ಮನೆ ಅಪರಾಧ ಶಾಸಕ ತನ್ವೀರ್ ಸೇಠ್’ಗೆ ಜೀವ ಬೆದರಿಕೆ: ಮೂರು ಕಡೆ ದೂರು ದಾಖಲು

ಶಾಸಕ ತನ್ವೀರ್ ಸೇಠ್’ಗೆ ಜೀವ ಬೆದರಿಕೆ: ಮೂರು ಕಡೆ ದೂರು ದಾಖಲು

0

ಮೈಸೂರು(Mysuru): ಶಾಸಕ ತನ್ವೀರ್ ಸೇಠ್​ಗೆ ಜೀವ ಬೆದರಿಕೆ ಇದೆ ಎಂದು ಮೂರು ಕಡೆ ದೂರು ದಾಖಲಿಸಲಾಗಿದೆ.

ಉದಯಗಿರಿ ಮತ್ತು ಮಂಡಿ ಪೊಲೀಸ್ ಠಾಣೆ ಹಾಗೂ ಮೈಸೂರು ನಗರ ಪೊಲೀಸ್ ಆಯುಕ್ತ ಬಿ.ರಮೇಶ್ ಅವರಿಗೆ ಕಾಂಗ್ರೆಸ್ ಬ್ಲಾಕ್ ಸಮಿತಿಯಿಂದ ದೂರು ನೀಡಲಾಗಿದೆ.

ಹಾಸನದಲ್ಲಿ ನಡೆದ ಭಜರಂಗದಳ ಕಾರ್ಯಕ್ರಮದಲ್ಲಿ ರಘು ಸಕಲೇಶಪುರ ಅವರು ಶಾಸಕರನ್ನು ಏಕವಚನದಲ್ಲಿ ನಿಂದಿಸಿದ್ದಾರೆ. ಟಿಪ್ಪು ಪ್ರತಿಮೆ ಸ್ಥಾಪಿಸುವ ಕನಸು ಬಿಡದಿದ್ದರೆ ಕೊಲೆ ಮಾಡುವುದಾಗಿ ಬಹಿರಂಗ ಹೇಳಿಕೆ ನೀಡಿದ್ದಾರೆ ಎಂದು ಕಾಂಗ್ರೆಸ್​ ಬ್ಲಾಕ್ ಸಮಿತಿ ಆರೋಪಿಸಿದೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಆಗ್ರಹಿಸಲಾಗಿದೆ.

2019ರಲ್ಲಿ ಬನ್ನಿ ಮಂಟಪದ ಬಳಿ ಶಾಸಕ ತನ್ವೀರ್ ಸೇಠ್ ಅವರ ಮೇಲೆ ಹಲ್ಲೆ ನಡೆದಿತ್ತು. ಈ ಹಲ್ಲೆಯಲ್ಲಿ ಎನ್‌.ಆರ್. ಕ್ಷೇತ್ರದ ಭಜರಂಗದಳದ ಕಾರ್ಯಕರ್ತ ಗಿರಿಧರ್​​ಗೂ ಸಂಬಂಧವಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಹಿಂದಿನ ಲೇಖನಭಯೋತ್ಪಾದನೆಯನ್ನು ಬುಡಸಮೇತ ಕಿತ್ತೆಸೆಯುವವರೆಗೆ ವಿಶ್ರಾಂತಿ ಪಡೆಯುವುದಿಲ್ಲ: ಪ್ರಧಾನಿ ಮೋದಿ
ಮುಂದಿನ ಲೇಖನಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ ಆಟೋ ಪಲ್ಟಿ: 30ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಗಾಯ