ಮನೆ ಅಪರಾಧ ಯುವಕನ ಕೊಲೆ ಪ್ರಕರಣ: ನಾಲ್ವರ ಬಂಧನ

ಯುವಕನ ಕೊಲೆ ಪ್ರಕರಣ: ನಾಲ್ವರ ಬಂಧನ

0

ಕಲಬುರಗಿ(Kalburgi): ನಗರದ ಎಂಎಸ್​ಕೆ ಮಿಲ್​ ಬಡಾವಣೆಯಲ್ಲಿ ನಡೆದ ಯುವಕ ಸೋಹೆಲ್ ಕೊಲೆ(murder) ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿ(accused)ಗಳನ್ನು ಪೊಲೀಸರು ಬಂಧಿಸಿ(arrested), ವಿಚಾರಣೆ ನಡೆಸುತ್ತಿದ್ದಾರೆ.

ಪೊಲೀಸರ ವಿಚಾರಣೆ(police investigation) ವೇಳೆ ಹಣಕಾಸಿನ ವ್ಯವಹಾರ ಹಾಗೂ ಯುವತಿ ವಿಚಾರವಾಗಿ ಈ ಕೊಲೆ ನಡೆದಿರುವುದು ತಿಳಿದುಬಂದಿದೆ.

ಏ.1ರಂದು ಹೋಟೆಲ್​ನಲ್ಲಿ ಕುಳಿತಿದ್ದ ಸೋಹೆಲ್​ ದೇಹಕ್ಕೆ ಮಾರಕಾಸ್ತ್ರಗಳಿಂದ ಚುಚ್ಚಿ ಕೊಲೆ ಮಾಡಲಾಗಿತ್ತು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ನಡೆಸಿ ಮುಜಾಮಿಲ್ ಕುರೇಶಿ, ಜುನೇದ್ ಅಲಿ, ಮೊಹಮ್ಮದ್ ಆಯನ್ ಜಡ್ದಿ, ಅಬ್ರಾಬ್ ಹುಸೇನ್ ಎಂಬುವವರನ್ನು ಬಂಧಿಸಿದ್ದಾರೆ.

ಕೊಲೆಯಾದ ಸೋಹೆಲ್ ಮತ್ತು ಬಂಧಿತ ಆರೋಪಿಗಳ ಪೈಕಿ ಒಬ್ಬನಾದ ಮುಜಾಮಿಲ್‌ ಇಬ್ಬರೂ ಸ್ನೇಹಿತರಾಗಿದ್ದರು. ಇಬ್ಬರ ನಡುವೆ ಹಣಕಾಸಿನ ವ್ಯವಹಾರ ಕೂಡಾ ನಡೆದಿತ್ತು.‌ ಈ ನಡುವೆ ಮುಜಾಮಿಲ್ ಪ್ರೀತಿ ಮಾಡುತ್ತಿದ್ದ ಯುವತಿಯನ್ನು ಸೋಹೆಲ್ ಪ್ರೀತಿ ಮಾಡತೊಡಗಿದ್ದನಂತೆ. ಇದರಿಂದಾಗಿ ಇಬ್ಬರ ನಡುವೆ ಗಲಾಟೆ ನಡೆದಿದೆ. ಈ ಗಲಾಟೆ ವಿಕೋಪಕ್ಕೆ ತಿರುಗಿ ಮುಜಾಮಿಲ್ ತನ್ನ ಸಹಚರರೊಂದಿಗೆ ಸೇರಿ ಸೋಹೆಲ್ ಮೇಲೆ ದಾಳಿ ಮಾಡಿದ್ದಾನೆ. ಹೋಟೆಲ್​ನಲ್ಲಿ ಬಿರಿಯಾನಿ ತಿನ್ನುತ್ತಾ ಕುಳಿತಾಗ ಮಾರಕಾಸ್ತ್ರಗಳಿಂದ ಚುಚ್ಚಿ ಕೊಲೆಗೈದು ಆರೋಪಿಗಳು ಪರಾರಿಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಈ ಕುರಿತು ಆರ್‌.ಜಿ.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಿಂದಿನ ಲೇಖನಐಕ್ಯತೆ ಮುಖ್ಯ, ಪಕ್ಷ ಬಲಪಡಿಸಲು ಎಲ್ಲಾ ರೀತಿಯ ಪ್ರಯತ್ನಕ್ಕೆ ಬದ್ಧ: ಸೋನಿಯಾ ಗಾಂಧಿ
ಮುಂದಿನ ಲೇಖನಅಕ್ರಮವಾಗಿ ಕಡವೆ,ಜಿಂಕೆ ಮಾಂಸ ಮಾರಾಟ ಮಾಡಲು ಯತ್ನ: ಐವರ ಬಂಧನ