ಸಮ್ಮತಿಯಿಲ್ಲದ ಖಾಸಗಿ ಚಿತ್ರಗಳನ್ನು (NCII) ಅವುಗಳ ಯುಆರ್ಎಲ್ಗಳಿಗೆ ಒತ್ತಾಯಿಸದೆ ಅಂತರ್ಜಾಲದಿಂದ ಮೊದಲೇ ತೆಗೆದುಹಾಕುವಂತೆ ಸರ್ಚ್ ಎಂಜಿನ್ಗಳಿಗೆ ನೀಡಿದ್ದ ಆದೇಶ ಪ್ರಶ್ನಿಸಿ ಟೆಕ್ ದೈತ್ಯರಾದ ಮೈಕ್ರೋಸಾಫ್ಟ್ ಮತ್ತು ಗೂಗಲ್ ದೆಹಲಿ ಹೈಕೋರ್ಟ್ ಮೊರೆ ಹೋಗಿವೆ.
ದೆಹಲಿ ಹೈಕೋರ್ಟ್ ಏಕಸದಸ್ಯ ಪೀಠ ನೀಡಿದ್ದ ನಿರ್ದೇಶನಗಳನ್ನು ಕಾರ್ಯಗತಗೊಳಿಸುವುದು ತಾಂತ್ರಿಕವಾಗಿ ಅಸಾಧ್ಯವಾಗಿದ್ದು ನಿರ್ದೇಶನಗಳು ಅಸ್ತಿತ್ವದಲ್ಲಿರುವ ಕಾನೂನು ಚೌಕಟ್ಟನ್ನು ಮೀರಿವೆ ಎಂದು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಮನಮೋಹನ್ ಮತ್ತು ನ್ಯಾಯಮೂರ್ತಿ ಮನ್ಮೀತ್ ಪ್ರೀತಮ್ ಸಿಂಗ್ ಅರೋರಾ ಅವರಿದ್ದ ವಿಭಾಗೀಯ ಪೀಠಕ್ಕೆ ಮೈಕ್ರೋಸಾಫ್ಟ್ ತಿಳಿಸಿತು.
ಇದೇ ರೀತಿಯ ಅರ್ಜಿಯನ್ನು ಗೂಗಲ್ ಗುರುವಾರ (ಮೇ 9) ಸಲ್ಲಿಸಲಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದಾಗ ನಾಳೆ ಎರಡೂ ಪ್ರಕರಣಗಳನ್ನು ಒಟ್ಟಿಗೆ ವಿಚಾರಣೆ ನಡೆಸುವುದಾಗಿ ನ್ಯಾಯಾಲಯ ತಿಳಿಸಿತು.
ಐಟಿ ನಿಯಮಾವಳಿ ಪಾಲಿಸದಿದ್ದರೆ ಹಾಗೂ ಅಂತಹ ಚಿತ್ರಗಳನ್ನು ತೆಗೆದುಹಾಕದಿದ್ದರೆ ತಮಗೆ ಇರುವ ರಕ್ಷಣೆಯನ್ನು ಸರ್ಚ್ ಎಂಜಿನ್ಗಳು ಕಳೆದುಕೊಳ್ಳುತ್ತವೆ ಎಂದು ಏಪ್ರಿಲ್ 2023ರಲ್ಲಿ ನ್ಯಾಯಮೂರ್ತಿ ಸುಬ್ರಮೋನಿಯಂ ಪ್ರಸಾದ್ ಅವರಿದ್ದ ಏಕಸದಸ್ಯ ಪೀಠ ಎಚ್ಚರಿಸಿತ್ತು.
ಇಂತಹ ಚಿತ್ರಗಳನ್ನು ತೆಗೆದುಹಾಕಲು ಸಂತ್ರಸ್ತರು ಮತ್ತೆ ಮತ್ತೆ ನ್ಯಾಯಾಲಯ ಇಲ್ಲವೇ ಅಧಿಕಾರಿಗಳನ್ನು ಸಂಪರ್ಕಿಸುವ ಅಗತ್ಯವಿಲ್ಲದೆ ಸರ್ಚ್ ಇಂಜಿನ್ಗಳೇ ಅದನ್ನು ತೆಗೆದುಹಾಕುವ ತಂತ್ರಜ್ಞಾನವಿದೆ ಎಂದು ನ್ಯಾ. ಪ್ರಸಾದ್ ಅಭಿಪ್ರಾಯಪಟ್ಟಿದ್ದರು.
ಅಂತಹ ಕಾನೂನುಬಾಹಿರ ವಸ್ತುವಿಷಯ ಹೊಂದಿರುವ ಲಿಂಕ್ಗಳನ್ನು ತೆಗೆದುಹಾಕಲು ಅಥವಾ ಬಳಕೆ ನಿಷ್ಕ್ರಿಯಗೊಳಿಸಲು ಸರ್ಚ್ ಇಂಜಿನ್ಗಳು ಅಸಹಾಯಕತೆ ವ್ಯಕ್ತಪಡಿಸುವಂತಿಲ್ಲ ಎಂದು ಏಕಸದಸ್ಯ ಪೀಠ ಎಚ್ಚರಿಸಿತ್ತು.
