ಮಂಡ್ಯ: ಕಾಫಿ ಉದ್ಯಮಿಯ ಪತ್ನಿಯನ್ನು ಹತ್ಯೆ ಮಾಡಿರುವ ಘಟನೆ ಮಂಡ್ಯ ಹೊರವಲಯದ ಹೆಬ್ಬಾಳ ಬಳಿ ಮಂಗಳವಾರ ಸಂಜೆ ನಡೆದಿದೆ.
ಮಂಡ್ಯ ನಗರದ ರಾಘವೇಂದ್ರ ಕಾಫಿ ಹಾಗೂ ಹೆಬ್ಬಾಳ ಬಳಿ ಚಿಕ್ಕೋರಿ ಘಟಕ ನಡೆಸುತ್ತಿದ್ದ ರಮೇಶ್ ಎಂಬುವರ ಪತ್ನಿ ನಳಿನಿ (62) ಹತ್ಯೆಗೀಡಾದವರು.
ಹತ್ಯೆಗೂ ಮುನ್ನ ಅವರು ಹಂತಕರೊಂದಿಗೆ ಸೆಣಸಾಡಿದ್ದಾರೆ. ಕೊನೆಗೆ ಅವರ ಕುತ್ತಿಗೆಯನ್ನು ಬಿಗಿದು ಹತ್ಯೆ ಮಾಡಲಾಗಿದೆ ಎಂಬುದಕ್ಕೆ ಕುರುಹುಗಳು ಪತ್ತೆಯಾಗಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಮಂಡ್ಯದ ಪೇಟೆ ಬೀದಿ ಕಾಮನ ಸರ್ಕಲ್ ಬಳಿ ರಾಘವೇಂದ್ರ ಕಾಫಿ ವರ್ಕ್ಸ್ ಹೆಸರಿನಲ್ಲಿ ಕಾಫಿಪುಡಿ ಅಂಗಡಿ ನಡೆಸುತ್ತಿದ್ದ ರಮೇಶ ಅವರು ಕೆಲ ವರ್ಷಗಳ ಹಿಂದೆ ಖಾಸಗಿ ಬ್ಯಾಂಕ್ ನಲ್ಲಿ ಸಾಲ ಪಡೆದು ಹೆಬ್ಬಾಳ ಬಳಿ ಕಾಫಿಗೆ ಸಂಬಂಧಿಸಿದಂತೆ ಚಿಕೋರಿ ಘಟಕವನ್ನು ಸ್ಥಾಪಿಸಿದ್ದರು.
ಆದರೆ ಈ ಉದ್ಯಮದಲ್ಲಿ ನಷ್ಟ ಸಂಭವಿಸಿದ್ದು ಬ್ಯಾಂಕ್ ಸಾಲ ಮರುಪಾವತಿಯಾಗದ ಕಾರಣ ಬ್ಯಾಂಕ್ ನವರು ನ್ಯಾಯಾಲಯದ ಮೂಲಕ ಕ್ರಮ ಕೈಗೊಂಡಿದ್ದಾರೆ ಎನ್ನಲಾಗಿದೆ.
ಈ ಕಾರಣದಿಂದ ಕಳೆದ ಎರಡು ವರ್ಷದಿಂದ ಚಿಕೋರಿ ಘಟಕ ಸ್ಥಗಿತಗೊಂಡಿದೆ. ಸಾಲ ಹಾಗೂ ಉದ್ಯಮಗಳಲ್ಲಿ ಉಂಟಾದ ನಷ್ಟದ ಕಾರಣದಿಂದಾಗಿ ರಮೇಶ್ ಮತ್ತು ನಳಿನಿ ದಂಪತಿ ಮಂಡ್ಯ ತೊರೆದು ಮೈಸೂರು ವೃದ್ದಾಶ್ರಮ ಒಂದಕ್ಕೆ ಸೇರಿಕೊಂಡಿದ್ದರು. ಕೆಲವು ದಿನಗಳ ಹಿಂದೆ ಅವರು ಮಂಡ್ಯಕ್ಕೆ ಹಿಂತಿರುಗಿದ್ದರು. ಮಂಡ್ಯ ನಗರದಲ್ಲಿ ಮನೆ ಇದ್ದರೂ ಕೂಡ ಪ್ರತಿದಿನ ಅವರು ಚಿಕೋರಿ ಕಾರ್ಖಾನೆಗೆ ತೆರಳಿ ಅಲ್ಲಿನ ಕೊಠಡಿಯಲ್ಲಿ ಕೆಲಕಾಲ ಇದ್ದು ಬರುತ್ತಿದ್ದರು ಎಂದು ತಿಳಿದುಬಂದಿದೆ.
