ಮನೆ ರಾಜ್ಯ ಕಸಾಪ  ಮೈಸೂರು ನಗರ ಅಧ್ಯಕ್ಷರಾಗಿ ಕೆ. ಎಸ್. ಶಿವರಾಮು ನೇಮಕ

ಕಸಾಪ  ಮೈಸೂರು ನಗರ ಅಧ್ಯಕ್ಷರಾಗಿ ಕೆ. ಎಸ್. ಶಿವರಾಮು ನೇಮಕ

0

ಮೈಸೂರು(Mysuru): ಕನ್ನಡ ಸಾಹಿತ್ಯ ಪರಿಷತ್’ನ ನಗರ ಘಟಕಗ ಅಧ್ಯಕ್ಷರಾಗಿ ಸಾಮಾಜಿಕ ಹೋರಾಟಗಾರ ಕೆ. ಎಸ್ ಶಿವರಾಮು ಅವರನ್ನು ನೇಮಕ ಮಾಡಲಾಗಿದೆ.

ನಾಡು-ನುಡಿ ಪರ ಹೋರಾಟಗಾರರಾಗಿ ಗುರುತಿಸಿಕೊಂಡಿರುವ ಕೆ. ಎಸ್ ಶಿವರಾಮು ಅವರು ಮಡೆಸ್ನಾನದಂತಹ ಸಾಮಾಜಿಕ ಅಸಮಾನತೆಯ ವಿರುದ್ಧ ಹೋರಾಟ ಮಾಡಿ ರಾಷ್ಟಮಟ್ಟದಲ್ಲಿ ಗಮನ ಸೆಳೆದು ಆ ಅಚರಣೆಯ ನಿಷೇಧಕ್ಕೆ ಕಾರಣರಾಗಿದ್ದರು.

ಇದೀಗ ಇವರನ್ನ ಕನ್ನಡ ಸಾಹಿತ್ಯ ಪರಿಷತ್ ನ ಮೈಸೂರು ನಗರ ಘಟಕಗ ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ.   ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್  ನ ಅಧ್ಯಕ್ಷರಾದ ಮಡ್ಡೀಕೆರೆ ಗೋಪಾಲ್ ನೇಮಕಾತಿ ಆದೇಶ ಪತ್ರವನ್ನು ನೀಡಿದರು. ಈ ವೇಳೆ ಹಿರಿಯ ಸಾಹಿತಿಗಳಾದ ಪ್ರೊ. ಸಿ. ಪಿ. ಕೆ ಹಾಗೂ ಪ್ರೊ. ವೆಂಕಟಚಲಶಾಸ್ತ್ರಿ, ಕ.ಸಾ.ಪ ನಿಕಟ ಪೂರ್ವ ಅಧ್ಯಕ್ಷರಾದ ವೈ. ಡಿ ರಾಜಣ್ಣ. ಎಂ, ಚಂದ್ರಶೇಖರ್, ಡಾ. ಸಿ. ವೆಂಕಟೇಶ್  ಉಪಸ್ಥಿತರಿದ್ದರು

ಹಿಂದಿನ ಲೇಖನಅ‌.15ರಂದು ರಾಷ್ಟ್ರೀಯ ಶಿಕ್ಷಣ ನೀತಿ ಕುರಿತು ಕಾರ್ಯಾಗಾರ:  ಪ್ರೊ.ಕೆ.ಎಸ್.ರಂಗಪ್ಪ
ಮುಂದಿನ ಲೇಖನಹಾವೇರಿ: ಸುತ್ತಿಗೆಯಿಂದ ಹೊಡೆದು ವ್ಯಕ್ತಿಯ ಕೊಲೆ