ಮನೆ ಸ್ಥಳೀಯ ನಂಜುಡೇಶ್ವರನಿಗೆ ತುಲಾಭಾರ ಸೇವೆ ಸಲ್ಲಿಸಿ ಹರಕೆ ತೀರಿಸಿದ ಕುಮಾರಸ್ವಾಮಿ

ನಂಜುಡೇಶ್ವರನಿಗೆ ತುಲಾಭಾರ ಸೇವೆ ಸಲ್ಲಿಸಿ ಹರಕೆ ತೀರಿಸಿದ ಕುಮಾರಸ್ವಾಮಿ

0

ಮೈಸೂರು: ಮಾಜಿ ಮುಖ್ಯಮಂತ್ರಿ ಹೆಚ್​ಡಿ ಕುಮಾರಸ್ವಾಮಿ ದಂಪತಿ ಇಂದು (ಅ.16) ನಂಜನಗೂಡಿಗೆ ಭೇಟಿ ನೀಡಿ ನಂಜುಡೇಶ್ವರನಿಗೆ ತುಲಾಭಾರಕ್ಕೆ ಪೂಜೆ ನೆರವೇರಿಸಿದ್ದಾರೆ.

ಮೊದಲಿಗೆ ಹೆಚ್​ಡಿ ಕುಮಾರಸ್ವಾಮಿ ಅವತು ತಮ್ಮ ಕುಟುಂಬ ಸಮೇತವಾಗಿ ತುಲಾಭಾರಕ್ಕೆ ವಿಶೇಷ ಪೂಜೆ ಮಾಡಿದರು. ಬಳಿಕ ಅನಿತಾ ಕುಮಾರಸ್ವಾಮಿ ಅವರು ಬೆಲ್ಲದ ತುಲಾಭಾರ ಮಾಡಿಸಿದರು. ಪತ್ನಿ ನಂತರ ಕುಮಾರಸ್ವಾಮಿ ಅವರೂ ಸಹ ತುಲಾಭಾರ‌ ಸೇವೆ ಸಲ್ಲಿಸಿದರು.

ನಂಜುಡೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಕುಮಾರಸ್ವಾಮಿ, ನನ್ನ ಆರೋಗ್ಯ ಸಮಸ್ಯೆಯಿಂದ ಭಗವಂತ ಪಾರು ಮಾಡಿದ್ದಾನೆ. ನಾನು ಅನಾರೋಗ್ಯ ಸಮಸ್ಯೆಗೆ ಒಳಗಾದಾಗ ನನ್ನ ಕುಟುಂಬ ಸದಸ್ಯರೊಬ್ಬರು ನರಸಿಂಹಸ್ವಾಮಿ ನಂಜುಂಡೇಶ್ವರನಿಗೆ ಹರಕೆ ಹೊತ್ತುಕೊಂಡಿದ್ದರು. ಹೀಗಾಗಿ ಇಂದು ನಂಜುಂಡೇಶ್ವರನಿಗೆ ತುಲಾಭಾರ ಮಾಡಿಸಿದ್ದೇವೆ. ನಾಡಿಗೆ ಒಳ್ಳೆಯ ದಿನಗಳು‌ ಬರಲಿ ಎಂದು ಪ್ರಾರ್ಥನೆ ಮಾಡಿದ್ದೇನೆ ಎಂದು ಹೇಳಿದರು.

ದೇವೇಗೌಡ ಅವರ ಕುಟುಂಬ ನಂಜನಗೂಡಿನ ನಂಜುಂಡೇಶ್ವರನ ಮೇಲೆ ಬಹಳ ಭಕ್ತಿ ಇಟ್ಟುಕೊಂಡಿದೆ. ಇದರಕ್ಕೆ ಪೂರಕವೆಂಬಂತೆ ದೇವೇಗೌಡ ಅವರು ಈ ಹಿಂದೆ ಅಂದರೆ 2022 ಡಿಸೆಂಬರ್​ನಲ್ಲಿ ಶ್ರೀಕಂಠೇಶ್ವರ ಸ್ವಾಮಿ ರುದ್ರಾಭಿಷೇಕ, ತುಲಾಭಾರ ಸೇವೆ ಸಲ್ಲಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಹಿಂದಿನ ಲೇಖನಮಹಿಳೆಯರು ಸ್ವಾವಲಂಬಿ ಬದುಕನ್ನು ನಡೆಸಬೇಕು:ಡಾ.ಹೆಚ್.ಸಿ ಮಹದೇವಪ್ಪ
ಮುಂದಿನ ಲೇಖನನೆಫ್ರೋಟಿಕ್ ಸಿಂಡ್ರೋಮ್