ಮೈಸೂರು : ಅರಮನೆ ಆವರಣದಲ್ಲಿ ನಡೆದ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕೊಂಡಿದ್ದು ಮೃತ ಸಲೀಂ ಉತ್ತರ ಪ್ರದೇಶದಲ್ಲಿ 5 ಎಕರೆ ಜಮೀನು ಹೊಂದಿದ್ದ ವಿಚಾರ ಬೆಳಕಿಗೆ ಬಂದಿದೆ.
ಉತ್ತರ ಪ್ರದೇಶದ ಪೊಲೀಸರ ಜೊತೆಗೆ ಮೈಸೂರು ಪೊಲೀಸರು ನಿರಂತರ ಸಂಪರ್ಕದಲ್ಲಿದ್ದು ಸಲೀಂ ಹಿನ್ನೆಲೆ ಬಗ್ಗೆ ಆಳವಾದ ತನಿಖೆ ಶುರುವಾಗಿದೆ. ಕನೋಜ್ ಜಿಲ್ಲೆಯ ತೊಫಿಯಾ ಗ್ರಾಮದ ನಿವಾಸಿಯಾಗಿರುವ ಸಲೀಂ ಊರಿನಲ್ಲಿ ಕೃಷಿ ಮಾಡುತ್ತಿದ್ದ. ಈತನಿಗೆ 5 ಎಕ್ರೆ ಜಮೀನು ಇದ್ದು ಇಷ್ಟು ವರ್ಷ ಕೃಷಿ ಕೆಲಸವನ್ನೇ ಮಾಡುತ್ತಿದ್ದ. ಕೃಷಿ ಕೆಲಸ ಬಿಟ್ಟು ಒಂದು ತಿಂಗಳ ಹಿಂದೆ ಮೈಸೂರಿಗೆ ಸಲೀಂ ಬಂದಿದ್ದ.
ಕೃಷಿ ಕೆಲಸ ಬಿಟ್ಟು ಮೈಸೂರಿಗೆ ಬಲೂನ್ ಮಾರಾಟ ಮಾಡಲು ಬಂದಿದ್ದು ಯಾಕೆ ಎಂಬ ಮಾಹಿತಿಯನ್ನು ಸಲೀಂ ಕುಟುಂಬಸ್ಥರಿಂದ ಈಗ ಪೊಲೀಸರು ಸಂಗ್ರಹಿಸುತ್ತಿದ್ದಾರೆ. 5 ಎಕ್ರೆ ಜಮೀನು ಇದ್ದರೂ ಬಲೂನು ಮಾರಾಟಕ್ಕೆ ಇಳಿದ್ದಿದ್ದು ಯಾಕೆ? ಅದರಲ್ಲೂ ಮೈಸೂರಿಗೆ ಬಂದು ಮಾರಾಟಕ್ಕೆ ಇಳಿದಿದ್ದು ಯಾಕೆ ಎನ್ನುವ ಪ್ರಶ್ನೆಗೆ ಉತ್ತರ ಸಿಗಬೇಕಿದೆ.














