟಗಳ್ಳಿ ನಗರಸಭೆ ಕಮಿಷನರ್ ಆಗಿದ್ದ ನರಸಿಂಹಮೂರ್ತಿ ನಡುವೆ ಕಿತ್ತಾಟ ನಡೆದಿದೆ. ಈ ಸಂಬಂಧ ಇಬ್ಬರು ಅಧಿಕಾರಿಗಳು ಕೋರ್ಟ್ ಮೆಟ್ಟಿಲೇರಿದ್ದಾರೆ.

ನೆನ್ನೆ ಏಕಾಏಕಿ ಹೂಟಗಳ್ಳಿ ನಗರಸಭೆಗೆ ಭೇಟಿ ಆಗಮಿಸಿದ್ದ ನರಸಿಂಹಮೂರ್ತಿ, ಕಮಿಷನರ್ ಕೊಠಡಿಗೆ ಬೀಗ ಹಾಕಿ ವಾಹನ ತೆಗೆದುಕೊಂಡು ಹೋಗಿದ್ದಾರೆ. ಇದರಿಂದಾಗಿ ಕಮಿಷನರ್ ಸಂದೀಪ್ ಕೊಠಡಿ ಮುಂದೆ ಟೇಬಲ್ ಹಾಕಿ ಕುಳಿತು ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಪ್ರಸ್ತುತ ನಗರಸಭೆ ಕಮಿಷನರ್ ಸಂದೀಪ್ ರಿಂದ ನರಸಿಂಹಮೂರ್ತಿ ವಿರುದ್ಧ ವಿಜಯನಗರ ಪೊಲೀಸ್ ಠಾಣೆಗೆ ದೂರು ಸಲ್ಲಿಸಲಾಗಿದ್ದು, ವಿಜಯನಗರ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.

ಇಬ್ಬರು ಅಧಿಕಾರಿಗಳ ಕಿತ್ತಾಟದಿಂದ  ಸಾರ್ವಜನಿಕರಯ ಹೈರಾಣಾಗಿದ್ದಾರೆ.

ಹಿಂದಿನ ಲೇಖನಹಿಮವದ್ ಗೋಪಾಲಸ್ವಾಮಿ ದೇವಸ್ಥಾನದ ಸುತ್ತಮುತ್ತಲಿನ ಪ್ರದೇಶದಲ್ಲಿ ಡ್ರೋನ್, ಕ್ಯಾಮರಾ ಚಿತ್ರೀಕರಣ ನಿಷೇಧ
ಮುಂದಿನ ಲೇಖನಗುಂಡಿಕ್ಕಿ ಕೊಲ್ಲಿ: ಕೆ ಎಸ್​.ಈಶ್ವರಪ್ಪ ಹೇಳಿಕೆಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಕಿಡಿ