ಮನೆ ರಾಜಕೀಯ ಸಂಸದ ಡಿ.ವಿ ಸದಾನಂದ ಗೌಡ: ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಸ್ವಲ್ಪ ದಿನ ಸುಮ್ಮನಿದ್ರೆ ಒಳ್ಳೇದು

ಸಂಸದ ಡಿ.ವಿ ಸದಾನಂದ ಗೌಡ: ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಸ್ವಲ್ಪ ದಿನ ಸುಮ್ಮನಿದ್ರೆ ಒಳ್ಳೇದು

0

ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಗುಡುಗಿದ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿಗೆ ಸಂಸದ ಡಿ.ವಿ ಸದಾನಂದ ಗೌಡ ಅವರು ತಿರುಗೇಟು ನೀಡಿದ್ದಾರೆ. ಅಂದ್ರಹಳ್ಳಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಮಾಜಿ ಕೇಂದ್ರ ಸಚಿವ, ಸಂಸದ ಡಿವಿ ಸದಾನಂದ ಗೌಡ, ಕುಮಾರಸ್ವಾಮಿಯವರು ಸ್ವಲ್ಪ ದಿನ ಸುಮ್ಮನಿದ್ದರೆ ಒಳ್ಳೆಯದು ಎಂದು ಹೇಳಿದ್ದಾರೆ.

Join Our Whatsapp Group

ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಟ್ವೀಟ್ ಮಾಡಿದ್ದ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ, ವರ್ಗಾವಣೆ ದಂಧೆಯ ಆರೋಪ ಹೊರಿಸಿದ್ದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಂಸದ ಡಿವಿ ಸದಾನಂದ ಗೌಡ, ಕುಮಾರಸ್ವಾಮಿಯವರು ಸ್ವಲ್ಪ ದಿನ ಸುಮ್ಮನಿದ್ದರೆ ಒಳ್ಳೆಯದು. ಅವರ ನಿರೀಕ್ಷೆಗೆ ತಕ್ಕಷ್ಟು ಜನಾಶೀರ್ವಾದ ಇರಲಿಲ್ಲ. ಬರೇ ಟೀಕೆ ಟಿಪ್ಪಣಿಯಿಂದ ರಾಜಕಾರಣ ನಡೆಸುತ್ತೇವೆ ಅನ್ನೋ ಭಾವನೆ ಅವರ ಹಿನ್ನಡೆಗೆ ಕಾರಣ ಆಗಿರಬಹುದು ಎಂದರು.
ಮುಂದುವರಿದು ಮಾತನಾಡಿದ ಸದಾನಂದ ಗೌಡ, ಇಂತಹ ವಿಚಾರಗಳಿಗೆ ನಾವು ಉತ್ತರಿಸುವ ಅಗತ್ಯವಿಲ್ಲ. ಜನ ಈಗಾಗಲೇ ಎಚ್ಡಿ ಕುಮಾರಸ್ವಾಮಿ ಅವರಿಗೆ ಉತ್ತರ ಕೊಟ್ಟಿದ್ದಾರೆ. ಅದನ್ನ ಅರ್ಥ ಮಾಡಿಕೊಳ್ಳಲಿಕ್ಕೆ ಆಗಿಲ್ಲ ಅಂದ್ರೆ ತುಂಬಾ ಬೇಸರ ಆಗುತ್ತೆ ಎಂದರು.

ಹಿಂದಿನ ಲೇಖನಗಗನಕ್ಕೇರಿದ ತರಕಾರಿಗಳ ಬೆಲೆ: ಬಡವರು, ಮಧ್ಯಮವರ್ಗದ ಜನರ ಮೇಲಷ್ಟೇ ಅಲ್ಲದೆ, ರೆಸ್ಟೋರೆಂಟ್ ಗಳ ಮೇಲೂ ಬೆಲೆ ಏರಿಕೆ ಬಿಸಿ
ಮುಂದಿನ ಲೇಖನಬಿಪಿಎಲ್‌ ಕಾರ್ಡುದಾರರಿಗೆ ಬಂಪರ್: 5 ಕೆಜಿಗೆ 170 ರೂಪಾಯಿ ಹಣ ನೀಡಲು ಸರ್ಕಾರ ತೀರ್ಮಾನ