ಮನೆ ರಾಜ್ಯ ಮೈಸೂರು: ಕೂಲಿ ಕಾರ್ಮಿಕನ ಹತ್ಯೆ

ಮೈಸೂರು: ಕೂಲಿ ಕಾರ್ಮಿಕನ ಹತ್ಯೆ

0

ಮೈಸೂರು: ಕೂಲಿ ಕಾರ್ಮಿಕರ ರಮೇಶ್(35)  ಎಂಬಾತನನ್ನು ಚೆಲುವಾಂಬ ಆಸ್ಪತ್ರೆ ಮಕ್ಕಳ ಕೊಠಡಿ ಒಂದರಲ್ಲಿ ಹತ್ಯೆ ಮಾಡಲಾಗಿದೆ.

ಚೆಲುವಾಂಬ ಆಸ್ಪತ್ರೆಯ ಮಕ್ಕಳ ವಾರ್ಡ್ ನ  ನವೀಕರಣ ಕಾಮಗಾರಿಯನ್ನು ದಿಶಾರ ಕಂಟ್ರೋಲ್ ಎಂಬ ಕನ್ಸ್ಟ್ರಕ್ಷನ್ ಕಂಪನಿ ನಡೆಸುತ್ತಿದ್ದು, ಕಂಪನಿಯು ಸೂಪರ್ ವೈಸರ್ ಅರುಣ್ ಕುಮಾರ್ ಎಂಬುವವರ ಬಳಿ ರಮೇಶ್ ಕೆಲಸಕ್ಕೆ ಸೇರಿಕೊಂಡಿದ್ದಾನೆ.

ಆತನಿಗೆ ಮನೆ ಇಲ್ಲದ ಕಾರಣ ಕೆಲಸ ಮುಗಿಸಿದ ನಂತರ ಚೆಲುವಾಂಬ ಆಸ್ಪತ್ರೆ ಮಕ್ಕಳ ವಾರ್ಡ್ ನ ಕೊಠಡಿಯೊಂದರಲ್ಲಿ ಉಳಿದುಕೊಳ್ಳುತ್ತಿದ್ದ. ಅಕ್ಟೋಬರ್ 15 ರಂದು ಮಧ್ಯಾಹ್ನ ಕೊಠಡಿಯಲ್ಲಿ ಈತನ ತಲೆ ಮೇಲೆ ತಾವುದೋ ಆಯುಧದಿಂದ ಹೊಡೆದು ಹತ್ಯೆ ಮಾಡಲಾಗಿದೆ.

ಈ ಸಂಬಂಧ ದೇವರಾಜ ಪೊಲೀಸ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ಕೊಂಡು ತನಿಖೆ ಮುಂದುವರಿಸಿದ್ದಾರೆ.

ಹಿಂದಿನ ಲೇಖನಸಲಿಂಗ ವಿವಾಹ ಮಾನ್ಯತೆಯ ವಿಚಾರವನ್ನು ಸಂಸತ್ತು ತೀರ್ಮಾನಿಸಲಿ: ಸುಪ್ರೀಂ ಕೋರ್ಟ್
ಮುಂದಿನ ಲೇಖನಮೈಸೂರು: ಟೈಲರಿಂಗ್ ವೃತ್ತಿ ಮಾಡುತ್ತಿದ್ದ ಗೃಹಿಣಿಯ ಹತ್ಯೆ