ಮನೆ ಸ್ಥಳೀಯ ಭಾರತದ ಇತಿಹಾಸ ಪುಟದಲ್ಲಿ ಕೆಂಪೇಗೌಡರ ಹೆಸರು ಚಿರಸ್ಥಾಯಿ :ಜಿ . ಟಿ ದೇವೇಗೌಡ

ಭಾರತದ ಇತಿಹಾಸ ಪುಟದಲ್ಲಿ ಕೆಂಪೇಗೌಡರ ಹೆಸರು ಚಿರಸ್ಥಾಯಿ :ಜಿ . ಟಿ ದೇವೇಗೌಡ

0

ಮೈಸೂರು : ಕೆಂಪೇಗೌಡರು ಗಂಗರ ಕಾಲದಿಂದಲೂ ಕನ್ನಡ ನಾಡಿನಲ್ಲಿ ತಾವು ತೊಡಗಿಸಿಕೊಂಡಿದ್ದು , ವಿಜಯನಗರ ಸಾಮಂತರಾಗಿ ಯಲಹಂಕ ನಾಡಿನ ಚುಕ್ಕಾಣಿ ಹಿಡಿದು ಮಾಡಿದಂತಹ ಸಾಧನೆ ಅವರು ನೀಡಿದಂತಹ ಕೊಡುಗೆ ಅಪಾರವಾದದ್ದು , ಕೆಂಪೇಗೌಡರು ಬೆಂಗಳೂರನ್ನು ನಿರ್ಮಾಣ ಇದರಿಂದ ಇಂದು ವಿಶ್ವ ವಿಖ್ಯಾತಿಯಾಗಿ ಬೆಳೆಯುವುದರ ಮೂಲಕ ಭಾರತದ ಇತಿಹಾಸ ಪುಟದಲ್ಲಿ ಕೆಂಪೇಗೌಡರ ಹೆಸರು ಚಿರಸ್ಥಾಯಿಯಾಗಿ ಉಳಿದಿದೆ ಎಂದು ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಜಿ . ಟಿ ದೇವೇಗೌಡ ಅವರು ಹೇಳಿದರು .

ಇಂದು , ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಶ್ರೀ ಕೆಂಪೇಗೌಡ ಜಯಂತೋತ್ಸವ ಸಮಿತಿಯೊಂದಿಗೆ ಕರ್ನಾಟಕಕಲಾಮಂದಿರದಲ್ಲಿ ಆಯೋಜಿಸಿದ್ದ ಶ್ರೀ ಕೆಂಪೇಗೌಡರ ಜಯಂತಿಯನ್ನು ಅವರು ಉದ್ಘಾಟಿಸಿದರು .ಬೆಂಗಳೂರು ಕೋಟೆಯ ದಕ್ಷಿಣ ಭಾಗದ ದಿಡ್ಡಿಬಾಗಿಲ ನಿಲುವಿಗಾಗಿ ಕೆಂಪೇಗೌಡರ ಸೊಸೆ ಶ್ರೀಮತಿ ಲಕ್ಷ್ಮೀದೇವಿಯು ವೀಕ್ಷಿಸಿದರು ಆತ್ಮಾರ್ಪಣೆ ಮೂಲಕ ಬೆಂಗಳೂರು ನಗರ ನಿಮಾರ್ಣದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದರು ಎಂದು ಪ್ರಕಟಿಸಿದರು .

