ಮನೆ ರಾಜ್ಯ ಸೋಲಿಗ ಜನರ ನೆರವಿಗೆ ಮಲ್ಟಿ ಪರ್ಪಸ್ ವಾಹನ

ಸೋಲಿಗ ಜನರ ನೆರವಿಗೆ ಮಲ್ಟಿ ಪರ್ಪಸ್ ವಾಹನ

0

ಕೊಳ್ಳೇಗಾಲ(Kollegala) (ಚಾಮರಾಜನಗರ): ಕಾಡಿನ ಜನರಿಗೆ ಅನುಕೂಲವಾಗವಂತೆ ಜಿಲ್ಲಾಡಳಿತ ಮತ್ತು ಅರಣ್ಯ ಇಲಾಖೆ ಸಹಯೋಗದಲ್ಲಿ ‘ಜನ ವನ ಸೇತುವೆ’ ಎಂಬ ಮಹತ್ತರವಾದ ಯೋಜನೆ ಜಾರಿಗೆ ತಂದಿದೆ.

ಜನ ವನ ಸೇತುವೆ ಎಂದರೆ ಹಲವು ಅವಶ್ಯಕತೆ ಈಡೇರಿಸುವ ವಾಹನ(ಮಲ್ಟಿ ಪರ್ಪಸ್ ವೈಕಲ್). ಕಾಡಿನೊಳಗೆ ಜೀವಿಸುವ ಸೋಲಿಗ ಜನರ ಕಷ್ಟಕ್ಕೆ ಸ್ಪಂದಿಸುವ ಸಂಚಾರ ಸಾರಿಗೆಯಾಗಿದೆ. ಮಲೆ ಮಹದೇಶ್ವರ ವನ್ಯ ಜೀವಿ ವಿಭಾಗದ ಕಾಡಂಚಿನ ಗ್ರಾಮಗಳಲ್ಲಿ ಈ ವಾಹನ ಕಾರ್ಯನಿರ್ವಹಿಸಲಿದ್ದು, ಸೋಲಿಗ ಜನರ ಸೇವೆಗೆ ನಿಲ್ಲುತ್ತದೆ. ಸಾರಿಗೆ ಸಂಪರ್ಕ ವ್ಯವಸ್ಥೆಯೇ ಇಲ್ಲದ ಗ್ರಾಮಗಳಿಗೆ ನಾಲ್ಕು ಭಾಗಗಳಾಗಿ ವಿಂಗಡಿಸಿ ವಾಹನ ಸೌಲಭ್ಯ ಒದಗಿಸಲಾಗುತ್ತಿದೆ.

ಮುಖ್ಯ ರಸ್ತೆಗಳಿಂದ ಕಾಡಂಚಿನ ಗ್ರಾಮಗಳಿಗೆ ಜನರನ್ನು ಡ್ರಾಪ್, ಪಿಕ್ ಆಪ್ ಮಾಡುವ ಕೆಲಸವನ್ನು ವಾಹನ ನಿರ್ವಹಿಸಲಿದೆ. ಅಲ್ಲದೇ ಪೋಡುಗಳಲ್ಲಿರುವ ಶಾಲೆಗೆ ತೆರಳುವ ಶಿಕ್ಷಕರು, ಪಡಿತರ ಸಾಗಣೆ, ಗರ್ಭಿಣಿಯರಿಗೆ ತುರ್ತು ಸಂದರ್ಭದಲ್ಲಿ ಆ್ಯಂಬುಲೆನ್ಸ್ ನಂತೆ ಈ ವಾಹನ ನೆರವಾಗಲಿದೆ. ಈ ವಾಹನ ಸೌಲಭ್ಯವನ್ನು ಲೋಕಾರ್ಪಣೆ ‌ಮಾಡಲು ಜಿಲ್ಲಾಡಳಿತ ಮತ್ತು ಅರಣ್ಯ ಇಲಾಖೆಯ ಮುಂದಾಗಿದೆ.

ಈ ಬಗ್ಗೆ ಮಾತನಾಡಿದ ಡಿಸಿಎಫ್ ಏಡುಕುಂಡಲು, ಜನ‌ ವನ ಸೇತುವೆ ಯೋಜನೆ ಉದ್ದೇಶ ಕಾಂಡಚಿನ ಗ್ರಾಮಗಳ ಜನರಿಗೆ ವಾಹನ ನೆರವು ನೀಡುವುದಾಗಿದೆ. ಮೊದಲನೆಯದಾಗಿ ಪಡಸಲನಾಥ, ಪಾಲರ್, ಮ.ಬೆಟ್ಟ, ಎರಡನೇದಾಗಿ ಮೆದಗಲಾನೆ ಬೆಟ್ಟ, ತೊಲಸಕೆರೆ, ಹಿಂಡಿಗನಾಥ, ನಾಗಮಲ, ಮೂರನೇದಾಗಿ ಬೆಟ್ಟ, ಕೊಕ್ಕಬೆರೆ, ತೋಕೆರೆ, ದೊಡ್ಡಾನೆ, ಮಾರ್ಟಳಿ ವಾಹನ ನಿಯೋಜಿಸಲಾಗಿದೆ. ನಾಲ್ಕನೇಯದಾಗಿ ಪಚ್ಚದೊಡ್ಡಿ, ಕಾಂಚಳಿ, ಅಜ್ಜಿಪುರ ಗ್ರಾಮಗಳಿಗೆ ವಾಹನ ನಿಯೋಜಿಸಲಾಗಿದೆ ಎಂದರು.