ಮನೆ ಕಾನೂನು ಅಕ್ರಮ ಹಣ ವರ್ಗಾವಣೆ ಪ್ರಕರಣ: ಸಂಜಯ್ ರಾವುತ್’ಗೆ ಜಾಮೀನು

ಅಕ್ರಮ ಹಣ ವರ್ಗಾವಣೆ ಪ್ರಕರಣ: ಸಂಜಯ್ ರಾವುತ್’ಗೆ ಜಾಮೀನು

0

ಮುಂಬೈ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜೈಲುವಾಸ ಅನುಭವಿಸುತ್ತಿದ್ದ ಶಿವಸೇನಾ ಸಂಸದ ಸಂಜಯ್ ರಾವುತ್ ಅವರಿಗೆ ಮುಂಬೈನ ವಿಶೇಷ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.

₹1,034 ಕೋಟಿಯ ಪತ್ರಾ ಚಾಲ್ ಭೂಮಿ ಅಭಿವೃದ್ಧಿ ಹಗರಣಕ್ಕೆ ಸಂಬಂಧಿಸಿದಂತೆ ರಾವುತ್ ಅವರನ್ನು ಜಾರಿ ನಿರ್ದೆಶನಾಲಯ ಬಂಧಿಸಿತ್ತು. ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆಯಡಿ ಬಂಧನಕ್ಕೊಳಗಾಗಿದ್ದ ರಾವುತ್ ಅರ್ಜಿಯ ವಿಚಾರಣೆ ನಡೆಸಿದ್ದ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಎಂ.ಜಿ. ದೇಶಪಾಂಡೆ, ತೀರ್ಪನ್ನು ಇಂದಿಗೆ ಕಾಯ್ದಿರಿಸಿದ್ದರು.

ರಾವುತ್ ಅವರಿಗೆ ಜಾಮೀನು ಸಿಕ್ಕಿರುವುದನ್ನು ಸ್ವಾಗತಿಸುತ್ತೇನೆ. ಅವರು, ಅತ್ಯಂತ ಧೈರ್ಯ ಮತ್ತು ಹೋರಾಟದ ಮನೋಭಾವವನ್ನು ಪ್ರದರ್ಶಿಸಿದ್ಧಾರೆ ಎಂದು ಶಿವಸೇನಾ ನಾಯಕ ಆದಿತ್ಯ ಠಾಕ್ರೆ ಹೇಳಿದ್ದಾರೆ.

ಮುಂಬೈನ ಆರ್ಥರ್ ಜೈಲ್‌’ನಲ್ಲಿರುವ ಸಂಜಯ್ ರಾವುತ್, ಜಾಮೀನು ಪ್ರತಿ ತಲುಪಿದ ಬಳಿಕ ಬಿಡುಗಡೆ ಆಗಲಿದ್ದಾರೆ.

4 ಭಾರಿ ಸಂಸದರಾಗಿರುವ ಸಂಜಯ್ ರಾವುತ್, ಸಾಮ್ನಾ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕರೂ ಹೌದು. ಆಗಸ್ಟ್ 1ರಂದು ಇ.ಡಿ ಅವರನ್ನು ಬಂಧಿಸಿತ್ತು. ಜುಲೈ 31ರಂದು ಇ.ಡಿ. ರಾವುತ್ ಅವರ ನಿವಾಸ ಮೈತ್ರಿ ಬಂಗಲೆ ಮೇಲೆ ದಾಳಿ ನಡೆಸಿತ್ತು. ವಿಚಾರಣೆ ಬಳಿಕ ಮಧ್ಯರಾತ್ರಿ ಅವರನ್ನು ಬಂಧಿಸಿತ್ತು.

ಹಿಂದಿನ ಲೇಖನಮೈಸೂರು: ವ್ಯಾಪಾರದಲ್ಲಿ ನಷ್ಟ-  ಗಿರವಿ ಅಂಗಡಿ ಮುಚ್ಚಿ ಪರಾರಿಯಾದ ಮಾಲೀಕ
ಮುಂದಿನ ಲೇಖನಧರ್ಮ, ಜಾತಿ ಬಿಟ್ಟರೆ ರಾಷ್ಟ್ರೀಯ ಪಕ್ಷಗಳಿಗೆ ಬೇರೆ ವಿಷಯ ಇಲ್ಲ: ಹೆಚ್.ಡಿ.ಕುಮಾರಸ್ವಾಮಿ