ಡೆಂಗ್ಯೂ ಜ್ವರದ ಆತಂಕದಲ್ಲಿ ಮೈಸೂರಿನ ಕೆ ಆರ್ ಒನ್ ಬೆಟ್ಟದಪುರದ ಜನರು!
ಗುಜರಾತ್ ಕರಕುಶಲ ಉತ್ಸವದ ಸದುಪಯೋಗ ಪಡೆದುಕೊಳ್ಳಿ: ಕೆ ಎಂ ಗಾಯಿತ್ರಿ
ನ್ಯಾಯಾಲಯದಲ್ಲಿ ಜವಾನ ಹುದ್ದೆಗಳ ಭರ್ತಿಗೆ ಅಧಿಸೂಚನೆ !
ಮೂಡ ಹಗರಣಕ್ಕೆ ಸಂಬಂಧಿಸಿದ ವ್ಯಕ್ತಿಯ ಅಮಾನತು ಮಾಡುವಂತೆ ಪ್ರತಿಭಟನೆ
ಗುಜರಾತ್ ಹ್ಯಾಂಡಿಕ್ರಾಫ್ಟ್ ಉತ್ಸವ -2024 ಕುರಿತು ಪತ್ರಿಕಾಗೋಷ್ಠಿಯನ್ನು ಏರ್ಪಡಿಸಲಾಯಿತು
T20 ವಿಶ್ವ ಚಾಂಪಿಯನ್ ಟೀಮ್ ಇಂಡಿಯಾವನ್ನು ಭೇಟಿ ಮಾಡಿದ ಪ್ರಧಾನಿ ಮೋದಿ
4,000 ಕೋಟಿ ಬ್ರಹ್ಮಾಂಡ ಭ್ರಷ್ಟಾಚಾರ ಹಗರಣ ವಿರೋಧಿಸಿ ಪ್ರತಿಭಟನೆ
ಗ್ರಾಮ ಪಂಚಾಯಿತಿಗಳಲ್ಲೇ, ಜನನ ಮತ್ತು ಮರಣ, 'ಪ್ರಮಾಣ ಪತ್ರ' ದೊರೆಯುತ್ತದೆ.
ಮಿನಿ ಉದ್ಯೋಗ ಮೇಳ..!
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.
ಮೈಸೂರು(Mysuru): ಕನ್ನಡ ಚಳವಳಿ ಮೊದಲು ಆರಂಭವಾದದ್ದು ಮೈಸೂರಿನಲ್ಲಿ ಎಂದು ಸಮಾಜವಾದಿ ಕೋಣಂದೂರು ಲಿಂಗಪ್ಪ ಸ್ಮರಿಸಿದರು.
ಇಲ್ಲಿನ ನಟರಾಜ ಸಭಾ ಭವನದಲ್ಲಿ ನಟರಾಜ ಪ್ರತಿಷ್ಠಾನ, ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಸಾಹಿತ್ಯ ಕಲಾಕೂಟವು ಬುಧವಾರ ಆಯೋಜಿಸಿದ್ದ ಸಮಾಜವಾದಿ ಶಾಂತವೇರಿ ಗೋಪಾಲಗೌಡರ ಜನ್ಮಶತಮಾನೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.
ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಕಡಿದಾಳು ಶಾಮಣ್ಣ, ಸುಂದರೇಶ್, ಐತಾಳ ಅವರೊಂದಿಗೆ ‘ಕನ್ನಡ ಯುವಜನ ಸಭಾ’ ಸ್ಥಾಪಿಸಿದೆವು. 50–60ರ ದಶಕದಲ್ಲಿ ನಗರದಲ್ಲಿನ ಶೇ 75ರಷ್ಟು ಇಂಗ್ಲಿಷ್ ನಾಮಫಲಕಗಳನ್ನು ತೆಗೆಸಿ ಕನ್ನಡ ಕಡ್ಡಾಯಗೊಳಿಸಲಾಯಿತು. ಆ ನಂತರ ಚಳವಳಿ ರಾಜ್ಯದಾದ್ಯಂತ ವಿಸ್ತರಿಸಿತು ಎಂದು ತಿಳಿಸಿದರು.
