ಮನೆ ಅಪರಾಧ ಜಮೀನು ವಿವಾದ: ಭಾರತೀಯ ಸಮಾಜ ಪಕ್ಷದ ಸ್ಥಳೀಯ ನಾಯಕಿ ಹತ್ಯೆ

ಜಮೀನು ವಿವಾದ: ಭಾರತೀಯ ಸಮಾಜ ಪಕ್ಷದ ಸ್ಥಳೀಯ ನಾಯಕಿ ಹತ್ಯೆ

0

ಉತ್ತರ ಪ್ರದೇಶ: ಓಂ ಪ್ರಕಾಶ್ ರಾಜ್‌ ಭರ್ ಅವರ ಸುಹೇಲ್‌ದೇವ್ ಭಾರತೀಯ ಸಮಾಜ ಪಕ್ಷದ (ಎಸ್‌ ಬಿಎಸ್‌ ಪಿ) ಸ್ಥಳೀಯ ನಾಯಕಿ ನಂದಿನಿ ರಾಜ್‌ ಭರ್ ಅವರನ್ನು ಉತ್ತರ ಪ್ರದೇಶದ ಸಂತ ಕಬೀರ್ ನಗರ ಜಿಲ್ಲೆಯಲ್ಲಿ ಜಮೀನು ವಿವಾದದ ಹಿನ್ನೆಲೆಯಲ್ಲಿ ದುಷ್ಕರ್ಮಿಗಳು ಕತ್ತು ಕೊಯ್ದು ಹತ್ಯೆ ಮಾಡಿದ್ದಾರೆ ಎನ್ನಲಾಗಿದೆ.

ಭಾನುವಾರ ಅವರ ಮನೆಯಲ್ಲೇ ಕೊಲೆ ನಡೆದಿದೆ. ಕೊಲೆ ಪ್ರಕರಣದಲ್ಲಿ ಪೊಲೀಸರು ಐವರನ್ನು ಆರೋಪಿಗಳೆಂದು ಹೆಸರಿಸಿದ್ದು, ಈ ಪೈಕಿ ಮೂವರು – ಆನಂದ್ ಯಾದವ್, ಧ್ರುವ ಚಂದ್ರ ಯಾದವ್ ಮತ್ತು ಒಬ್ಬ ಮಹಿಳೆಯನ್ನು ಬಂಧಿಸಲಾಗಿದೆ.

ಮಾಹಿತಿ ಪ್ರಕಾರ ನಂದಿನಿ ರಾಜ್‌ಭರ್ ಅವರ ಪತಿಯ ಚಿಕ್ಕಪ್ಪ ಬಾಲಕೃಷ್ಣ ಎಂಬುವರಿಗೆ ಸೇರಿದ ಜಾಗವನ್ನು ಸ್ಥಳೀಯ ಭೂಮಾಫಿಯಾ ಅಕ್ರಮವಾಗಿ ವಶಪಡಿಸಿಕೊಂಡಿದ್ದು, ಅದರ ಸಂಪೂರ್ಣ ಹಣವನ್ನು ಪಾವತಿಸದೆ ಅದನ್ನು ನೋಂದಾಯಿಸಿದ್ದರು. ಇದರಿಂದಾಗಿ ಫೆ.29ರಂದು ಬಾಲಕೃಷ್ಣ ಆತ್ಮಹತ್ಯೆ ಮಾಡಿಕೊಂಡಿದ್ದು, ರೈಲ್ವೆ ಹಳಿಯಲ್ಲಿ ಮೃತದೇಹ ಪತ್ತೆಯಾಗಿದೆ.

ಮೂವರು ಭೂ ಮಾಫಿಯಾಗಳಾದ ಶ್ರವಣ್ ಯಾದವ್, ಧ್ರುವ ಚಂದ್ರ ಯಾದವ್ ಮತ್ತು ಪನ್ನೆ ಲಾಲ್ ಯಾದವ್ ಮಾಡಿರುವ ವಂಚನೆಯ ವಿರುದ್ಧ ನಂದಿನಿ ರಾಜ್‌ ಭರ್ ಮತ್ತು ಬಾಲಕೃಷ್ಣ ಲಾಬಿ ನಡೆಸುತ್ತಿದ್ದರು. ಪನ್ನೆ ಲಾಲ್ ಯಾದವ್ ಅವರನ್ನು ಬಂಧಿಸಿ ಜೈಲಿಗೆ ಕಳುಹಿಸಲಾಯಿತು. ಕೊಲೆಯಾಗುವ ಮುನ್ನ ನಂದಿನಿ ರಾಜ್‌ಭರ್‌ ಅವರು ಬಾಲಕೃಷ್ಣ ಅವರ ಜಮೀನನ್ನು ವಶಪಡಿಸಿಕೊಂಡಿರುವರನ್ನು ಬಂಧಿಸುವಂತೆ ಒತ್ತಾಯಿಸಿದ್ದರು

ಹಿಂದಿನ ಲೇಖನಗುರುಗ್ರಾಮ: ಹುಚ್ಚ ಎಂದು ಕರೆದಿದ್ದಕ್ಕೆ ತಾಯಿಯನ್ನೇ ಕೊಂದ ಮಗ
ಮುಂದಿನ ಲೇಖನಲಿಂಗಸೂಗೂರು ಪಟ್ಟಣದಲ್ಲಿ ಮಹಿಳೆಯ ಬರ್ಬರ ಹತ್ಯೆ