ಮನೆ ರಾಜಕೀಯ ಮುಡಾ ದಾಖಲೆ ಬಹಿರಂಗ ಮಾಡಿದ್ದು ಡಿಕೆಶಿ: ಜಿ.ಜನಾರ್ದನ ರೆಡ್ಡಿ ಆರೋಪ

ಮುಡಾ ದಾಖಲೆ ಬಹಿರಂಗ ಮಾಡಿದ್ದು ಡಿಕೆಶಿ: ಜಿ.ಜನಾರ್ದನ ರೆಡ್ಡಿ ಆರೋಪ

0

ಬಳ್ಳಾರಿ: ಮುಡಾ ಹಗರಣ ಬಹಿರಂಗವಾಗಲು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರೇ ಕಾರಣವಾಗಿದ್ದು, ಅವರೇ ಸಿಎಂ ಸಿದ್ದರಾಮಯ್ಯ ಬುಡಕ್ಕೆ “ಕೈ’ ಹಾಕಿದ್ದಾರೆ ಎಂದು ಗಂಗಾವತಿ ಶಾಸಕ ಜಿ.ಜನಾರ್ದನ ರೆಡ್ಡಿ ಆರೋಪಿಸಿದರು.

Join Our Whatsapp Group

ಸುದ್ದಿಗಾರರ ಜತೆ ಮಾತನಾಡಿ, ಹಗರಣಕ್ಕೆ ಸಂಬಂ ಧಿಸಿದ ದಾಖಲೆಗಳು ವಿಪಕ್ಷದವರಿಗೆ ಸಿಗಲ್ಲ. ಡಿಸಿಎಂ ಡಿ.ಕೆ.ಶಿವಕುಮಾರ್‌, ಸಚಿವ ಸತೀಶ ಜಾರಕಿಹೊಳಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಹಳೇ ಕಾಂಗ್ರೆಸ್‌ ಬಣ ಸಿದ್ದರಾಮಯ್ಯ ಅವರನ್ನು ಸಿಎಂ ಗಾದಿಯಿಂದ ಇಳಿಸುವ ಪ್ರಯತ್ನ ಮಾಡುತ್ತಿದ್ದಾರೆ. ಅದಕ್ಕಾಗಿಯೇ ಡಿಕೆಶಿ ದಾಖಲೆಗಳನ್ನು ಬಹಿರಂಗ ಮಾಡಿದ್ದಾರೆ ಎಂದರು.