ನಗರದ ಬೆಳವಣಿಗೆ ದೂರದೃಷ್ಟಿಯಿಂದ ಬೆಳ್ಳಿ ಮಂಟಪ ( ವಾಣಿಜ್ಯ ಮಂಟಪ ), ಇಲ್ಲಂತೆ ಮಂಟಪ ( ಆರೋಗ್ಯ ಮಂಟಪ ), ನೆಡುಂಕಲ್ ಮಂಟಪ ( ದೈವ) ಮಂಟಪ ), ಚೌಕಿಸ್ಥಾನ ಮಂಟಪ ( ಶಿಕ್ಷಾ ಮಂಟಪ ) ಹಾಗೂ ಪಾವ ಮಂಟಪ ( ನ್ಯಾಯ ಮಂಟಪ ) ಗಳನ್ನು ಆಯಾ ಕ್ಷೇತ್ರಕ್ಕನುಗುಣವಾಗಿ ಪಂಚ ಗೋಪುರಗಳು ನಿರ್ಮಿಸಿದವರು ಕೆಂಪೇಗೌಡರು ಎಂದು ಹೇಳಿದರು .

ಕೆಂಪೇಗೌಡರು ಬೆಂಗಳೂರು ನಗರ ನಿರ್ಮಾಣ ನಂತರ ವಾಸಿಸಲು ಬರುವ ಜನರಿಗೆ ಕುಡಿಯಲು ನೀರಿಗಾಗಿ ಕೆಂಪಾಬುದಿಕೆರೆ , ಗಿಡ್ಡೆ ಗೌಡರ ಕೆರೆ , ಕಾರಂಜಿ , ಜಕ್ಕರಾಯನಕೆರೆ , ಕೆಂಪಾಪುರ ಅಗ್ರಹಾರದ ಕೆರೆ , ಮಾವಳ್ಳಿ ಸಿದ್ದಾಪುರ ಕೆರೆ ಹೀಗೆ ಅನೇಕ ಕೆರೆಗಳನ್ನು ಸ್ಥಾಪಿಸಿ ಜನರಿಗೆ ಅನುಕೂಲ ಮಾಡಿಕೊಟ್ಟರು ಎಂದು ಮಾಡಿದರು .

ನಗರದ ಪ್ರಸಿದ್ದ ಶ್ರೀ ಗವಿ ಗಂಗಾಧರೇಶ್ವರ ಗುಡಿ , ಶ್ರೀ ಬಸವೇಶ್ವರ ಗುಡಿ , ಶ್ರೀ ದೊಡ್ಡ ವಿಘ್ನೇಶ್ವರ ಗುಡಿ , ಶ್ರೀ ಹನುಮಂತ ದೇವರ ಗುಡಿ , ಚೆನ್ನಿಗರಾಯ ಸ್ವಾಮಿ ಗುಡಿಗಳನ್ನು ನಿರ್ಮಿಸಿ ಜನರಲ್ಲಿ ದೈವ ಭಾವನೆ ಮೂಡಿಸಿ ಅನೇಕ ದೇವಾಲಯಗಳನ್ನು ನಿರ್ಮಿಸಿದರು ಕೆಂಪೇಗೌಡರ ರಾಜವಂಶಸ್ಥರು ಹೇಳಿದರು .

ನಗರದ ಮುಂದಿನ ಬೆಳವಣಿಗೆಯ ದೃಷ್ಟಿ ಇಟ್ಟುಕೊಂಡು ಆಯಾ ಕುಲಕಸಬು ಕಲಿತಿದ್ದ ಜನರಿಗೆ ವ್ಯಾಪರ ಮಾಡಲು ಅನುಕೂಲವಾಗುವಂತೆ ಬಿನ್ನಿಪೇಟೆ , ಚಿಕ್ಕಪೇಟೆ , ಬಳೆ ಪೇಟೆ , ಅಕ್ಕಿಪೇಟೆ , ಮಾಮೂಲ್ ಪೇಟೆ , ಗಾಣಿಗರ ಪೇಟೆ , ನಗರ್ತಪೇಟೆ , ಕಾಟನ್ ಪೇಟೆ , ಸುಲ್ತಾನ್ ಪೇಟೆ , ತಿಗಳರಪೇಟೆ , ಕುಂಬಾರ ಪೇಟೆ , ಗೊಲ್ಲರಪೇಟೆ ಹೀಗೆ ಪೇಟೆಗಳನ್ನು ನಿರ್ಮಿಸಿಕೊಟ್ಟು ಜೀವನ ಮಾಡಲು ದಾರಿ ಮಾಡಿಕೊಡುವುದರ ಮೂಲಕ ವ್ಯಾಪರ ಮಾಡಲು ಪೇಟೆಗಳನ್ನು ನಿರ್ಮಿಸಿ ಕೊಟ್ಟವರು ಕೆಂಪೇಗೌಡರು ಎಂದು ಸ್ಥಾಪಿಸಿದರು .

