ಮೈಸೂರು : ಮೈಸೂರು ಹೊರವಲಯದ ವರುಣ ಗ್ರಾಮದ ಹೋಟೆಲ್ ಮುಂಭಾಗ ಭಾನುವಾರ (ಮೇ.04) ದಂದು ಮೈಸೂರು ನಗರದ ಕ್ಯಾತಮಾರನಹಳ್ಳಿ ನಿವಾಸಿ ಕಾರ್ತಿಕ್ (33) ಎಂಬ ವ್ಯಕ್ತಿಯ ಕೊಲೆಯಾಗಿತ್ತು. ಹಣಕಾಸಿನ ವಿಚಾರಕ್ಕೆ ಕಾರ್ತಿಕ್ನನ್ನು ಕೊಲೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಆದರೆ, ಕೊಲೆ ಹಿಂದಿನ ಕಾರಣ ಬೇರೆಯದ್ದೇಯಾಗಿದೆ. ಕಾರ್ತಿಕ್ನನ್ನು ಕೊಲೆ ಮಾಡಲು ಕಾರಣವೇನು? ಎಂಬುವುದನ್ನು ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ತಿಳಿಸಿದ್ದಾರೆ.
ಮೂಲತಃ ಕ್ಯಾತಮಾರನಹಳ್ಳಿ ನಿವಾಸಿಯಾಗಿರುವ ಕಾರ್ತಿಕ್ ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದು, ಈ ಹಿಂದೆ ಕಾರು ಚಾಲಕನಾಗಿದ್ದ ಪ್ರವೀಣ್ಗೂ, ಈ ಪ್ರಕರಣಕ್ಕೆ ಸಂಬಂಧಿಸಿದ ಬೇರೆ ಆರೋಪಿಗಳು ಮಹಿಳೆಯೂ ಸೇರಿದಂತೆ ಎಲ್ಲರಿಗೂ ಪರಿಚಯವಿದ್ದನು. ಕಾರ್ತಿಕ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಪೊಲೀಸರು ಈಗಾಗಲೇ ಮಹಿಳೆ ಸೇರಿದಂತೆ ಏಳು ಮಂದಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಪ್ರಾಥಮಿಕ ಮಾಹಿತಿಯಲ್ಲಿ ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದ ಗಲಾಟೆ ಕಾರಣವಾಗಿದೆ ಎಂಬ ಊಹಾಪೋಹಗಳು ಹರಡಿದ್ದರೂ, ತನಿಖೆಯ ಪ್ರಗತಿಯಲ್ಲಿ ಮಹಿಳೆ ಕುರಿತು ನಡೆದುಹೋದ ಗಲಾಟೆಯೇ ಕೊಲೆಗೆ ಕಾರಣ ಎನ್ನುವುದು ಬಹಿರಂಗವಾಗಿದೆ. ಎಸ್ಪಿ ವಿಷ್ಣುವರ್ಧನ್ ಈ ಕುರಿತು ಮಾತನಾಡುತ್ತಾ, “ಪ್ರವೀಣ್ ಎಂಬಾತ ತನ್ನ ಮೇಲೆ ಕಾರ್ತಿಕ್ ಕೊಲೆ ಬೆದರಿಕೆ ಹಾಕಿದ್ದನೆಂದು ಹೇಳಿದ್ದ. ಈ ಕಾರಣದಿಂದಲೇ ಆತ ತನ್ನ ಗೆಳೆಯರ ತಂಡವೊಂದನ್ನು ಸೇರಿಸಿಕೊಂಡು ಕಾರ್ತಿಕ್ನನ್ನು ಕೊಲೆ ಮಾಡಿದ” ಎಂದು ವಿವರಿಸಿದರು.
ಕಾರ್ತಿಕ್ ಹಾಗೂ ಆರೋಪಿಗಳು ಪರಸ್ಪರ ಪರಿಚಿತರಾಗಿದ್ದು, ಅವರು ಎಲ್ಲರೂ ಹಿಂದಿನಿಂದ ವ್ಯಕ್ತಿಗತ ದ್ವೇಷವನ್ನಿಟ್ಟುಕೊಂಡಿದ್ದರು ಎಂಬ ಮಾಹಿತಿಯು ಹೊರಬಂದಿದೆ. ಯಥಾಸ್ಥಿತಿಯಲ್ಲಿ ತೋರುತ್ತಿದ್ದ ಸಂಬಂಧಗಳು ಕೊನೆಗೆ ಹಿಂಸಾತ್ಮಕಕ್ಕೆ ಕಾರಣವಾಗಿದ್ದು, ತೀವ್ರ ಚರ್ಚೆಗೆ ಗ್ರಾಸವಾಗಿದೆ.















