ಮನೆ ರಾಜ್ಯ ನನ್ನ ಧರ್ಮ ಪಾಲನೆ ಹೊಸ್ತಿಲು ದಾಟಿ ಹೊರಬಂದಿಲ್ಲ – ಬಾನು ಮುಷ್ತಾಕ್

ನನ್ನ ಧರ್ಮ ಪಾಲನೆ ಹೊಸ್ತಿಲು ದಾಟಿ ಹೊರಬಂದಿಲ್ಲ – ಬಾನು ಮುಷ್ತಾಕ್

0

ಮೈಸೂರು : ನನ್ನ ಧರ್ಮ ಪಾಲನೆ ಹೊಸ್ತಿಲು ದಾಟಿ ಹೊರಬಂದಿಲ್ಲ ಎಂದು ಬೂಕರ್‌ ಪ್ರಶಸ್ತಿ ವಿಜೇತ ಸಾಹಿತಿ ಭಾನು ಮುಷ್ತಾಕ್‌ ಹೇಳಿದ್ದಾರೆ.

ದಸರಾ ಉದ್ಘಾಟನೆ ಕಾರ್ಯಕ್ರಮದ ಬಳಿಕ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು. ಈ ವೇಳೆ, ನನ್ನ ಅಭಿಪ್ರಾಯ ಮಾತಲ್ಲಿ ಹೇಳುವುದು ಏನಿಲ್ಲ. ಎಲ್ಲಾ ನನ್ನ ನಡುವಳಿಕೆಯಲ್ಲೇ ಇದೆ ಎಂದು ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಿದರು.

ನಾನು ನನ್ನ ಧರ್ಮವನ್ನು ಪಾಲನೆ ಮಾಡುತ್ತೇನೆ. ಅದು ನನ್ನ ವೈಯುಕ್ತಿಕವಾದದ್ದು. ಅದು ಯಾವತ್ತೂ ಹೊಸ್ತಿಲು ದಾಟಿ ಹೊರಬಂದಿಲ್ಲ. ನನಗೆ ಬೇರೆ ಧರ್ಮಗಳ ಬಗ್ಗೆ ಅಪಾರವಾದ ಗೌರವವಿದೆ. ಹಳೇ ಭಾಷಣ ವೈರಲ್ ಆದ ವಿಚಾರವಾಗಿ, ಒಂದು ಚಿಕ್ಕ ತುಣುಕನ್ನ ಕೇಳಿ ಏನನ್ನೂ ನಿರ್ಧಾರ ಮಾಡಬೇಡಿ. ನನ್ನ ಪೂರ್ತಿ ಮಾತನ್ನು ಕೇಳಿ ಎಂದು ಸ್ಪಷ್ಟನೆ ನೀಡಿದ್ದಾರೆ.