ಕೆಂಪೇಗೌಡರ ವಂಶಸ್ಥರು ಗ್ರಾಮದ ಉಪದ್ರವ ನಿವಾರಣೆಗಾಗಿ ದ್ವಾದಶ : ಬ್ರಾಹ್ಮಣರಿಗೆ ಭೂದಾನ , ಕನ್ಯಾ ಸಂಕ್ರಾ ಎ ತಿ ಪುಣ್ಯಕಾಲದಲ್ಲಿ 15 ಜನರಿಗೆ ಭೂದಾನ , ತಂದೆ :ತಾಯಿಯ ಒಳತಿಗಾಗಿ ಬ್ರಾಹ್ಮಣರಿಗೆ ಹೊಲ , ಗದ್ದೆ ಮತ್ತು ಮನೆಗಳ ದಾನ ಹೀಗೆ ಹಲವಾರು ಬ್ರಾಹ್ಮಣರಿಗೆ ದಾನ ಮಾಡುವ ಮೂಲಕ ಕೊಡುಗೈ ದಾನಿಗಳಾದರೂ ಹೇಳಿದರು .

ಲಿಂಗಾಯಿತ ಮಠಮಾನ್ಯಗಳಿಗೆ ದಾನ :ಧರ್ಮಂಗೈದು ಬಿಸ್ಸನಹಳ್ಳಿಯ ವೀರಪ್ಪ ದೇವರ ಮಠಕ್ಕೆ ಹೊಲದ ದಾನ , ರಾಮಗಿರಿ ಬೆಟ್ಟದ ಮೇಲೆ ಶೈವ ಮಠದ ಸ್ಥಾಪನೆ , ಡಣಾಯಕಪುರದ ಕೊಮರ ದೇವರ ಮಠಕ್ಕೆ ಗ್ರಾಮದಾನ , ಲಿಂಗಾಯಿತರ 66 ವಿರಕ್ತ ಮಠಗಳನ್ನು ಸ್ಥಾಪಿಸಿದ ಇಮ್ಮಡಿ ಕೆಂಪೇಗೌಡರು ಲಿಂಗಾಯತ ಮಠಗಳಿಗೆ ದಾನ ಮಾಡಿ ಬೆಳೆಯಲು ಸಹಕರಿಸಿದವರು ಕೆಂಪೇಗೌಡರು ಎಂದು ಹೇಳಿದರು .

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಚಾಮರಾಜ ಕ್ಷೇತ್ರದ ಶಾಸಕರಾದ ಕೆ .ಹರೀಶ್ ಗೌಡ ಅವರು ಮಾತನಾಡಿ ಬೆಂಗಳೂರನ್ನು ನಿರ್ಮಾಣ ಮಾಡಿದವರು ಕೆಂಪೇಗೌಡರು . ಇವರಿಗೆ ನಾಡ ನಾಡಪ್ರಭು ಎಂದು ಅಂಕಿತ ನಾಮದಿಂದ ಕರೆಯಲಾಗುತ್ತದೆ . 156 ನೇ ಶತಮಾನದಲ್ಲಿ ಸುಸರ್ಜಿತ ಬೆಂಗಳೂರು ನಗರವನ್ನು ನಿರ್ಮಿಸುವುದರ ಮೂಲಕ ಎಷ್ಟೋ ಜನರ ಜೀವನವನ್ನು ಕಟ್ಟಿಕೊಟ್ಟವರು ಕೆಂಪೇಗೌಡರು ಎಂದು ಹೇಳಿದರು .

