ಮನೆ ಸ್ಥಳೀಯ ಏ 14ರಿಂದ ಲಾರೀ ಮಾಲೀಕರ ಮುಷ್ಕರ

ಏ 14ರಿಂದ ಲಾರೀ ಮಾಲೀಕರ ಮುಷ್ಕರ

0


ಮೈಸೂರು: ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿರುವ ಜನಸಾಮಾನ್ಯರು ಹಲವು ಹೋರಾಟ ನಡೆಸುತ್ತಿರುವ ಬೆನ್ನಲ್ಲೇ ಲಾರಿ ಮಾಲೀಕರು ಸಹ ಹೋರಾಟ ನಡೆಸಲು ತೀರ್ಮಾನಿಸಿದ್ದು, ಏ.೧೪ರಿಂದ ರಾಜ್ಯಾದಂತ ಮುಷ್ಕರ ನಡೆಸಲು ನಿರ್ಧರಿಸಿದ್ದಾರೆ.

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಏ.೧೪ರಿಂದ ಲಾರಿ ಚಾಲಕರು ಮಾಲೀಕರು ರಾಜ್ಯಾದಂತ ಮುಷ್ಕರ ನಡೆಸಲು ತೀರ್ಮಾನಿಸಿದ್ದಾರೆ. ಏ.೧೪ರ ಮಧ್ಯ ರಾತ್ರಿಯಿಂದಲೇ ಆರು ಲಕ್ಷ ಲಾರಿಗಳು ಮುಷ್ಕರದಲ್ಲಿ ಭಾಗಿಯಾಗಲಿದ್ದು, ಹಾಲು, ಮೊಸರು, ತರಕಾರಿ ಲಾರಿಗಳನ್ನು ಹೊರತುಪಡಿಸಿ ಉಳಿದೆಲ್ಲಾ ಲಾರಿಗಳ ಸಂಚಾರ ಸ್ಥಗಿತಗೊಳಿಸಲಿವೆ.

ಸರ್ಕಾರಗಳು ಪೆಟ್ರೋಲ್, ಡೀಸೆಲ್ ದರಗಳೊಂದಿಗೆ ಟೋಲ್ ದರವನ್ನು ಸಹ ಹೆಚ್ಚಳ ಮಾಡಿವೆ. ಇದರ ಪರಿಣಾಮ ಲಾರಿ ಚಾಲಕರು ಹಾಗೂ ಮಾಲೀಕರು ಸಂಕಷ್ಟದಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯಾದಂತ ನಡೆಯಲಿರುವ ಲಾರಿ ಮುಷ್ಕರದಲ್ಲಿ ಪೆಟ್ರೋಲ್, ಡೀಸೆಲ್, ಗ್ಯಾಸ್ ವಾಹನಗಳು ಭಾಗಿಯಾಗುತ್ತವೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ನಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ನಿರಂತರ ಹೋರಾಟ ನಡೆಯಲಿದೆ ಎಂದು ಕರ್ನಾಟಕ ಲಾರಿ ಚಾಲಕರು ಮಾಲೀಕರ ಸಂಘದ ರಾಜ್ಯಾಧ್ಯಕ್ಷ ಷಣ್ಮುಗಪ್ಪ ತಿಳಿಸಿದ್ದಾರೆ.