ಮನೆ ರಾಜ್ಯ ಕಬಿನಿ, ಕೆಆರ್’ಎಸ್ ಜಲಾಶಯ ಭರ್ತಿ: ಜು.20 ರಂದು ಬಾಗೀನ ಅರ್ಪಿಸಲಿರುವ ಸಿಎಂ ಬೊಮ್ಮಾಯಿ

ಕಬಿನಿ, ಕೆಆರ್’ಎಸ್ ಜಲಾಶಯ ಭರ್ತಿ: ಜು.20 ರಂದು ಬಾಗೀನ ಅರ್ಪಿಸಲಿರುವ ಸಿಎಂ ಬೊಮ್ಮಾಯಿ

0

ಬೆಂಗಳೂರು(Bengaluru):  ರಾಜ್ಯದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಕಬಿನಿ, ಕೆ ಆರ್.ಎಸ್ ಜಲಾಶಯಗಳು ಭರ್ತಿಯಾಗಿದ್ದು, ಜುಲೈ 20 ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಾಗೀನ ಅರ್ಪಿಸಲಿದ್ದಾರೆ.

ಜುಲೈ 20 ರಂದು ಬೆಳಗ್ಗೆ  9:30ಕ್ಕೆ ಮೈಸೂರಿಗೆ ಆಗಮಿಸಲಿರುವ ಸಿಎಂ ಬೊಮ್ಮಾಯಿ 9:45 ಕ್ಕೆ ಚಾಮುಂಡಿ ತಾಯಿಯ ದರ್ಶನ  ಪಡೆಯಲಿದ್ದಾರೆ.

ನಂತರ ಹೆಲಿಕ್ಯಾಪ್ಟರ್ ಮೂಲಕ ಕಬಿನಿ  ಜಲಾಶಯಕ್ಕೆ ಪ್ರಯಾಣ ಬೆಳೆಸಲಿರುವ ಸಿಎಂ ಬೊಮ್ಮಾಯಿ, ಸುಮಾರು 11:30ಕ್ಕೆ ಜಲಾಶಯಲಕ್ಕೆ ಬಾಗೀನ ಅರ್ಪಣೆ ಮಾಡಲಿದ್ದಾರೆ. ಕಬಿನಿ ನಂತರ ಕೆ.ಆರ್.ಎಸ್  ಆಗಮಿಸಿ ಈ ಜಲಾಶಯಕ್ಕೂ ಬಾಗೀನ ಆರ್ಪಿಸಲಿದ್ದಾರೆ.

ಹಿಂದಿನ ಲೇಖನಉಪರಾಷ್ಟ್ರಪತಿ ಸ್ಥಾನಕ್ಕೆ ಎನ್ ಡಿಎ ಅಭ್ಯರ್ಥಿ ಜಗದೀಪ್ ಧಂಕರ್ ನಾಮಪತ್ರ ಸಲ್ಲಿಕೆ
ಮುಂದಿನ ಲೇಖನಸಿದ್ದರಾಮಯ್ಯ- ವಿ.ಶ್ರೀನಿವಾಸ ಪ್ರಸಾದ್ ಮುಖಾಮುಖಿ