ಮನೆ ರಾಜಕೀಯ ವಿಧಾನಪರಿಷತ್‌ ಚುನಾವಣೆ: ಜೆಡಿಎಸ್‌ ಪ್ರಚಾರ ಮಂಕು

ವಿಧಾನಪರಿಷತ್‌ ಚುನಾವಣೆ: ಜೆಡಿಎಸ್‌ ಪ್ರಚಾರ ಮಂಕು

0

ಮೈಸೂರು (Mysuru): ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ, ಕಾಂಗ್ರೆಸ್‌ ಪ್ರಚಾರ ಭರ್ಜರಿಯಾಗಿ ನಡೆಯುತ್ತಿದೆ. ಆದರೆ ಜೆಡಿಎಸ್‌ ಪ್ರಚಾರದಲ್ಲಿ ಮಂಕಾಗಿದೆ.

ಹೌದು, ಜೆಡಿಎಸ್ ಅಭ್ಯರ್ಥಿ ಹೆಚ್. ಕೆ ರಾಮು ಏಕಾಂಗಿಯಾಗಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಪಕ್ಷದ ನಾಯಕರು ಪ್ರಚಾರಕ್ಕೆ ಆಗಮಿಸಿಲ್ಲ. ಹೀಗಾಗಿ ರಾಮು ಏಕಾಂಗಿಯಾಗಿ ಪ್ರಚಾರ ಮಾಡುತ್ತಿದ್ದಾರೆ.

H. K ರಾಮುಗೆ ಟಿಕೆಟ್ ನೀಡಿದ ಹಿನ್ನೆಲೆಯಲ್ಲಿ ಕೆಲ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದರು. ಹೀಗಾಗಿ ಚುನಾವಣೆಯಿಂದ ಜೆಡಿಎಸ್‌ ನಾಯಕರು ಅಂತರ ಕಾದುಕೊಳ್ಳುತ್ತಿದ್ದಾರೆ. ಬೆಂಗಳೂರಿನ ಹಾಗೂ ಇತರೆಡೆಯ ಜೆಡಿಎಸ್‌ ನಾಯಕರು ಮೈಸೂರಿಗೆ ಆಗಮಿಸಿಲ್ಲ. ಮತ್ತೊಂದೆಡೆ ಸ್ಥಳೀಯ ನಾಯಕರಿಂದಲೂ ಬೆಂಬಲ ದೊರೆತಿಲ್ಲ.

ನಾಳೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಮೈಸೂರಿಗೆ ಆಗಮಿಸಲಿದ್ದು, ಆ ಬಳಿಕವಾದರೂ ಜೆಡಿಎಸ್‌ ಚುನಾವಣಾ ಪ್ರಚಾರ ವೇಗ ಪಡೆದುಕೊಳ್ಳುವುದೇ ಕಾದುನೋಡಬೇಕಿದೆ.

ಹಿಂದಿನ ಲೇಖನವರದಕ್ಷಿಣೆ ಕಿರುಕುಳಕ್ಕೆ ಮಹಿಳೆ ಬಲಿ: ಪತಿಯಿಂದಲೇ ಪತ್ನಿಯ ಹತ್ಯೆ
ಮುಂದಿನ ಲೇಖನಪರಿಸರವನ್ನು ಸಂರಕ್ಷಿಸಬೇಕು: ಯದುವೀರ್‌ ಒಡೆಯರ್‌