ಕೆಂಪೇಗೌಡರು ನಿರ್ಮಾಣ ಮಾಡಿದಂತಹ ಎಲ್ಲಾ ಪೇಟೆಗಳು ಸಹ ಜೀವಂತವಾಗಿದ್ದು ಇವರು ಮಾಡಿರುವಂತಹ ಸಾಧನೆ ಕರ್ನಾಟಕ ರಾಜ್ಯಕ್ಕೆ​ ಕೊಟ್ಟಿರುವಂತಹ ಕೊಡುಗೆ ಅಪಾರವಾಗಿದೆ ಎಂದು ಹೇಳಿದರು .

ಶ್ರೀ ಆದಿಚುಂಚನಗಿರಿ ಶಾಖಾ ಮಠದ ಕಾರ್ಯದರ್ಶಿಗಳಾದ ಪೂಜ್ಯ ಶ್ರೀ ಸೋಮೇಶ್ವರನಾಥ ಸ್ವಾಮೀಜಿ ಅವರು ಇಂದು ಬೆಂಗಳೂರನ್ನು ಮಾತನಾಡಿದರು​ ಸಿಲಿಕಾನ್ ಸಿಟಿ ಎಂದು ಕರೆಯಲಾಗುತ್ತಿದೆ . ಇದು ಕರ್ನಾಟಕದ ಅತ್ಯಂತ ಸುಂದರವಾದ ಒಂದು ತಹ ನಗರ ಜೊತೆಗೆ 60% ಅಷ್ಟು ಮಾಹಿತಿಯನ್ನು ಒಳಗೊಳ್ಳುವುದರ ಮೂಲಕ ಎಲ್ಲವನ್ನೂ ಹೊಂದಿರುವಂತಹ ಶಕ್ತಿ ಬೆಂಗಳೂರು ನಗರ ಒಳಗೊಂಡಿದೆ ಎಂದು ಹೇಳಿದರು .

ವಿಶ್ವದ ಮೂಲೆ ಮೂಲೆಯ ಎಲ್ಲ ಜನರನ್ನು ಒಳಗೊಂಡಿದ್ದು ಜೀವನ ಮಾಡುವಂತಹ ಒಂದು ವ್ಯವಸ್ಥೆ ಕೆಂಪೇಗೌಡರು ಕಲ್ಪಿಸಿ ಕೊಟ್ಟಿದ್ದಾರೆ . ಎಲ್ಲ ವರ್ಗದ ಜನರು ವಾಸ ಮಾಡುವಂತಹ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ . ಎಲ್ಲರೂ ನಮ್ಮವರೇ ಎಂಬ ಭಾವನೆಯನ್ನು ಉಳ್ಳವರು ಕೆಂಪೇಗೌಡರು . ಇಂತಹ ಮಹಾನ್ ವ್ಯಕ್ತಿಗಳ ಸದ್ಗುಣಗಳ ಬಗ್ಗೆ , ಅವರು ನಡೆದು ಬಂದ ಹಾದಿಯ ಬಗ್ಗೆ ಇಂದಿನ ಪೀಳಿಗೆಯ ಮಕ್ಕಳಿಗೆ ತಿಳಿಸಿ​ ಒಳ್ಳೆಯ ವ್ಯಕ್ತಿ ಆಗುವಂತೆ ಮಾಡುವುದು ನಮ್ಮ ಆದ್ಯ ಕರ್ತವ್ಯವಾಗಿದೆ ಎಂದು ಹೇಳಿದರು .