ಇಂದು ಮೈಕ್ರೋಸಾಫ್ಟ್ ಪರವಾಗಿ ಹಾಜರಾದ ಹಿರಿಯ ವಕೀಲ ಜಯಂತ್ ಮೆಹ್ತಾ, ಏಕಸದಸ್ಯ ಪೀಠ ಮೆಟಾ (ಫೇಸ್ಬುಕ್) ಬಳಸುವ ಸಾಧನವನ್ನು ಅವಲಂಬಿಸಿ ಈ ರೀತಿ ಹೇಳಿತ್ತು. ಆದರೆ ಮೆಟಾ ಮತ್ತು ಮೈಕ್ರೋಸಾಫ್ಟ್ ಸರ್ಚ್ ಎಂಜಿನ್ ಬಿಂಗ್ ನಡುವೆ ಸಾಕಷ್ಟು ವ್ಯತ್ಯಾಸವಿದ್ದು ಮೆಟಾದಂತೆ, ಬಿಂಗ್ ಯಾವುದೇ ವಿಷಯವನ್ನು ಹೋಸ್ಟ್ ಮಾಡುವುದಿಲ್ಲ ಎಂದರು. ಡೇಟಾಬೇಸ್ನಾದ್ಯಂತ ಇರುವ ಚಿತ್ರಗಳನ್ನು ಹುಡುಕಿ ತೆಗೆದುಹಾಕಲು ತಿಳಿಸಿದರೆ ಅದು ಸಾಧ್ಯವಾಗದು ಎಂದು ತಿಳಿಸಿದರು.
ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಪರಿಕರಗಳಿಗೆ ಸಮ್ಮತಿಯ ಮತ್ತು ಸಮ್ಮತಿ ಇಲ್ಲದ ಚಿತ್ರಗಳ ನಡುವೆ ವ್ಯತ್ಯಾಸವನ್ನು ಗುರುತಿಸಲು ಸಾಧ್ಯವಾಗುವುದಿಲ್ಲವಾದ್ದರಿಂದ ಅವು ಕೂಡ ಇಂತಹ ನಿರ್ದೇಶನ ಪಾಲಿಸಬೇಕು ಎಂದು ಸೂಚಿಸಲು ಸಾಧ್ಯವಾಗದು ಎಂದು ಅವರು ಪ್ರತಿಪಾದಿಸಿದರು.
ಡೆಂಗ್ಯೂ ಜ್ವರದ ಆತಂಕದಲ್ಲಿ ಮೈಸೂರಿನ ಕೆ ಆರ್ ಒನ್ ಬೆಟ್ಟದಪುರದ ಜನರು!
ಗುಜರಾತ್ ಕರಕುಶಲ ಉತ್ಸವದ ಸದುಪಯೋಗ ಪಡೆದುಕೊಳ್ಳಿ: ಕೆ ಎಂ ಗಾಯಿತ್ರಿ
ನ್ಯಾಯಾಲಯದಲ್ಲಿ ಜವಾನ ಹುದ್ದೆಗಳ ಭರ್ತಿಗೆ ಅಧಿಸೂಚನೆ !
ಮೂಡ ಹಗರಣಕ್ಕೆ ಸಂಬಂಧಿಸಿದ ವ್ಯಕ್ತಿಯ ಅಮಾನತು ಮಾಡುವಂತೆ ಪ್ರತಿಭಟನೆ
ಗುಜರಾತ್ ಹ್ಯಾಂಡಿಕ್ರಾಫ್ಟ್ ಉತ್ಸವ -2024 ಕುರಿತು ಪತ್ರಿಕಾಗೋಷ್ಠಿಯನ್ನು ಏರ್ಪಡಿಸಲಾಯಿತು
T20 ವಿಶ್ವ ಚಾಂಪಿಯನ್ ಟೀಮ್ ಇಂಡಿಯಾವನ್ನು ಭೇಟಿ ಮಾಡಿದ ಪ್ರಧಾನಿ ಮೋದಿ
4,000 ಕೋಟಿ ಬ್ರಹ್ಮಾಂಡ ಭ್ರಷ್ಟಾಚಾರ ಹಗರಣ ವಿರೋಧಿಸಿ ಪ್ರತಿಭಟನೆ
ಗ್ರಾಮ ಪಂಚಾಯಿತಿಗಳಲ್ಲೇ, ಜನನ ಮತ್ತು ಮರಣ, 'ಪ್ರಮಾಣ ಪತ್ರ' ದೊರೆಯುತ್ತದೆ.
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.