ಮನೆ ರಾಜ್ಯ ಒಂದು ದಿನ ಮುಂಚಿತವಾಗಿ ವಿಧಾನಮಂಡಲ ಅಧಿವೇಶನ ಮುಕ್ತಾಯ

ಒಂದು ದಿನ ಮುಂಚಿತವಾಗಿ ವಿಧಾನಮಂಡಲ ಅಧಿವೇಶನ ಮುಕ್ತಾಯ

0

ಬೆಳಗಾವಿ(Bengaluru): ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನಮಂಡಲ ಅಧಿವೇಶನ ನಿಗದಿತ ದಿನಾಂಕಕ್ಕಿಂತ ಒಂದು ದಿನ ಮೊದಲೇ ಮುಕ್ತಾಯವಾಗಲಿದೆ ಎಂದು ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದ್ದಾರೆ.

ವಿಧಾನಸಭೆಯಲ್ಲಿ ಈ ವಿಷಯ ತಿಳಿಸಿದ ಅವರು, ಕಲಾಪವು ಇದೇ 30ರವರೆಗೆ ನಡೆಯಬೇಕಿತ್ತು. ಆದರೆ, ಸದನದ ಅನೇಕ ಸದಸ್ಯರು ಅನ್ಯ ಕಾರ್ಯನಿಮಿತ್ತ ಅಂದು ಇರಲು ಸಾಧ್ಯವಾಗುವುದಿಲ್ಲ ಎಂದು ಹೇಳಿದ್ದಾರೆ. ಹೀಗಾಗಿ, ಗುರುವಾರ (ಡಿ.29) ಸಂಜೆಯೇ ಕಲಾಪ ಮುಕ್ತಾಯಗೊಳಿಸುವ ಬಗ್ಗೆ ಹಿರಿಯ ಸದಸ್ಯರ ಜತೆ ಚರ್ಚಿಸಿ ನಿರ್ಣಯ ಕೈಗೊಳ್ಳಲಾಗಿದೆ ಎಂದರು.

ಇದಕ್ಕೆ ಮಧ್ಯ ಪ್ರವೇಶಿಸಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಉತ್ತರ ಕರ್ನಾಟಕದ ಬಗ್ಗೆ ಚರ್ಚೆಯಾಗಬೇಕಿದೆ. ಹೀಗಾಗಿ, ಶುಕ್ರವಾರ ಮಧ್ಯಾಹ್ನದವರೆಗೆ ಸುಮಾರು 3 ಗಂಟೆ ಕಲಾಪ ನಡೆಯುತ್ತಿತ್ತು. ಗುರುವಾರವೇ ಸಮಯ ಹೊಂದಿಸಿಕೊಂಡು, ಭೋಜನ ವಿರಾಮವೂ ಇಲ್ಲದಂತೆ ನಡೆಸಿ. ಕೊನೆಯ ದಿನದ ಮೂರು ಗಂಟೆಯ ಕಲಾಪ ನಷ್ಟವಾಗದಂತೆ ನೋಡಿಕೊಳ್ಳಿ ಎಂದು ಸಲಹೆ ನೀಡಿದರು.

ಅದನ್ನು ಕಾಗೇರಿ ಒಪ್ಪಿಕೊಂಡರು.

ಹಿಂದಿನ ಲೇಖನವಿಜಯಪುರ ಜಿಲ್ಲಾ ಪಂಚಾಯತ್’ನಲ್ಲಿ ಜಲ ಸಂಜೀವಿನಿ ಜಿಲ್ಲಾ ಸಂಯೋಜಕ ಹುದ್ದೆಗೆ ಅರ್ಜಿ ಆಹ್ವಾನ
ಮುಂದಿನ ಲೇಖನಗುರು ರಾಘವೇಂದ್ರ ಸಹಕಾರ ಬ್ಯಾಂಕ್‌ ಠೇವಣಿದಾರರಿಗೆ ಹಣ ವಾಪಸ್‌: ಆರ್‌’ಬಿಐಗೆ ನೋಟಿಸ್‌ ಜಾರಿ ಮಾಡಿದ ಹೈಕೋರ್ಟ್‌