ಸುಯೋಗ ಆಸ್ಪತ್ರೆಯ ನಿವೃತ್ತ ವೈದ್ಯ ಶಾಸ್ತ ç ಪ್ರಾಧ್ಯಾಪಕರು ಮತ್ತು ವೈದ್ಯ ಸಾಹಿತಿ ಅಧ್ಯಕ್ಷರಾದ ಡಾ . ಎಸ್ . ಪಿ . ಯೋಗಣ್ಣ ಅವರು ಮಾತನಾಡಿ ಯಲಹಂಕದ ಪ್ರಸಿದ್ಧ ಪ್ರಭು , ಎಲ್ಲರಿಗೂ ಮುಕುಟ ಪ್ರಿಯವಾದಂತಹ ದೊರೆ ನಾಡ ಪ್ರಭು ಕೆಂಪೇಗೌಡ ಅವರು ಹೇಳಿದರು .

ಸುಮಾರು 46 ವರ್ಷಗಳ ಕಾಲ ನಾಡನ್ನು ಆಳಿದ ಕೀರ್ತಿ ನಾಡ ಪ್ರಭು ಅವರದು , ಇವರನ್ನು ಒಂದನೇ ಕೆಂಪೇಗೌಡ ಎಂದು ಸಹ ಕರೆಯಲಾಗುತ್ತದೆ . ಬೆಂಗಳೂರಿನ ನಿರ್ಮಾಣದಲ್ಲಿ ಕೆಂಪೇಗೌಡರ ಪಾತ್ರ ಬಹಳ ಪ್ರಮುಖವಾದದ್ದು , ಸಾಮಾನ್ಯವಾಗಿ ಸಾಮಾನ್ಯವಾಗಿ ಜೀವಿಸಿ ಸರ್ವ ಜ್ಞಾನ ಪಾರಂಗತವಾಗಿ ಬೆಳೆದವರು ಕೆಂಪೇಗೌಡರು ಎಂದು ಹೇಳಿದರು .

ಕೆಂಪೇಗೌಡ ಜಯಂತಿಯ ಪ್ರಯುಕ್ತ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದಂತಹವರಿಗೆ ಪ್ರತಿಭಾ ಪುರಸ್ಕಾರ ನೀಡಿ ಪ್ರಶಸ್ತಿ ಪ್ರಧಾನ . ಜೋತೆಗೆ ದ್ವಿತೀಯ ಪಿಯುಸಿ ಹಾಗೂ ಎಸ್ . ಎಸ್ ಎಲ್ ಸಿ ಪ್ರಶಸ್ತಿ ಪ್ರಧಾನ .​

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ನ ಶಾಸಕರುಗಳಾದ ಸಿ . ಎನ್ . ಮಂಜೇಗೌಡ , ಕೆ . ವಿವೇಕಾನಂದ , ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಶಾಸಕರಾದ ಟಿ . ಎಸ್ . ಶ್ರೀವತ್ಸ , ಜಿಲ್ಲಾಧಿಕಾರಿಗಳಾದ ಜಿ . ಲಕ್ಷ್ಮಿಕಾಂತ ರೆಡ್ಡಿ , ಜಿಲ್ಲಾ ಪಂಚಾಯತ್ ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಸ್ . ಯುಕೇಶ್ ಕುಮಾರ್ , ಮೈಸೂರು ಮಹಾನಗರ ಪಾಲಿಕೆ ಆಯುಕ್ತರಾದ ಶೇಖ್ ತನ್ವೀರ್ ಆಸಿಫ್ , ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕರಾದ ವಿ . ಎನ್ . ಮಲ್ಲಿಕಾರ್ಜುನಸ್ವಾಮಿ , ಸಹಾಯಕ ನಿರ್ದೇಶಕರಾದ ಡಾ . ಎಂ . ಡಿ ಸುದರ್ಶನ್ , ಕೆಂಪೇಗೌಡ ಜಯಂತೋತ್ಸವ ಸಮಿತಿಯ ಅಧ್ಯಕ್ಷರಾದ ಪ್ರಶಾಂತ್ ಗೌಡ ಸೇರಿದಂತೆ ಸಮಿತಿಯ ಆಯ್ಕೆ .