ಮನೆ ರಾಷ್ಟ್ರೀಯ ಜಮೀನು ವಿವಾದ: ವೃದ್ಧನ ಹತ್ಯೆಗೈದ ನಾಲ್ವರ ಬಂಧನ

ಜಮೀನು ವಿವಾದ: ವೃದ್ಧನ ಹತ್ಯೆಗೈದ ನಾಲ್ವರ ಬಂಧನ

0

ಸುಲ್ತಾನಪುರ: ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಹಲ್ಲೆ ನಡೆಸಿ 70 ವರ್ಷದ ವ್ಯಕ್ತಿಯನ್ನು ಹೊಡೆದು ಕೊಂದ ಘಟನೆ ಉತ್ತರ ಪ್ರದೇಶದ ಕುರೇಭಾರ್ ಪ್ರದೇಶದ ಸಾಧೋಭಾರಿ ಗ್ರಾಮದಲ್ಲಿ ಭಾನುವಾರ ರಾತ್ರಿ ಘಟನೆ ನಡೆದಿದೆ.

ಮೃತ ವ್ಯಕ್ತಿಯನ್ನು ಮಗ್ಗು ರಾಮ್ ಎಂದು ಗುರುತಿಸಲಾಗಿದೆ. ಆತನ ಮಗ ವಿಜಯ್ ಗಾಯಗೊಂಡಿದ್ದಾರೆ.

ಮಗ್ಗು ರಾಮ್ ತನ್ನ ಹಸುವನ್ನು ವಿವಾದಿತ ಜಮೀನಿನಲ್ಲಿ ಸಾಕಲು ಕೆಲವು ಜನರೊಂದಿಗೆ ಜಗಳವಾಡಿದ್ದು, ಇದರ ಪರಿಣಾಮವಾಗಿ ಅವರು ದೊಣ್ಣೆಗಳಿಂದ ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ತಂದೆಯನ್ನು ಉಳಿಸಲು ಮಗ ವಿಜಯ್ ಮಧ್ಯ ಪ್ರವೇಶಿಸಿದ್ದು, ಈ ವೇಳೆ ದುಷ್ಕರ್ಮಿಗಳು ಆತನ ಮೇಲೂ ಹಲ್ಲೆ ನಡೆಸಿದ್ದಾರೆ. ಪೊಲೀಸರು ಇಬ್ಬರನ್ನೂ ಆಸ್ಪತ್ರೆ ದಾಖಲಿಸಿದ್ದಾರೆ. ಆದರೆ ಮಗ್ಗು ರಾಮ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ವಿಜಯ್ ಅವರ ಸ್ಥಿತಿ ಸ್ಥಿರವಾಗಿದೆ ಎಂದು ಅವರು ತಿಳಿಸಿದ್ದಾರೆ, ರಾಮ್ ಅವರ ಸೋದರಳಿಯ ಮಾಣಿಕ್ ಲಾಲ್ ಅವರು ಎಫ್ಐಆರ್ ದಾಖಲಿಸಿದ್ದಾರೆ.

ಶಿಕ್ಷಕ ಅಮರನಾಥ್, ಸಂಬಂಧಿ ಜವಾಹರಲಾಲ್, ರಾಜವತಿ ಮತ್ತು ವಿಶ್ವನಾಥ್ ಅವರನ್ನು ಬಂಧಿಸಲಾಗಿದೆ ಎಂದು ಕುರೇಭಾರ್ ಎಸ್‌ ಎಚ್‌ ಒ ಪ್ರವೀಣ್ ಕುಮಾರ್ ಯಾದವ್ ತಿಳಿಸಿದ್ದಾರೆ.

ಹಿಂದಿನ ಲೇಖನರೌಡಿಶೀಟರ್ ಸಿದ್ದಾಪುರ ಮಹೇಶ್​ ಕೊಲೆ ಪ್ರಕರಣ: 11 ಮಂದಿ ಆರೋಪಿಗಳು ಪೊಲೀಸರ ವಶಕ್ಕೆ
ಮುಂದಿನ ಲೇಖನಬಳ್ಳಾರಿ: ಕೆಕೆಆರ್ ಟಿಸಿ ಭದ್ರತಾ ಇನ್ಸ್ ಪೆಕ್ಟರ್ ಹತ್ಯೆ