ಮನೆ ಅಪರಾಧ ಪತ್ನಿಯನ್ನು ಸ್ಮಶಾನದ ಬಳಿ ಕರೆದೊಯ್ದ ಕಿರಾತಕ: ಹೆಂಡ್ತಿ ಕೊಂದು ಪರಾರಿ

ಪತ್ನಿಯನ್ನು ಸ್ಮಶಾನದ ಬಳಿ ಕರೆದೊಯ್ದ ಕಿರಾತಕ: ಹೆಂಡ್ತಿ ಕೊಂದು ಪರಾರಿ

0

ಬೆಂಗಳೂರು: ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಪತಿಯೇ ತನ್ನ ಪತ್ನಿಗೆ ಚಾಕುವಿನಿಂದ ಇರಿದು ಹತ್ಯೆಗೈದಿರುವ ಘಟನೆ ಕೆಂಗೇರಿ ಪೊಲೀಸ್‌‍ ಠಾಣೆ ವ್ಯಾಪ್ತಿಯ ಜಟ್ಟಿಗನಹಳ್ಳಿಯಲ್ಲಿ ನಡೆದಿದೆ.

Join Our Whatsapp Group

ಗೌರಿ (30) ಹತ್ಯೆಯಾದ ಮಹಿಳೆ. ಕೊಲೆ ಬಳಿಕ ಆಕೆಯ ಪತಿ ನಾಗೇಶ್ ಪರಾರಿಯಾಗಿದ್ದು, ಆತನಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

7-8 ವರ್ಷಗಳ ಹಿಂದೆ ನಾಗೇಶ್ ಹಾಗೂ ಗೌರಿಯ ಮದುವೆಯಾಗಿತ್ತು. ಕೆಲ ವರ್ಷಗಳಿಂದ ಪತ್ನಿಯನ್ನು ಬೇರೆಡೆ ಬಿಟ್ಟು ಬಂದಿದ್ದ ನಾಗೇಶ್, ಒಂದು ವಾರದ ಹಿಂದೆಯಷ್ಟೇ ಅವಳನ್ನು ಪುನಃ ಕರೆತಂದಿದ್ದ ಎನ್ನಲಾಗಿದೆ. ಮಂಗಳವಾರ ರಾತ್ರಿ ಜಟ್ಟಿಗನಹಳ್ಳಿಯ ಸ್ಮಶಾನದ ಬಳಿ ಗೌರಿಯನ್ನು ಕರೆದೊಯ್ದ ನಾಗೇಶ್, ಆಕೆಯ ಕುತ್ತಿಗೆಗೆ ಚಾಕುವಿನಿಂದ ಇರಿದು ಹತ್ಯೆಗೈದಿದ್ದಾನೆ. ಬಳಿಕ ಮೃತದೇಹ ಬಿಟ್ಟು ಪರಾರಿಯಾಗಿದ್ದಾನೆ. ಬುಧವಾರ ಬೆಳಗ್ಗೆ ಸ್ಥಳೀಯರೊಬ್ಬರು ಮೃತದೇಹವನ್ನು ಗಮನಿಸಿದಾಗ ಘಟನೆ ಬೆಳಕಿಗೆ ಬಂದಿದೆ.

ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿರುವ ಕೆಂಗೇರಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ನಾಪತ್ತೆಯಾಗಿರುವ ಆರೋಪಿಗಾಗಿ ಶೋಧ ಆರಂಭಿಸಿದ್ದಾರೆ.