ಮನೆ ರಾಜಕೀಯ ಮಂತ್ರಿಯಾಗಿ ಮಧು ಬಂಗಾರಪ್ಪ ಗುಂಡಾ ವರ್ತನೆ ಮಾಡುವುದನ್ನ ಬಿಡಬೇಕು: ಹರತಾಳು ಹಾಲಪ್ಪ‌

ಮಂತ್ರಿಯಾಗಿ ಮಧು ಬಂಗಾರಪ್ಪ ಗುಂಡಾ ವರ್ತನೆ ಮಾಡುವುದನ್ನ ಬಿಡಬೇಕು: ಹರತಾಳು ಹಾಲಪ್ಪ‌

0

ಶಿವಮೊಗ್ಗ: ಸಚಿವ ಮಧು ಬಂಗಾರಪ್ಪ ಗುಂಡಾಗಿರಿ ಮಾಡುವುದನ್ನು ಬಿಡಬೇಕು. ಅವರ ನಡುವಳಿಕೆಗಳು ಮಾತುಗಳು ಸರಿಯಿಲ್ಲ. ಮಧು ಬಂಗಾರಪ್ಪ ಕ್ಷಮೆ ಕೇಳಬೇಕು. ಅಧಿಕಾರಿಗಳಿಗೆ ಹೆದರಿಸುವ ಕ್ರಮ ಸರಿಯಲ್ಲ. ಮಂತ್ರಿಯಾಗಿ ಗುಂಡಾ ವರ್ತನೆ ಮಾಡುವುದನ್ನ ಬಿಡಬೇಕು ಎಂದು ಮಾಜಿ ಸಚಿವ, ಬಿಜೆಪಿ ಉಪಾಧ್ಯಕ್ಷ ಹರತಾಳು ಹಾಲಪ್ಪ‌ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಧು ಬಂಗಾರಪ್ಪ ಸಭೆ ನಡೆಸಿ ಈ ಯಾತ್ರೆಗೆ ಹೋದರೆ ಕ್ರಮ ಕೈಗೊಳ್ಳುತ್ತೇವೆಂದು ಹೇಳಿದ್ದಾರೆ. ಕೇಂದ್ರ ಸರ್ಕಾರದ ಕಾರ್ಯಕ್ರಮಗಳಿಗೆ ಹೋಗದಂತೆ ಅಧಿಕಾರಿಗಳನ್ನು ತಡೆದಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಗೌರವಿಸುತ್ತೇವೆಂದು ಪ್ರಮಾಣ ಮಾಡಿರುತ್ತಾರೆ. ಕೂಡಲೇ ಮುಖ್ಯಮಂತ್ರಿಗಳು ಮಧು ಬಂಗಾರಪ್ಪನವರನ್ನು ವಜಾಗೊಳಿಸಬೇಕು. ಮಧು ಬಂಗಾರಪ್ಪ ಮಾತಾಡಿರೋದು ಸರಿ ಅಲ್ಲ. ಕೂಡಲೇ ರಾಜೀನಾಮೆ ನೀಡಬೇಕು ಎಂದರು.

ಬಡವರ ಕಾರ್ಯಕ್ರಮ ಜಾರಿಗೊಳಿಸುವುದನ್ನ ಇವರು ವಿರೋಧ ಮಾಡುತ್ತಿದ್ದಾರೆ ಈ ಸಂಬಂಧ ಜಿಲ್ಲಾಧಿಕಾರಿಗಳಿಗೆ ದೂರು ನೀಡುತ್ತೇವೆ. ಮಧು ಬಂಗಾರಪ್ಪ ಮಂತ್ರಿಯಾದ ಕೂಡಲೇ ಗಣರಾಜ್ಯ ಆಗಲು ಸಾಧ್ಯವಿಲ್ಲ ಎಂದರು.

ವಿಕಸಿತ ಭಾರತ ಯಾತ್ರೆ ಯಶಸ್ವಿಯಾಗಿ ನಡೆಯುತ್ತಿದೆ. ಎಲ್ಲಾ ಗ್ರಾಮ ಪಂಚಾಯತಿಯಲ್ಲೂ ನಾವು ತಲುಪಿದ್ದೇವೆ. ಕೇಂದ್ರ ಸರ್ಕಾರದ ಯೋಜನೆಗಳನ್ನು ತಲುಪಿಸುವ ಬಗ್ಗೆ ಈ ಯಾತ್ರೆ. ಕೇಂದ್ರ ಸರ್ಕಾರದ ಯೋಜನೆಗಳು ಸಿಗದೆ ಹೋದರೆ ಸ್ಥಳದಲ್ಲೇ ಪರಿಹಾರ ನೀಡುವ ಯಾತ್ರೆಯಿದು ಎಂದರು.

ಹಿಂದಿನ ಲೇಖನನಾಳೆ ಬೆಂಗಳೂರಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಆಗಮನ: ಸಂಚಾರ ಮಾರ್ಗ ಬದಲಾವಣೆ
ಮುಂದಿನ ಲೇಖನಮಹಾರಾಷ್ಟ್ರ: ರಾಸಾಯನಿಕ ಕಾರ್ಖಾನೆಯಲ್ಲಿ ಅಗ್ನಿ ಅವಘಡ– ಓರ್ವ ಸಾವು, 5 ಮಂದಿಗೆ ಗಾಯ