ನಳಿನಿ ಅವರ ಸೊಸೆ ಬೆಂಗಳೂರಿನಲ್ಲಿದ್ದು, ಮಂಗಳವಾರ ಸಂಜೆ ಮೊಬೈಲ್ ಗೆ ಕರೆ ಮಾಡಿದಾಗ ನಳಿನಿ ಕರೆ ಸ್ವೀಕರಿಸದ ಹಿನ್ನೆಲೆಯಲ್ಲಿ ವಯೋವೃದ್ಧರಾದ ಅವರ ಆರೋಗ್ಯದ ಬಗ್ಗೆ ಕಾಳಜಿಯಿಂದಾಗಿ ನಳಿನಿ ಸೊಸೆ ತಮ್ಮ ಪರಿಚಯಿಸ್ತರಿಗೆ ವಿಷಯ ತಿಳಿಸಿ ಚಿಕೋರಿ ಕಾರ್ಖಾನೆ ಬಳಿ ಹೋಗಿ ಅತ್ತೆಯನ್ನು ನೋಡುವಂತೆ ಹೇಳಿದ್ದರು. ಅದರಂತೆ ಕಾರ್ಖಾನೆ ಬಳಿ ಹೋದಾಗ ಹತ್ಯೆಯ ಪ್ರಕರಣ ಬೆಳಕಿಗೆ ಬಂದಿದೆ.
ಸ್ಟೇಜ್ ಮೇಲೆ ಯುವ'ನಾ ಚಂಗಲಾಟ….!!
ವಸ್ತು ಪ್ರದರ್ಶನ ಪ್ರಾಧಿಕಾರದಲ್ಲಿ ರಕ್ತ ಪಿಪಾಸುಗಳು…
ಮಂತ್ರಿಯಾಗಿ ಪವನ್ ಕಲ್ಯಾಣ ಪ್ರಮಾಣವಚನ
ಮಾಧ್ಯಮ ರಂಗದ ಭೀಷ್ಮ ರಾಮೋಜಿ ರಾವ್ ನಿಧನ.!
ಬ್ಯಾಂಕ್ ನೋಟ್ ಪೇಪರ್ ಮಿಲ್ ಇಂಡಿಯಾ ಪೈ.ಲಿ.ನಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಆರ್ಜಿ ಆಹ್ವಾನ
ಡಿವೋಸ್ ಮೊರೆ ಹೋದ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ!
PM ಮೋದಿಯವರು ಸಂವಿಧಾನ್ ಸದನ್ಗೆ ಆಗಮಿಸುತ್ತಿದ್ದಂತೆ ಮೋದಿ ಮೋದಿ ಘೋಷಣೆ
ಅವಕಾಶವಾದಿ ರಾಜಕಾರಣ ಮಾಡುವವರಿಗೆ ಜನ ಬುದ್ದಿ ಕಲಿಸಿದ್ದಾರೆ – ಸಾರಾ ಮಹೇಶ್
ಆದಾಯ ತೆರಿಗೆ ಇನ್ಸ್ಪೆಕ್ಟರ್, ಅಸಿಸ್ಟೆಂಟ್ ಹುದ್ದೆ ನೇಮಕಾತಿ
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.