ಮನೆ ಅಪರಾಧ `ವಿಷ ಕುಡಿದಿದ್ದೇನೆ, ಅರೆಸ್ಟ್ ಮಾಡಿ’ ಎಂದು ಪೊಲೀಸ್ ಠಾಣೆಗೆ ಬಂದ ಕೊಲೆ ಆರೋಪಿ

`ವಿಷ ಕುಡಿದಿದ್ದೇನೆ, ಅರೆಸ್ಟ್ ಮಾಡಿ’ ಎಂದು ಪೊಲೀಸ್ ಠಾಣೆಗೆ ಬಂದ ಕೊಲೆ ಆರೋಪಿ

0

ಮೈಸೂರು(Mysuru): ನಾನು ವಿಷ ಕುಡಿದಿದ್ದೇನೆ, ನನ್ನನ್ನು ಅರೆಸ್ಟ್ ಮಾಡಿ ಎಂದು ಕೊಲೆ ಆರೋಪಿಯೊಬ್ಬ ನಂಜನಗೂಡು ತಾಲೂಕಿನ ಹುಲ್ಲಹಳ್ಳಿ ಪೊಲೀಸ್ ಠಾಣೆಗೆ ಆಗಮಿಸಿದ್ದು, ಪೊಲೀಸರು ಆತನಿಗೆ ಚಿಕಿತ್ಸೆ ಕೊಡಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಹುಲ್ಲಹಳ್ಳಿ ಗ್ರಾಮದ ಬಾರ್ ಒಂದರಲ್ಲಿ ಮಹಾದೇವಸ್ವಾಮಿ ಹಾಗೂ ಜವರನಾಯಕ ನಡುವೆ ಕುಡಿದ ಅಮಲಿನಲ್ಲಿ ಜೂನ್ 14ರಂದು ಗಲಾಟೆಯಾಗಿದ್ದು, ಆ ಸಂದರ್ಭದಲ್ಲಿ ಜವರನಾಯಕನಿಗೆ ಮಾರಣಾಂತಿಕ ಹಲ್ಲೆಯಾಗಿ ಮೃತ ಪಟ್ಟಿದ್ದ. ಹಲ್ಲೆ ಮಾಡಿದ್ದ ಮಹಾದೇವಸ್ವಾಮಿ ನಾಪತ್ತೆ ಆಗಿದ್ದು, ಆತನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದರು.

ಶುಕ್ರವಾರ ಮಹಾದೇವಸ್ವಾಮಿ ಕ್ರಿಮಿನಾಶಕ ಸೇವನೆ ಮಾಡಿ ಹುಲ್ಲಹಳ್ಳಿ ಪೊಲೀಸ್ ಠಾಣೆಗೆ ಬಂದಿದ್ದಾನೆ. ನೀವು ಹುಡುಕುತ್ತಿರುವ ಮಹಾದೇವಸ್ವಾಮಿ ನಾನೇ, ನನ್ನನ್ನು ಬಂಧಿಸಿ ಎಂದಿದ್ದಾನೆ. ಬಂಧಿಸಲು ಮುಂದಾದಾಗ ಪೊಲೀಸರ ಜೊತೆ ನಾನು ಈಗಾಗಲೇ ಕ್ರಿಮಿನಾಶಕ ಕುಡಿದು ಬಂದಿದ್ದೇನೆ. ನೀವು ಏನೂ ಮಾಡಲು ಆಗುವುದಿಲ್ಲ. ನಾನೇ ಸಾಯುತ್ತೇನೆ ಎಂದು ಹೇಳಿದ್ದಾನೆ.

ತಕ್ಷಣ ಪೊಲೀಸರು ಮೇಲಾಧಿಕಾರಿಗಳ ಗಮನಕ್ಕೆ ತಂದು ಆತನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಒಂದೆರಡು ದಿನಗಳಲ್ಲಿ ಚೇತರಿಸಿಕೊಂಡ ಮಹಾದೇವಸ್ವಾಮಿಯನ್ನು ಭಾನುವಾರ ವಿಚಾರಣೆ ನಡೆಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಹಿಂದಿನ ಲೇಖನಸಮಾಜ ವಿಜ್ಞಾನ ಪಾಠದಲ್ಲಿ ‘ಸಂವಿಧಾನ ಶಿಲ್ಪಿ’ ಪದ  ಪುನರ್‌ ಸೇರ್ಪಡೆ: ಸರ್ಕಾರದ ಆದೇಶ
ಮುಂದಿನ ಲೇಖನಶಿವಸೇನೆ ಸಂಸದ ಸಂಜಯ್ ರಾವತ್ ಗೆ ಇಡಿ ಸಮನ್ಸ್