ಮನೆ ಅಪರಾಧ ಚಿನ್ನದ ಗಟ್ಟಿಯ ಆಮಿಷ: 12.24 ಲಕ್ಷ ವಂಚನೆ

ಚಿನ್ನದ ಗಟ್ಟಿಯ ಆಮಿಷ: 12.24 ಲಕ್ಷ ವಂಚನೆ

0

ಮೈಸೂರು: ಚಿನ್ನದ ಗಟ್ಟಿ ನೀಡುವುದಾಗಿ ನಂಬಿಸಿ ನಗರದ ಚಿನ್ನಾಭರಣ ವ್ಯಾಪಾರಿಯಿಂದ ₹12.24 ಲಕ್ಷ ಪಡೆದ ಹೈದರಾಬಾದ್ ಮೂಲದ ವ್ಯಕ್ತಿ ವಂಚಿಸಿದ್ದಾರೆ.

Join Our Whatsapp Group

ದೇವರಾಜ ಅರಸು ರಸ್ತೆಯಲ್ಲಿನ ಶಾರದಾ ಜ್ಯುವೆಲ್ಲರ್ಸ್‌ ಮಳಿಗೆಯನ್ನು ಹೊಂದಿರುವ ಅರುಣಾಚಲ ಅವರು ಹೋಲ್‌ಸೇಲ್ ಚಿನ್ನದ ವ್ಯಾಪಾರಿಗಳಿಂದ ಚಿನ್ನದ ಗಟ್ಟಿ ಖರೀದಿಸುತ್ತಿದ್ದರು. ಇದೇ ರೀತಿ ತಮ್ಮ ಅಳಿಯ ಗೌರವ್‌ಲಾಲ್ ಅವರಿಂದ ಪರಿಚಯವಾದ ಹೈದರಾಬಾದ್ ನಿವಾಸಿ ರಾಜೇಶ್‌ ಕುಮಾರ್ ಕಡೇಲ ಅವರನ್ನು ಸಂಪರ್ಕಿಸಿ 200 ಗ್ರಾಂ ಚಿನ್ನದ ಗಟ್ಟಿಯನ್ನು ಖರೀದಿಸುವುದಾಗಿ ಹೇಳಿದ್ದಾರೆ.

ಇದಕ್ಕಾಗಿ ಮುಂಗಡವಾಗಿ ₹6 ಲಕ್ಷ ಪಾವತಿಸಿದ್ದು, ರಾಜೇಶ್ ಅವರ ಮನವಿಯಂತೆ ಮತ್ತೆ ₹6.24 ಲಕ್ಷವನ್ನು ಅವರ ಖಾತೆಗೆ ಜಮೆ ಮಾಡಿದ್ದಾರೆ. ಹಣ ನೀಡಿ ಕೆಲವು ತಿಂಗಳಾದರೂ ಚಿನ್ನದ ಗಟ್ಟಿಯನ್ನು ಕೊಡದೆ ಸತಾಯಿಸಿದ್ದರಿಂದ ಅರುಣಾಚಲ ಅವರು ದೇವರಾಜ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಹಿಂದಿನ ಲೇಖನಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಸಭೆ: ಶಾಲೆಗಳ ಅಭಿವೃದ್ಧಿಗೆ ಒತ್ತು ನೀಡಲು ಸಿಎಂ ಸೂಚನೆ
ಮುಂದಿನ ಲೇಖನಹೃದಯ ರೋಗಿಗಳಿಗೆ ಚಿಕಿತ್ಸೆ: ಭಾಗ ಎರಡು