ಮನೆ ರಾಜ್ಯ ಕೃಷ್ಣರಾಜ ಕ್ಷೇತ್ರ: ರಾಮದಾಸ್’ಗೆ ಕೈ ತಪ್ಪಿದ ಟಿಕೆಟ್, ಟಿ.ಎಸ್.ಶ್ರೀವತ್ಸಗೆ ಅವಕಾಶ

ಕೃಷ್ಣರಾಜ ಕ್ಷೇತ್ರ: ರಾಮದಾಸ್’ಗೆ ಕೈ ತಪ್ಪಿದ ಟಿಕೆಟ್, ಟಿ.ಎಸ್.ಶ್ರೀವತ್ಸಗೆ ಅವಕಾಶ

0

ಮೈಸೂರು: ಇಲ್ಲಿನ ಕೃಷ್ಣರಾಜ ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್ ಅವರಿಗೆ ಬಿಜೆಪಿ ಟಿಕೆಟ್‌ ಕೈತಪ್ಪಿದೆ. ಅಲ್ಲಿ ಪಕ್ಷದ ನಗರ ಘಟಕದ ಅಧ್ಯಕ್ಷ ಟಿ.ಎಸ್.ಶ್ರೀವತ್ಸ ಅವರಿಗೆ ಅವಕಾಶ ಕೊಡಲಾಗಿದೆ.

Join Our Whatsapp Group

ಟಿ.ಎಸ್.ಶ್ರೀವತ್ಸಟಿ.ಎಸ್.ಶ್ರೀವತ್ಸಇಲ್ಲಿ ಟಿಕೆಟ್‌ಗಾಗಿ ರಾಮದಾಸ್ ಹಾಗೂ ‘ಮುಡಾ’ ಮಾಜಿ ಅಧ್ಯಕ್ಷ ಎಚ್.ವಿ.ರಾಜೀವ್ ಕೂಡ ಪ್ರಬಲ ಆಕಾಂಕ್ಷಿಯಾಗಿದ್ದರು. ಆದರೆ, ಪಕ್ಷವು ಸಂಘಟನೆಯಲ್ಲಿ ತೊಡಗಿದ್ದ ಹೊಸ ಮುಖಕ್ಕೆ ಅಸ್ತು ಎಂದಿದೆ.

‘ಇದು ನನ್ನ ಕೊನೆಯ ಚುನಾವಣೆ, ಇದೊಂದು ಬಾರಿ ಅವಕಾಶ ಕೊಡಿ’ ಎಂದು ರಾಮದಾಸ್‌ ಮಾಡಿಕೊಂಡಿದ್ದ ಮನವಿಗೆ ಹೈಕಮಾಂಡ್ ಸೊಪ್ಪು ಹಾಕಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಸಂಪರ್ಕ ಹೊಂದಿದ್ದರಿಂದ, ರಾಮದಾಸ್‌ ಅವರಿಗೆ ಟಿಕೆಟ್‌ ದೊರೆಯುತ್ತದೆ ಎಂದು ಭಾವಿಸಲಾಗಿತ್ತು, ಆದರೆ, ಎರಡು ಪಟ್ಟಿಗಳಲ್ಲೂ ರಾಮದಾಸ್‌ ಹೆಸರಿಲ್ಲದಿದ್ದರಿಂದ ಅವರಿಗೆ ಟಿಕೆಟ್‌ ದೊರೆಯುವುದಿಲ್ಲ ಎಂಬ ಸುದ್ದಿ ಹರಿದಾಡುತ್ತಿತ್ತು. ಅವರು ಪಕ್ಷೇತರರಾಗಿ ಸ್ಪರ್ಧಿಸಬೇಕು ಎನ್ನುವುದು ಅವರ ಬೆಂಬಲಿಗರ ಒತ್ತಾಯವಾಗಿದೆ.

ಹಿಂದಿನ ಲೇಖನ10 ಭಾಷೆಗಳಲ್ಲಿ ಬರಲಿದೆ ಸೂರ್ಯ ಹೊಸ ಸಿನಿಮಾ ‘ಕಂಗುವ’
ಮುಂದಿನ ಲೇಖನರಾಮನಗರ: ಡಿಕೆಶಿ, ಹೆಚ್ ಡಿಕೆ, ನಿಖಿಲ್ ಕುಮಾರಸ್ವಾಮಿ ನಾಮಪತ್ರ ಸಲ್ಲಿಕೆ