ಮಂಡ್ಯ: ಸಾಲಭಾದೆ ತಾಳಲಾರದೆ ಮಹಿಳೆ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಗಾಜನೂರಿನಲ್ಲಿ ನಡೆದಿದೆ.
ಗಾಜನೂರಿನ ನಾಗರಾಜಮ್ಮ(52), ಆತ್ಮಹತ್ಯೆಗೆ ಶರಣಾ ರೈತ ಮಹಿಳೆ.
ರೈತ ಮಹಿಳೆ ನಾಗರಾಜಮ್ಮ ಒಂದೂವರೆ ಎಕರೆ ಜಮೀನು ಹೊಂದಿದ್ದರು.
ಗಂಡ ಮೃತಪಟ್ಟಿದ್ದ ಹಿನ್ನಲೆ ಕೃಷಿಯನ್ನೆ ನಂಬಿದ್ದರು. ಕೃಷಿ ಹಾಗೂ ರೇಷ್ಮೆ ಹುಳು ಸಾಕಾಣಿಕೆಯಿಂದ ಬ್ಯಾಂಕ್, ಪ್ರಾಥಮಿಕ ಕೃಷಿ ಪರಿಷತ್ತಿನ ಸಂಘ, ಶ್ರೀಶಕ್ತಿ ಸಂಘ ಹಾಗೂ ಖಾಸಗಿಯವರಿಂದ ಸುಮಾರು 10 ಲಕ್ಷಕ್ಕೂ ಅಧಿಕ ಸಾಲಮಾಡಿದ್ದರು.
ಸಾಲಭಾದೆ ತಾಳಲಾರದೆ ನಿನ್ನೆ ಮನೆಯಲ್ಲಿಯೇ ನೇಣಿಗೆ ಶರಣಾಗಿದ್ದಾರೆ.
ಮೃತಳ ಪುತ್ರ ಮಳವಳ್ಳಿ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
Saval TV on YouTube