ಮನೆ ಅಪರಾಧ ಗೂಡ್ಸ್‌ ಆಟೊ ಮೇಲೆ ಬಿದ್ದ ಲಾರಿ: ವ್ಯಕ್ತಿ ಸಾವು

ಗೂಡ್ಸ್‌ ಆಟೊ ಮೇಲೆ ಬಿದ್ದ ಲಾರಿ: ವ್ಯಕ್ತಿ ಸಾವು

0

ಶ್ರೀರಂಗಪಟ್ಟಣ:ಕಬ್ಬು ಸಾಗಿಸುತ್ತಿದ್ದ ಲಾರಿಯೊಂದು ಗೂಡ್ಸ್‌ ಆಟೊ ಮೇಲೆ ಬಿದ್ದ ಪರಿಣಾಮ ವ್ಯಕ್ತಿಯೊಬ್ಬರು ಸ್ಥಳದಲ್ಲೇ ಮೃತಪಟ್ಟು,ಐವರು ಗಾಯಗೊಂಡಿರುವ ಘಟನೆ ತಾಲ್ಲೂಕಿನ ಮೈಸೂರು ಗಡಿ ಭಾಗದ ‘ಡಿ’ ಪಾಲ್‌ ಶಿಕ್ಷಣ ಸಂಸ್ಥೆ ಬಳಿ ನಡೆದಿದೆ.

Join Our Whatsapp Group

ಹುಣಸೂರು ತಾಲ್ಲೂಕು ಬಿಳಿಕೆರೆ ಹೋಬಳಿ ಉದ್ದೂರು ಗ್ರಾಮದ ಧನಂಜಯ ಅವರ ಮಗ ಶಂಕರ್‌ (30) ಮೃತರು.

ಅದೇ ಗ್ರಾಮದ ಮುದ್ದುರಾಜ್‌, ಕುಮಾರೇಗೌಡ, ಅರುಣ, ಜವರೇಗೌಡ ಮತ್ತು ರವಿಚಂದ್ರ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.

ಕಬ್ಬು ತುಂಬಿದ್ದ ಲಾರಿ ಇಲವಾಲದಿಂದ ಪಾಂಡವಪುರ ಕಡೆ ಬರುತ್ತಿತ್ತು. ಗೂಡ್ಸ್‌ ಆಟೊ ಬೆಳಗೊಳದಿಂದ ಇಲವಾಲ ಕಡೆ ತೆರಳುತ್ತಿತ್ತು.ಈ ಸಂದರ್ಭದಲ್ಲಿ ಕಬ್ಬು ತುಂಬಿದ್ದ ಲಾರಿ ಗೂಡ್ಸ್‌ ಆಟೊ ಮೇಲೆ ವಾಲಿಕೊಂಡು ಬಿದ್ದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸ್ಥಳಕ್ಕೆ ಕೆಆರ್‌ಎಸ್‌ ಠಾಣೆ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.