ಮಾಂಸ ಕೊಡಲು ನಿರಾಕರಿಸಿದ್ದಕ್ಕೆ ಮಾಂಸದ ಅಂಗಡಿ ಎದುರು ವ್ಯಕ್ತಿಯೊಬ್ಬ ಕೊಳೆತ ಶವವನ್ನು ಎಸೆದಿರುವ ಘಟನೆ ತಮಿಳುನಾಡಿನ ಪಳನಿ ಚೆಟ್ಟಿಪಟ್ಟಿಯಲ್ಲಿ ನಡೆದಿದೆ.
ಕುಮಾರ್ ಎಂಬಾತ ಸ್ಮಶಾನದಲ್ಲಿ ಕೆಲಸ ಮಾಡುತ್ತಿದ್ದ, ಮಣಿಯರಸನ್ ನಡೆಸುತ್ತಿದ್ದ ಅಂಗಡಿಯಲ್ಲಿ ಖಾಯಂ ಗ್ರಾಹಕನಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಭಾನುವಾರ ಕುಮಾರ್ ಅಂಗಡಿಗೆ ಹೋಗಿ ಮಾಂಸ ಕೇಳಿದ್ದ, ಆದರೆ ಮಣಿಯರಸನ್ ಆತನಿಗೆ ಮಾಂಸ ಕೊಡುವುದಿಲ್ಲ ಎಂದು ಹೇಳಿದ್ದರು. ಇದು ಸಣ್ಣ ಜಗಳವೆಂದು ಅಂಗಡಿಯವರು ಅಂದುಕೊಂಡಿದ್ದರು.
ಕುಮಾರ್ ಅಲ್ಲಿಂದ ಹೊರಟು ಹೋದ, ನಂತರ ಸ್ಮಶಾನಕ್ಕೆ ಹೋಗಿ ಅರ್ಧ ಕೊಳೆತ ಶವವನ್ನು ತೆಗೆದುಕೊಂಡು ಬಂದು, ಅಂಗಡಿಯ ಮುಂದೆ ಎಸೆದು ಪರಾರಿಯಾಗಿದ್ದಾನೆ. ಇದನ್ನು ನೋಡಿ ಅಂಗಿಯವರು ಹಾಗೂ ಗ್ರಾಹಕರು ಒಮ್ಮೆ ಬೆಚ್ಚಿಬಿದ್ದಾರೆ, ಕೂಡಲೇ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ಅವರು ಬಂದು ತನಿಖೆ ನಡೆಸಿದಾಗ ಈತನೇ ಶವ ಎಸೆದಿರಬಹುದು ಎಂದು ಅಂದಾಜಿಸಲಾಯಿತು.
ಅಧಿಕಾರಿಗಳು ಆಗಮಿಸಿ, ಶವವನ್ನು ಹೊರತೆಗೆದು ಶವಾಗಾರ ವ್ಯಾನ್ ನಲ್ಲಿ ಸ್ಮಶಾನಕ್ಕೆ ಸಾಗಿಸಿದರು. ಪೊಲೀಸರು ಕುಮಾರ್ಗಾಗಿ ಹುಡುಕಾಟ ನಡೆಸುತ್ತಿದ್ದಾರೆ.














