ಬೆಂಗಳೂರು(Bengaluru)-ಡಾ. ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಟ್ರಸ್ಟ್ ವತಿಯಿಂದ ನೀಡಲಾಗುವ 2022ನೇ ಸಾಲಿನ ಮಾಸ್ತಿ ಪ್ರಶಸ್ತಿಗೆ ಏಳು ಮಂದಿ ಸಾಧಕರು ಆಯ್ಕೆಯಾಗಿದ್ದಾರೆ.
ನಾಡಿನ ಖ್ಯಾತ ಸಾಹಿತಿಗಳಾದ ಡಾ.ಕೆ.ವಿ. ನಾರಾಯಣ (ಭಾಷಾ ವಿಜ್ಞಾನ), ಡಾ.ಓ.ಎಲ್. ನಾಗಭೂಷಣಸ್ವಾಮಿ (ಅನುವಾದ), ಶಶಿಕಲಾ ವಸ್ತ್ರದ (ಕಾವ್ಯ), ರಾಘವೇಂದ್ರ ಪಾಟೀಲ (ಕಥೆ), ಚಂದ್ರಶೇಖರ ನಂಗಲಿ (ವಿಮರ್ಶೆ) ಹಾಗೂ ಹುಣಸವಾಡಿ ರಾಜನ್ (ಪತ್ರಿಕೋದ್ಯಮ), ‘ಪ್ರಜಾವಾಣಿ‘ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ (ಅಂಕಣ ಸಾಹಿತ್ಯ) ಅವರಿಗೆ ಕನ್ನಡ ಸಾಹಿತ್ಯ ಕ್ಷೇತ್ರದ ಪ್ರತಿಷ್ಠಿತ ಮಾಸ್ತಿ ಪ್ರಶಸ್ತಿ ಸಂದಿದೆ ಎಂದು ಟ್ರಸ್ಟ್ ಅಧ್ಯಕ್ಷ ಮಾವಿನಕೆರೆ ರಂಗನಾಥನ್ ತಿಳಿಸಿದ್ದಾರೆ.
ಪ್ರಶಸ್ತಿಯು ಫಲಕ ಮತ್ತು 25 ಸಾವಿರ ರೂ. ನಗದು ಒಳಗೊಂಡಿದೆ. ಜೂನ್ 18ರಂದು ಬೆಂಗಳೂರಿನ ಭಾರತೀಯ ವಿದ್ಯಾಭವನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.