ಮನೆ ಅಪರಾಧ ಮೈಸೂರು: ಒಂಟಿಯಾಗಿದ್ದ ವೃದ್ಧನ ಮೇಲೆ ಹಲ್ಲೆ ಮಾಡಿ ದರೋಡೆಗೆ ಯತ್ನಿಸಿದ ದುಷ್ಕರ್ಮಿಗಳು

ಮೈಸೂರು: ಒಂಟಿಯಾಗಿದ್ದ ವೃದ್ಧನ ಮೇಲೆ ಹಲ್ಲೆ ಮಾಡಿ ದರೋಡೆಗೆ ಯತ್ನಿಸಿದ ದುಷ್ಕರ್ಮಿಗಳು

0

ಮೈಸೂರು: ಒಂಟಿಯಾಗಿದ್ದ ವೃದ್ದನ ಮನೆಗೆ ನುಗ್ಗಿದ ಇಬ್ಬರು ದುಷ್ಕರ್ಮಿಗಳು ಹಲ್ಲೆ ನಡೆಸಿ ದರೋಡೆಗೆ ಯತ್ನಿಸಿದ ಘಟನೆ ಮೈಸೂರಿನ ಚಾಮುಂಡಿಪುರಂನಲ್ಲಿ ನಡೆದಿದೆ.

ಎರಡನೇ ಮೇನ್ ರಸ್ತೆಯಲ್ಲಿರುವ ಸುರೇಶ್ ಎಂಬುವರ ಮನೆಗೆ ನುಗ್ಗಿದ ಇಬ್ಬರು ಖದೀಮರು ಕುತ್ತಿಗೆ ಹಿಸುಕಿ ಹಲ್ಲೆ ನಡೆಸಿದ್ದಾರೆ.

ವೃದ್ದ ಸುರೇಶ್ ಜೋರಾಗಿ ಕಿರುಚಿದಾಗ ನೆರೆಮನೆಯವರು ಧಾವಿಸಿದ್ದಾರೆ. ಈ ವೇಳೆ ಓರ್ವ ಪರಾರಿಯಾಗಿದ್ದು,  ಮತ್ತೋರ್ವ ಸಿಕ್ಕಿಬಿದ್ದಿದ್ದಾನೆ. ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದ ಆರೋಪಿ ಕಿರಣ್ ಕುಮಾರ್ ಎಂದು ಹೇಳಲಾಗಿದೆ.

ಪರಾರಿಯಾದ ಮತ್ತೋರ್ವನ ಹೆಸರು ಕಿರಣ್ ಎಂದು ಹೇಳಲಾಗಿದೆ. ಸಿಕ್ಕಿದ್ದ ಕಿರಣ್ ಕುಮಾರ್ ಪ್ರತಿಷ್ಟಿತಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವುದಾಗಿ ತಿಳಿಸಿದ್ದಾನೆ.

ಘಟನೆ ನಡೆದ ಸ್ಥಳಕ್ಕೆ ಕೆ.ಆ‌ರ್.ಠಾಣೆ ಪೊಲೀಸರು ಭೇಟಿ ನೀಡಿ ಆರೋಪಿ ಕಿರಣ್ ಕುಮಾರ್ ನ ವಶಕ್ಕೆ ಪಡೆದಿದ್ದಾರೆ. ಕೆಲವು ದಿನಗಳ ಹಿಂದೆ ಇದೇ ವೃದ್ಧರ ಮೇಲೆ ಯುವಕರ ತಂಡವೊಂದು ಮನೆಗೆ ನುಗ್ಗಿ ಕಳುವಿಗೆ ಯತ್ನಿಸಿರುವುದಾಗಿ ತಿಳಿದು ಬಂದಿದೆ.

ಹಿಂದಿನ ಲೇಖನಸಂಸತ್ ನಲ್ಲಿ ಭದ್ರತಾ ಲೋಪ: ಮನೋರಂಜನ್ ನಿವಾಸಕ್ಕೆ 2 ಬಾರಿ ಬಂದು ಹೋಗಿದ್ದ ಸಾಗರ್ ಶರ್ಮಾ
ಮುಂದಿನ ಲೇಖನವಿಜಯಪುರ: ಟೈರ್ ಸ್ಫೋಟಗೊಂಡು ಬಸ್ ನಲ್ಲಿ ಬೆಂಕಿ- ಪ್ರಯಾಣಿಕರು ಪಾರು