ದೇಶದ ಪ್ರಾಥಮಿಕ ಭಾಷೆಗಳಲ್ಲಿಯೇ ಶಿಕ್ಷಣ ಇರಬೇಕೆಂದು ಮಹಾರಾಜ ಕಾಲೇಜಿನಲ್ಲಿ ನಡೆಯುತ್ತಿದ್ದ ಭಾರತೀಯ ವಿಶ್ವವಿದ್ಯಾಲಯಗಳ ಇಂಗ್ಲಿಷ್ ಅಧ್ಯಾಪಕರ ಸಭೆಯಲ್ಲಿ ಕರಪತ್ರ ಹಂಚಿದ್ದೆವು. ಕರಪತ್ರ ಪ್ರಕಟಣೆ ಖರ್ಚಿಗಾಗಿ ಕುವೆಂಪು ₹ 10 ನೀಡಿದ್ದರು. ಕನ್ನಡ ಯುವಜನ ಸಭಾದ ಕಾರ್ಯಗಳ ಹಿಂದೆ ಕುವೆಂಪು ಅವರಿದ್ದರು ಎಂದು ನೆನೆದರು.
ವಿಶ್ರಾಂತ ಕುಲಪತಿ ಡಾ.ಕೆ.ಚಿದಾನಂದಗೌಡ ಮಾತನಾಡಿ, ಶಾಂತವೇರಿ ಗೋಪಾಲಗೌಡು ರಾಜಕಾರಣಿಯಾಗಿರಲಿಲ್ಲ. ಅವರು ರಾಷ್ಟ್ರಕಾರಣಿ. ರಾಜಕಾರಣಿಗಳು ಚುನಾವಣಾ ರಾಜಕೀಯದಲ್ಲಿ ಹಾಗೂ ಗೆಲುವಿಗೆ ತಂತ್ರಗಳಲ್ಲಿ ಮುಳುಗಿದ್ದರೆ, ಗೋಪಾಲಗೌಡರಿಗೆ ರಾಷ್ಟ್ರೀಯ ಪ್ರಜ್ಞೆಯಿತ್ತು ಎಂದು ಹೇಳಿದರು.
ಮೌಲ್ಯಾಧಾರಿತ ರಾಜಕಾರಣದ ಪಾಠವನ್ನು ಕಲಿಸಿ ಹೋದರು. 49ನೇ ವರ್ಷಕ್ಕೇ ಮೃತಪಟ್ಟರೂ, ಅವರ ಬಗ್ಗೆ ಈಗಲೂ ಮಾತನಾಡುತ್ತೇವೆ. ಈಗಿನ ರಾಜಕಾರಣಿಗಳು ಅವರನ್ನು ದಾರಿದೀಪವೆಂದು ಪರಿಗಣಿಸಿ ಆದರ್ಶ ಅನುಸರಿಸಿದರೆ ಬಹಳಷ್ಟು ಬದಲಾವಣೆ ಆಗುತ್ತವೆ ಎಂದರು.
ಸಮಾಜವಾದಿ ಕೋಣಂದೂರು ಲಿಂಗಪ್ಪ ಅವರನ್ನು ಸನ್ಮಾನಿಸಲಾಯಿತು.
ವಿಶ್ರಾಂತ ಕುಲಪತಿ ಡಾ.ಕೆ.ಚಿದಾನಂದಗೌಡ, ಹೊಸಮಠದ ಚಿದಾನಂದ ಸ್ವಾಮೀಜಿ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಕೆ.ಮಡ್ಡೀಕೆರೆ ಗೋಪಾಲ್, ಕನ್ನಡ ಸಾಹಿತ್ಯ ಕಲಾಕೂಟದ ಅಧ್ಯಕ್ಷ ಎಂ.ಚಂದ್ರಶೇಖರ್, ಶಾಂತವೇರಿ ಗೋಪಾಲಗೌಡ ಸಮಾಜವಾದಿ ಪ್ರತಿಷ್ಠಾನದ ಕಾರ್ಯದರ್ಶಿ ರಾಮ ಮನೋಹರ ಶಾಂತವೇರಿ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಹೆಳವರಹುಂಡಿ ಸಿದ್ದಪ್ಪ, ನಟರಾಜ ಪ್ರತಿಷ್ಠಾನದ ವಿಶೇಷ ಅಧಿಕಾರಿ ಡಾ.ಎಸ್. ಶಿವರಾಜಪ್ಪ ಇದ್ದರು.